ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಖ್ ಹತ್ಯಾಕಾಂಡ ಕುರಿತ ಹೇಳಿಕೆ: ಸ್ಯಾಮ್ ಪಿತ್ರೋಡಾ ಕ್ಷಮೆ ಯಾಚನೆ

|
Google Oneindia Kannada News

ಶಿಮ್ಲಾ, ಮೇ 10: ಸಿಖ್ ಹತ್ಯಾಕಾಂಡ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಕ್ಷಮೆ ಯಾಚಿಸಿದ್ದಾರೆ.

ಸ್ಯಾಮ್ ಪಿತ್ರೋಡಾ ಕಾಂಗ್ರೆಸ್‌ನ ಮಣಿ ಶಂಕರ್ ಅಯ್ಯರ್‌ ಆಗುತ್ತಿದ್ದಾರಾ?ಸ್ಯಾಮ್ ಪಿತ್ರೋಡಾ ಕಾಂಗ್ರೆಸ್‌ನ ಮಣಿ ಶಂಕರ್ ಅಯ್ಯರ್‌ ಆಗುತ್ತಿದ್ದಾರಾ?

1984ರ ಸಿಖ್ಖರ ಹತ್ಯಾಕಾಂಡದ ಕುರಿತು ಮಾತನಾಡಿದ್ದ ಸ್ಯಾಮ್, 'ಆಗಿದ್ದು ಆಗಿಹೋಯ್ತು, ಏನಿವಾಗ' ಎಂದು ಹೇಳಿಕೆ ನೀಡಿದ್ದರು. ಇದು ಭಾರಿ ವಿರೋಧಕ್ಕೆ ಕಾರಣವಾಗಿತ್ತು.

ಸ್ಯಾಮ್ ಪಿತ್ರೋಡಾ ಹೇಳಿಕೆಗೂ ತನಗೂ ಸಂಬಂಧವಿಲ್ಲ ಎಂದ ಕಾಂಗ್ರೆಸ್ಸ್ಯಾಮ್ ಪಿತ್ರೋಡಾ ಹೇಳಿಕೆಗೂ ತನಗೂ ಸಂಬಂಧವಿಲ್ಲ ಎಂದ ಕಾಂಗ್ರೆಸ್

ಇದಕ್ಕೆ ಕ್ಷಮೆ ಕೋರಿರುವ ಪಿತ್ರೋಡಾ ಅದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. 'ನನ್ನ ಮಾತುಗಳನ್ನು ಸಂಪೂರ್ಣವಾಗಿ ತಿರುಚಲಾಗಿದೆ. ನನಗೆ ಹಿಂದಿ ಸರಿಯಾಗಿ ಮಾತನಾಡಲು ಬರುವುದಿಲ್ಲ. ನಾನು ಹೇಳಲು ಹೊರಟಿದ್ದು, ಅಲ್ಲಿ ಏನಾಗಿದೆಯೋ ಅದು ಖಂಡನೀಯ (ಜೋ ಹುವಾ ವೋ ಬುರಾ ಹುವಾ) ಎಂದು. ಆದರೆ, ನನಗೆ ಬುರಾ (ಕೆಟ್ಟದ್ದು) ಅನ್ನು ಸರಿಯಾಗಿ ಅನುವಾದಿಸಲು ಬಂದಿರಲಿಲ್ಲ' ಎಂದು ಹೇಳಿದ್ದಾರೆ.

Sam pitroda apologises on his remarks hua tho hua 1984 Anti Sikh riots

'ನಾನು ಹೇಳಿದ್ದು ಇದನ್ನು ಬಿಟ್ಟು ನಾವು ಮುಂದೆ ಹೋಗಬೇಕು ಎಂದು. ಬಿಜೆಪಿ ಸರ್ಕಾರ ಏನು ಹೇಳಿತ್ತು, ಏನು ನೀಡುತ್ತಿದೆ ಮುಂತಾದ ಇತರೆ ಚರ್ಚಾಸ್ಪದ ವಿಚಾರಗಳಿವೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿರುವುದಕ್ಕೆ ಬೇಸರವಾಗುತ್ತಿದೆ. ನಾನು ಕ್ಷಮೆ ಕೋರುತ್ತೇನೆ' ಎಂದು ಪಿತ್ರೋಡಾ ಸ್ಪಷ್ಟನೆ ನೀಡಿದ್ದಾರೆ.

'ಹುವಾ ತೋ ಹುವಾ' ಎಂದ ಸ್ಯಾಮ್ ಪಿತ್ರೋಡಾಗೆ ಪಂಚ್ ನೀಡಿದ ಮೋದಿ 'ಹುವಾ ತೋ ಹುವಾ' ಎಂದ ಸ್ಯಾಮ್ ಪಿತ್ರೋಡಾಗೆ ಪಂಚ್ ನೀಡಿದ ಮೋದಿ

ಸಿಖ್ ಹತ್ಯಾಕಾಂಡದ ಬಗ್ಗೆ ಮಾತನಾಡಿದ್ದ ಪಿತ್ರೋಡಾ, 'ಹುವಾ ತೋ ಹುವಾ' ಎಂದು ಹೇಳಿದ್ದರು ಎಂದು ಆರೋಪಿಸಲಾಗಿತ್ತು.

English summary
Congress leader Sam Pitroda apologised for his remarks on 1984 Anti-Sikh riots, said his statement was completely twisted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X