ಶಿಮ್ಲಾದಲ್ಲಿ ಕಣಿವೆಗುರುಳಿದ ಬಸ್ಸು: 6 ಮಕ್ಕಳ ದುರಂತ ಸಾವು
ಶಿಮ್ಲಾ, ಜನವರಿ 05: ಶಾಲಾ ಮಕ್ಕಳನ್ನು ಹೊತ್ತ ಬಸ್ಸೊಂದು ಕಣಿಮೆಗೆ ಉರುಳಿದ ಪರಿಣಾಮ ಆರು ಮಕ್ಕಳು ಮತ್ತು ಬಸ್ಸಿನ ಚಾಲಕ ಮೃತರಾದ ದುರಂತ ಘಟನೆ ಶನಿವಾರ ಬೆಳಿಗ್ಗೆ ಹಿಮಾಚಲ ಪ್ರದೇಶದ ಶಿಮ್ಲಾ ಬಳಿ ನಡೆದಿದೆ.
ಶಿಮ್ಲಾ ಬಳಿಯ ಸಿರ್ಮೌರ್ ಜಿಲ್ಲೆಯಲ್ಲಿ ಡಿಎವಿ ಪಬ್ಲಿಕ್ ಶಾಲೆಗೆ ಮಕ್ಕಳು ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ 12 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಜಮ್ಮು-ಕಾಶ್ಮೀರದಲ್ಲಿ ಒಂದೇ ಕುಟುಂಬದ ಐವರ ಸಾವು

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಬಳಿಯ ಮನೆಯಲ್ಲಿ ಉಸಿರುಗಟ್ಟಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತರಾದ ಘಟನೆ ನಡೆದಿದೆ.
ಶ್ರೀನಗರ ಸಮೀಪದ ಬೆಮಿನಾ ಎಂಬಲ್ಲಿಯ ಮಾನ್ಸೂರ್ ಕಾಲೊನಿಯಲ್ಲಿ ಒಂದೇ ಕುಟುಂಬದ ಐವರು ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಉಸಿರುಗಟ್ಟಿದ ಪರಿಣಾಮ ಅವರು ಐವರೂ ಮೃತರಾಗಿದ್ದಾರೆಂದು ವರದಿಗಳು ತಿಳಿಸಿವೆ.












Click it and Unblock the Notifications