Sabarimala Pilgrimage: ಶಬರಿಮಲೆಯಲ್ಲಿ ಭಕ್ತರಿಗೆ ವಂಚಿಸಿದ ವ್ಯಾಪಾರಿಗಳು.. 26 ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ!
ಶಬರಿಮಲೆ ಡಿಸೆಂಬರ್ 1: ಶಬರಿಮಲೆ ಸೀಸನ್ ಆರಂಭವಾಗಿದೆ. ಹೀಗಾಗಿ ಅಯ್ಯಪ್ಪನ ದರ್ಶನ ಪಡೆಯಲು ಶಬರಿಮಲೆಯದತ್ತ ಭಕ್ತ ಸಾಗರವೇ ಹರಿದು ಬರುತ್ತಿದೆ. ಆದರೆ ಶಬರಿಮಲೆ ಋತುವಿನ ಲಾಭ ಪಡೆದ ಕೆಲ ವ್ಯಾಪಾರಿಗಳು ಭಕ್ತರನ್ನು ವಂಚಿಸುತ್ತಿದ್ದಾರೆ.
ಹೌದು... ಶಬರಿಮಲೆ ಸನ್ನಿಧಾನದಿಂದ ಅಪಾಚೆ ಮೇಡುವರೆಗೆ ಅಂಗಡಿಕಾರರು ಅಯ್ಯಪ್ಪ ಭಕ್ತರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ 26 ಅಂಗಡಿಗಳಿಗೆ ದಂಡ ವಿಧಿಸಿದ್ದಾರೆ.

ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಅಯ್ಯಪ್ಪ ಭಕ್ತರು ಮಾಲೆ ಧರಿಸಿ ಉಪವಾಸ ಆರಂಭಿಸುತ್ತಾರೆ. ಇದರಿಂದ ಶಬರಿಮಲೆ ದೇಗುಲ ತೆರೆಯಲಾಗಿದ್ದು, ನಿತ್ಯ ಪೂಜೆಗಳು ನಡೆಯುತ್ತಿವೆ. ಸತತ 41 ದಿನಗಳ ಕಾಲ ಪೂಜೆಗಳು ನಡೆಯಲಿದ್ದು, ಡಿ.27ರಂದು ಅಯ್ಯಪ್ಪನಿಗೆ ಮಂಡಲಪೂಜೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಭಕ್ತರು ಶಬರಿಮಲೆಗೆ ತೆರಳಲು ಆರಂಭಿಸಿದ್ದಾರೆ.
ಇದರಿಂದಾಗಿ ಈ ವರ್ಷವೂ ಶಬರಿಮಲೆ ಸೀಸನ್ ನಲ್ಲಿ ವ್ಯಾಪಾರ ಜೋರಾಗಿದೆ. ಈ ವೇಳೆ ಕೆಲ ವ್ಯಾಪಾರಿಗಳು ಶಬರಿಮಲೆ ಋತುವಿನ ಲಾಭ ಪಡೆದು ಭಕ್ತರನ್ನು ವಂಚಿಸುತ್ತಿದ್ದಾರೆ ಎಂದು ಕೇರಳ ಆಹಾರ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರುಗಳು ಬಂದಿದ್ದು. ಈ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅದೇನೆಂದರೆ ಶಬರಿಮಲೆ ಸನ್ನಿಧಾನದಿಂದ ಅಪಾಚೆ ಮೇಡುವರೆಗೆ ನಡೆಯುತ್ತಿರುವ ರೆಸ್ಟೋರೆಂಟ್ಗಳು, ಟೀ ಅಂಗಡಿಗಳು, ಹಣ್ಣಿನ ಜ್ಯೂಸ್ ಅಂಗಡಿಗಳನ್ನು ಪ್ರವೇಶಿಸಿ ಅಲ್ಲಿರುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು. ಆಗ ಹಲವು ಅಂಗಡಿಗಳು ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಕಳಪೆ ಗುಣಮಟ್ಟದ ಆಹಾರ ತಯಾರಿಸಿ ಮಾರಾಟ ಮಾಡುವುದು, ಆಹಾರ ಪೊಟ್ಟಣಗಳ ಮೇಲೆ ಉತ್ಪಾದನಾ ದಿನಾಂಕ ನಮೂದಿಸದಿರುವುದು, ನಿಗದಿತ ತೂಕದ ಆಹಾರ ಮಾರಾಟ ಸೇರಿದಂತೆ ಹಲವು ನಿಯಮಗಳನ್ನು ಅಂಗಡಿಗಳು ಪಾಲಿಸದಿರುವುದು ಕಂಡು ಬಂದಿದೆ.

ಈ ಮೂಲಕ ಒಟ್ಟು 26 ಅಂಗಡಿಗಳು ನಿಯಮ ಉಲ್ಲಂಘಿಸಿ ಭಕ್ತರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ ಈ ಅಂಗಡಿಗಳಿಗೆ ಪ್ರತ್ಯೇಕವಾಗಿ ದಂಡ ವಿಧಿಸಲಾಗಿದೆ. ಇದರ ಪ್ರಕಾರ 26 ಅಂಗಡಿಗಳಿಂದ 1 ಲಕ್ಷದ 71 ಸಾವಿರ ರೂಪಾಯಿ ದಂಡ ಪಡೆಯಲಾಗಿದೆ.
ಶಬರಿಮಲೆ ಸೀಸನ್
ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಸಾಸ್ತಾ ದೇವಾಲಯಗಳಲ್ಲಿ ಒಂದಾದ ಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲದ ಗರ್ಭಗುಡಿ ತೆರೆದಿದೆ. ಈ ಮೂಲಕ ಶಬರಿಮಲೆ ಸೀಸನ್ ಆರಂಭವಾಗಿದೆ. ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ಶಬರಿಮಲೆ ಯಾತ್ರೆ ಕೈಗೊಳ್ಳುವವರು ಕಟ್ಟುನಿಟ್ಟಾದ ಸಂಪ್ರದಾಯವನ್ನು ಹಲವು ದಿನಗಳ ಮೊದಲೇ ಪಾಲಿಸಿಕೊಂಡು ಬರುತ್ತಾರೆ. ಸಾಕಷ್ಟು ಭಕ್ತರು ಮನೆಯಿಂದ ದೂರವುಳಿದು ಸ್ವತ: ಅಡುಗೆ ಮಾಡಿಕೊಳ್ಳುತ್ತಾರೆ. ದುಶ್ಚಟಗಳಿಂದಲೂ ದೂರ ಇರುತ್ತಾರೆ. ಮಡಿಮೈಲಿಗೆಯನ್ನು ಎಚ್ಚರಿಕೆಯಿಂದ ಪಾಲಿಸುತ್ತಾರೆ. ಬಳಿಕ ಕೋಟ್ಯಾನುಕೋಟಿ ಭಕ್ತರು ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ.
41 ದಿನ ಕಠಿಣ ವ್ರತವನ್ನು ಮಾಡಿ ಶಬರಿಮಲೆಯಕ್ಕೆ ಭೇಟಿ ನೀಡುವ ಭಕ್ತರು ಈ ಸಮಯದಲ್ಲಿ ಕ್ಷೌರ, ಅಸಭ್ಯ ಭಾಷೆ ಬಳಕೆ, ತಂಬಾಕು ಅಥವಾ ಮದ್ಯ ಸೇವನೆ ಸೇರಿದಂತೆ ದುರ್ವಾಸೆಯಿಂದ ದೂರವಿರುತ್ತಾರೆ. ಭಕ್ತರು ಕಪ್ಪು, ಕೇಸರಿ ಅಥವಾ ಸರಳ ನೀಲಿ ಬಟ್ಟೆಗಳನ್ನು ಧರಿಸುತ್ತಾರೆ. ಹೀಗೆ ಕಟ್ಟುನಿಟ್ಟಾಗಿ ಭಕ್ತರು ನಿಯಮಗಳನ್ನು ಪಾಲಿಸುತ್ತಾರೆ. ಹೀಗಿರುವಾಗ ಹಣದ ಆಸೆಗೆ ಕೆಲ ವ್ಯಾಪಾರಿಗಳು ಕಳಪೆ ಗುಣಮಟ್ಟದ ಆಹಾರ ನೀಡಿ ಭಕ್ತರಿಗೆ ವಂಚಿಸಿದ್ದು ಬೇಸರ ತಂದಿದೆ. ಇದರಿಂದಾಗಿ ಈ ಬಗ್ಗೆ ಭಕ್ತರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.












Click it and Unblock the Notifications