ಅಜಿತ್ ದೋವಲ್ ಮೇಲೆ ದಾಳಿಗೆ ಸಂಚು: ಆಘಾತಕಾರಿ ಸಂಗತಿ ಬಹಿರಂಗಪಡಿಸಿದ ಉಗ್ರ
ನವದೆಹಲಿ, ಫೆಬ್ರವರಿ 13: ಒಂದು ವಾರದ ಹಿಂದೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಬಂಧಿತನಾದ ಲಷ್ಕರ್ ಎ ಮುಸ್ತಫಾ ಉಗ್ರ ಸಂಘಟನೆಯ ಮುಖ್ಯಸ್ಥ ಹಿದಾಯತುಲ್ಲಾ ಮಲಿಕ್ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ.
ಪಾಕಿಸ್ತಾನ ಮೂಲದ ತನ್ನ ಜೈಶ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥರ ಸೂಚನೆಯಂತೆ ದೆಹಲಿಯ ಸರ್ದಾರ್ ಪಟೇಲ್ ಭವನ ಹಾಗೂ ಇತರೆ ಉನ್ನತ ಮಟ್ಟದ ಸ್ಥಳಗಳ ಮೇಲೆ ದಾಳಿ ನಡೆಸಲು ಸ್ಥಳ ಪರಿಶೀಲನೆ ನಡೆಸಿದ್ದಾಗಿ ಮಲಿಕ್ ಬಾಯ್ಬಿಟ್ಟಿದ್ದಾನೆ. ಹೀಗಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಚೇರಿ ಹಾಗೂ ನಿವಾಸದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಮಲಿಕ್ನನ್ನು ಫೆ. 6ರಂದು ಬಂಧಿಸಲಾಗಿತ್ತು. ಆತನಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧನದ ವೇಳೆ ವಾಹನವೊಂದನ್ನು ಸಹ ಮುಟ್ಟುಗೋಲು ಹಾಕಲಾಗಿತ್ತು. ಬಂಧನದ ಬಳಿಕ ನಡೆದ ವಿಚಾರಣೆಯಲ್ಲಿ ಮಲಿಕ್ ಅನೇಕ ಆಘಾತಕಾರಿ ಸಂಗತಿಗಳನ್ನು ಹೊರಹಾಕಿದ್ದಾನೆ. ತನ್ನ ಪಾಕಿಸ್ತಾನಿ ಮುಖ್ಯಸ್ಥ 'ಡಾಕ್ಟರ್' ಸೂಚನೆಯಂತೆ 2019ರ ಮೇ 25ರಂದು ದೋವಲ್ ಕಚೇರಿ ಸೇರಿದಂತೆ ನವದೆಹಲಿಯ ಅನೇಕ ಪ್ರಮುಖ ಸ್ಥಳಗಳ ವಿಡಿಯೋ ದಾಖಲಿಸಿದ್ದಾಗಿ ಮಾಹಿತಿ ನೀಡಿದ್ದಾನೆ.

ಸ್ಯಾಂಟ್ರೋ ಕಾರು ಒದಗಿಸಿದ್ದ
ಬಾನ್ ಟೋಲ್ ಪ್ಲಾಜಾ ದಾಳಿ ವೇಳೆ ಬಂಧಿತನಾದ ಮತ್ತೊಬ್ಬ ಉಗ್ರನೊಂದಿಗೆ ಸೇರಿ ಸಾಂಬಾ ಗಡಿ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದ. 2020ರ ಮೇ ತಿಂಗಳಲ್ಲಿ ದಾಳಿಯೊಂದಕ್ಕೆ ಒಬ್ಬ ಉಗ್ರನಿಗೆ ಸ್ಯಾಂಟ್ರೋ ಕಾರ್ ಒಂದನ್ನು ಕೂಡ ಮಲಿಕ್ ಒದಗಿಸಿದ್ದ ಎನ್ನುವುದು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಗೊತ್ತಾಗಿದೆ.

ಶೋಪಿಯಾನ್ನಲ್ಲಿ ಬ್ಯಾಂಕ್ ದರೋಡೆ
ಕಳೆದ ವರ್ಷದ ನವೆಂಬರ್ನಲ್ಲಿ ಶೋಪಿಯಾನ್ನಲ್ಲಿ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ನಗದು ಪೂರೈಕೆ ವಾಹನವನ್ನು ಅಡ್ಡಗಟ್ಟಿ 60 ಲಕ್ಷ ರೂ ದರೋಡೆ ಮಾಡಿದ್ದ ಪ್ರಕರಣದಲ್ಲಿ ಜೈಶ್ ಎ ಮೊಹಮ್ಮದ್ನ ಮೂವರು ಉಗ್ರರು ಭಾಗಿಯಾಗಿದ್ದರೆಂದು ಆತ ತಿಳಿಸಿದ್ದಾನೆ.

ಸಹಚರನ ಬಂಧನ
ತನ್ನ ಜತೆ ಸಂಪರ್ಕದಲ್ಲಿದ್ದ ಕನಿಷ್ಠ ಎಂಟು ಉಗ್ರ ಮಾಹಿತಿಯನ್ನು ಹೊರಗೆಡವಿದ್ದಾನೆ. ಬಿಹಾರದ ಚಾಪ್ರಾದಿಂದ ತನ್ನ ಸಹಚರನೊಬ್ಬನಿಗೆ ಏಳು ಪಿಸ್ತೂಲುಗಳನ್ನು ಆತ ಪೂರೈಸಿದ್ದ. ಆತನ ಈ ಸಹಚರ, ಶೋಪಿಯಾನ್ ನಿವಾಸಿ ಜಾನ್ ಮೊಹಮ್ಮದ್ನನ್ನು ಚಂಡೀಗಡದ ಮನೆಯಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಅಜಿತ್ ದೋವಲ್ ಮುಖ್ಯ ಗುರಿ
ಅಜಿತ್ ದೋವಲ್ ಅವರು ಪಾಕಿಸ್ತಾನದಲ್ಲಿನ ಉಗ್ರರ ಹಿಟ್ ಲಿಸ್ಟ್ನಲ್ಲಿದ್ದಾರೆ. 2016ರ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರ ಬಾಲಕೋಟ್ ವಾಯುದಾಳಿಯ ಬಳಿಕ ದೋವಲ್ ಮೇಲೆ ಕಣ್ಣಿರಿಸಿರುವ ಉಗ್ರರು, ಅವರನ್ನುಗುರಿಯಾಗಿರಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಹೀಗಾಗಿ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications