ತ್ವರಿತ ಅಲರ್ಟ್ ಗಳಿಗಾಗಿ
For Daily Alerts
"ಪಟಾಕಿ ನಿಷೇಧದಿಂದ ಹಲವರು ನಿರುದ್ಯೋಗಿಗಳಾಗಿದ್ದಾರೆ!" ಆರೆಸ್ಸೆಸ್ ಮುಖ್ಯಸ್ಥ
ನವದೆಹಲಿ, ಅಕ್ಟೋಬರ್ 19: ದೆಹಲಿಯಲ್ಲಿ ಪಟಾಕಿ ನಿಷೇಧಿಸಿರುವ ಸುಪ್ರೀ ಕೋರ್ಟ್ ಆದೇಶದ ಕುರಿತು ಪರ ವಿರೋಧ ಚರ್ಚೆ ನಡೆಯುತ್ತಲೇ ಇವೆ.
ಪರಿಸರದಷ್ಟೇ ಸಂಪ್ರದಾಯವೂ ಮುಖ್ಯ, ನಾನು ಪಟಾಕಿ ಹಚ್ಚುತ್ತೇನೆ: ಚೌಹಾಣ್
ಈ ನಿರ್ಧಾರದಿಂದ ಅಸಂಖ್ಯಾತ ಪಟಾಕಿ ತಯಾರಕರು, ಮಾರಾಟಗಾರರು ಸಂಕಷ್ಟಪಡಬೇಕಅಗುತ್ತದೆ, ಆದ್ದರಿಂದ ಸುಪ್ರೀಂ ಕೋರ್ಟ್ ಮತ್ತೊಮ್ಮೆ ತನ್ನ ನಿರ್ಧಾರವನ್ನು ಮರುಪರಿಶೀಲಿಸುವುದು ಒಳಿತು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಇಂದ್ರೇಶ್ ಕುಮಾರ್ ಹೇಳಿದರು.
ಸುಪ್ರೀಂ ಕೋರ್ಟ್ ನ ನಿರ್ಧಾರದಿಂದ ದೇಶದಲ್ಲಿರುವ ಹಲವು ಬಡವರು ನಿರುದ್ಯೋಗಿಗಳಾಗುವಂತಾಗಿದೆ. ಯಾವುದೇ ಚರ್ಚೆಯಿಲ್ಲದೆ ಏಕಾಏಕಿ ಇಂಥ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಆದ್ದರಿಂದ ಈ ವಿಷಯವನ್ನು ಇನ್ನೊಮ್ಮೆ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಪಟಾಕಿ ನಿಷೇಧಿಸುವಂತೆ ಸೆಪ್ಟೆಂಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
Comments
English summary
The Rashtriya Swayamsevak Sangh (RSS) on Oct 19th criticised the decision of the Supreme Court to ban firecrackers in the national capital and urged that the court to review its decision.
Story first published: Thursday, October 19, 2017, 15:37 [IST]