ದೂರದರ್ಶನದ ದಂತಕಥೆ ಇನ್ನಿಲ್ಲ, ಸರಳ ಮಹೇಶ್ವರಿ ಅಭಿಮಾನಿಗಳ ಕಂಬನಿ... Sarla Maheshwari
ದೂರದರ್ಶನ ಎಂಬುದು ಭಾರತೀಯರ ಭಾವನೆ ಜೊತೆಗೆ ಬೆರೆತು ಹೋಗಿದ್ದು, ಹತ್ತಾರು ವರ್ಷಗಳಿಂದಲೂ ದೂರದರ್ಶನಕ್ಕೆ ಗೌರವ ತೋರುತ್ತಾ ಹಾಗೂ ಪ್ರೀತಿ ಕೊಡುತ್ತಾ ಬಂದಿದ್ದಾರೆ ಶತಕೋಟಿ ಭಾರತೀಯರು. ಈಗಿನ ಆಧುನಿಕ ಕಾಲಘಟ್ಟದಲ್ಲಿ ಸಾವಿರಾರು ಟಿವಿ ಚಾನಲ್ ಶುರುವಾಗಿದ್ದರೂ, ಕೆಲವು ದಶಕದ ಹಿಂದೆ ಎಲ್ಲರಿಗೂ ಆಸರೆ ಆಗಿದ್ದೇ ದೂರದರ್ಶನ. ಹೀಗಿದ್ದಾಗ ದೂರದರ್ಶನ ಮೂಲಕ ವಾರ್ತೆ ಓದಲು ಬರುತ್ತಿದ್ದ ನ್ಯೂಸ್ ಆಂಕರ್ಗಳಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದರು. ಅವರನ್ನು ಜನರು ಈಗಲೂ ಮರೆತಿಲ್ಲ, ಮುಂದೆ ಕೂಡ ಮರೆಯಲ್ಲ. ಹೀಗಿದ್ದಾಗ ದೂರದರ್ಶನದ ಖ್ಯಾತ ಹಾಗೂ ಮಾಜಿ ನ್ಯೂಸ್ ಆಂಕರ್ ಕೋಟಿ ಕೋಟಿ ಅಭಿಮಾನಿಗಳನ್ನು ಇಂದು ಅಲಿದ್ದಾರೆ.
ಅದು 1976 ಅಂದರೆ ಸರಿಯಾಗಿ 40 ವರ್ಷಗಳ ಹಿಂದೆ ಜನಪ್ರಿಯ ನಿರೂಪಕಿಯೊಬ್ಬರ ಆಗಮನ ಆಗಿತ್ತು. ಆಗಿನ್ನೂ ದೂರದರ್ಶನಕ್ಕೆ ಸ್ಕ್ರಿಪ್ಟ್ ರೈಟರ್ ಆಗಿ ಎಂಟ್ರಿ ಕೊಟ್ಟವರು, ಮುಂದೆ ವಾರ್ತಾ ವಾಚಕಿ ಎಂದರೆ ನ್ಯೂಸ್ ಆಂಕರ್ ಆಗಿ ಇಡೀ ಇಂಡಿಯಾ ತಿರುಗಿ ನೋಡುವಂತೆ ಗಮನ ಸೆಳೆದರು. ಜನಪ್ರಿಯ ನಿರೂಪಕಿ ಸರಳ ಮಹೇಶ್ವರಿ ಹೀಗೆ ಸುಮಾರು 3 ದಶಕ ಎಂದರೆ, 30 ವರ್ಷಗಳ ಕಾಲ ದೂರದರ್ಶನಕ್ಕೆ ಸೇವೆ ಸಲ್ಲಿಸಿ ಭಾರತೀಯರ ಮನಸ್ಸು ಗೆದ್ದರು. ಆದರೆ ಇಂದು ಅವರು ತಮ್ಮ ಅಭಿಮಾನಿಗಳನ್ನು ಅಗಲಿದ್ದು, ನಿರೂಪಕಿ ಸರಳ ಮಹೇಶ್ವರಿ ಅವರು ಇದೀಗ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಭಾರತೀಯರ ನೆಚ್ಚಿನ ನಿರೂಪಕಿ ಸರಳ ಮಹೇಶ್ವರಿ
ದೂರದರ್ಶನ ನ್ಯೂಸ್ ಎಂದರೆ ಆಗಿನ ಕಾಲದಲ್ಲಿ ಎಲ್ಲಾ ಕೆಲಸ ಬಿಟ್ಟು ಟಿವಿ ಎದುರು ಕೂರುವ ಕೋಟಿ ಕೋಟಿ ಜನರು ಇದ್ದರು. ಏಕೆಂದರೆ ಸುದ್ದಿ ತಿಳಿಯಲು ಆಗ ಇದ್ದ ಒಂದೇ ಒಂದು ಚಾನಲ್ ಎಂದರೆ ಅದು ದೂರದರ್ಶನ ಮಾತ್ರ. ಹೀಗಿದ್ದಾಗ ದೂರದರ್ಶನದ ತೆರೆ ಮೇಲೆ ನಿರೂಪಕಿ ಸರಳ ಮಹೇಶ್ವರಿ ಅವರು ನ್ಯೂಸ್ ಓದುತ್ತಿದ್ದರೆ, ಭಾರತೀಯರು ಕಣ್ಣು ಮಿಟುಕಿಸದೆ ನೋಡುತ್ತಿದ್ದ ಸಮಯ ಇತ್ತು. ಸುದ್ದಿಗೆ ಸೊಬಗು ಮತ್ತು ಸರಳತೆ ತುಂಬುವ ಜೊತೆಯಲ್ಲೇ ಜೀವಂತಿಕೆ ಕೊಡುತ್ತಿದ್ದರು ಸರಳ ಮಹೇಶ್ವರಿ ಅವರು.
दूरदर्शन परिवार की ओर से श्रीमती सरला माहेश्वरी को भावपूर्ण श्रद्धांजलि। वह दूरदर्शन की सम्मानित और प्रतिष्ठित समाचार वाचिका थीं, जिन्होंने अपनी सौम्य आवाज़, सटीक उच्चारण और गरिमापूर्ण प्रस्तुति से भारतीय समाचार जगत में विशेष स्थान बनाया। उनकी सादगी, संयम और व्यक्तित्व ने दर्शकों… pic.twitter.com/Hx8glZI7rk
— Doordarshan National दूरदर्शन नेशनल (@DDNational) February 12, 2026
ಈ ಕಾರಣಕ್ಕೆ ಕೋಟಿ ಕೋಟಿ ಅಭಿಮಾನಿಗಳು ಅವರನ್ನು ಮೆಚ್ಚಿಕೊಂಡಿದ್ದರು. ಹಾಗೇ ಇಂದಿಗೂ ನಿರೂಪಕಿ ಸರಳ ಮಹೇಶ್ವರಿ ಅವರ ಹಳೆಯ & ನ್ಯೂಸ್ ಓದುವ ವಿಡಿಯೋಗಳು, ಆಗಾಗ ಸೋಷಿಯಲ್ ಮೀಡಿಯಾಗಳ ಮೂಲಕ ವೈರಲ್ ಆಗುತ್ತಿದ್ದವು. ಆದರೆ ಇಂದು ಅವರು ನಿಧನರಾಗಿದ್ದು ಭಾರತೀಯರು ಕಂಬನಿ ಮಿಡಿದು & ಸಂತಾಪ ಸೂಚಿಸಿದ್ದಾರೆ. ಅಲ್ಲದೇ ವಿದೇಶದಲ್ಲೂ ಅಪಾರ ಖ್ಯಾತಿ ಗಳಿಸಿರುವ ನಿರೂಪಕಿ ಸರಳ ಮಹೇಶ್ವರಿ ಅವರಿಗೆ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
I feel utmost grief in announcing the sad demise of my ex co-News anchor at Doordarshan, Sarala Maheshwari 🙏
— Shammi Narang (@iamshamminarang) February 12, 2026
She was the embodiment of grace and courtesy.
Beautiful not just in appearance but even more so at heart, she had a remarkable command over language and was a reservoir… pic.twitter.com/VIX8khALBC
ದೊಡ್ಡ ದೊಡ್ಡ ಘಟನೆಗಳ ನಿರೂಪಣೆ
ನಿರೂಪಕಿ ಸರಳ ಮಹೇಶ್ವರಿ ಅವರು ಭಾರತೀಯ ರಾಜಕೀಯ ಸೇರಿದಂತೆ ಹಲವು ಪ್ರಮುಖ ಘಟನೆಗಳನ್ನ ನಿರೂಪಣೆ ಮಾಡಿದ್ದರು. 1991ರ ಸಮಯದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಬಗ್ಗೆ ಬಂದ ಆಘಾತಕಾರಿ ಸುದ್ದಿಯನ್ನು ಪ್ರಕಟಿಸಿದ್ದು, ಇದರ ಜೊತೆಗೆ 1997ರ ಸಮಯದಲ್ಲಿ ಮದರ್ ತೆರೇಸಾ ಅವರ ಅಂತ್ಯಕ್ರಿಯೆ ಸುದ್ದಿ ನಿರೂಪಣೆ ಕೂಡ ಪ್ರಮುಖ ಘಟನೆಗಳಲ್ಲಿ ಸೇರಿವೆ. 1984ರಲ್ಲಿ ಅವರು ಮದುವೆಯನ್ನ ಕೂಡ ಆಗಿದ್ದರು, ಬಿಬಿಸಿ ವಾಹಿನಿಗೆ ಕೂಡ ಕೆಲಸ ಮಾಡಿದ ಅನುಭವ ಅವರಿಗೆ ಇತ್ತು. 1988ರ ಸಮಯಕ್ಕೆ ಮತ್ತೆ ಅವರು ದೂರದರ್ಶನಕ್ಕೆ ಮರಳಿ ಸೇವೆ ಆರಂಭಿಸಿ 2005 ತನಕವೂ ಸೇವೆ ಸಲ್ಲಿಸಿ ಆ ನಂತರ ಕುಟುಂಬದ ಜೊತೆಗೆ ಸಮಯ ಕಳೆಯಲು ರಾಜೀನಾಮೆ ನೀಡಿದ್ದರು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications