ಗಣರಾಜ್ಯೋತ್ಸವ ಪರೇಡ್; ವಾಯುಪಡೆಯಿಂದ ಈ ಬಾರಿ ಎರಡು ವಿಶೇಷಗಳು
ನವದೆಹಲಿ, ಜನವರಿ 19: ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ವಾಯುಪಡೆಯಿಂದ ಈ ಬಾರಿ ಎರಡು ವಿಶೇಷಗಳು ಇರುವುದಾಗಿ ಭಾರತೀಯ ವಾಯುಪಡೆ ತಿಳಿಸಿದೆ. ಈಚೆಗೆ ವಾಯುಪಡೆಗೆ ಸೇರ್ಪಡೆಯಾಗಿರುವ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಗಣರಾಜ್ಯೋತ್ಸವದಲ್ಲಿ ಭಾಗವಹಿಸುತ್ತಿರುವುದು ಒಂದು ವಿಶೇಷವಾದರೆ, ಮೊದಲ "ಮಹಿಳಾ ಫೈಟರ್ ಪೈಲಟ್" ಭಾಗವಹಿಸುತ್ತಿರುವುದು ಎರಡನೇ ವಿಶೇಷವಾಗಿದೆ.
ಕೊರೊನಾ ನಡುವೆ ಈ ಬಾರಿ ಗಣರಾಜ್ಯೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದ್ದು, ಸೇನಾ ಪಡೆಗಳು ತಾಲೀಮಿನಲ್ಲಿ ತೊಡಗಿಕೊಂಡಿವೆ. ವಾಯುಪಡೆಯಿಂದಲೂ ಪರೇಡ್ ನಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
"ಗಣರಾಜ್ಯೋತ್ಸವದಲ್ಲಿ ರಫೇಲ್ ಯುದ್ಧ ವಿಮಾನ ಭಾಗವಹಿಸಲಿದೆ. ಭಾರತೀಯ ವಾಯುಸೇನೆಯ ಶಕ್ತಿ ಪ್ರದರ್ಶನಕ್ಕೆ ಗಣರಾಜ್ಯೋತ್ಸವ ವೇದಿಕೆಯಾಗಲಿದೆ. ಈ ರಫೇಲ್ ಯುದ್ಧ ವಿಮಾನ "ವರ್ಟಿಕಲ್ ಚಾರ್ಲಿ" ರಚನೆ ಮಾಡಲಿದೆ" ಎಂದು ಐಎಎಫ್ ವಕ್ತಾರ, ವಿಂಗ್ ಕಮಾಂಡ್ ಇಂದ್ರಾನಿಲ್ ನಂದಿ ತಿಳಿಸಿದ್ದಾರೆ.

ಲೆಫ್ಟಿನೆಂಟ್ ಭಾವನಾ ಕಾಂತ್ ಅವರು ಗಣರಾಜ್ಯೋತ್ಸವದ ಭಾಗವಾಗಿದ್ದು, ಪರೇಡ್ ನಲ್ಲಿ ಭಾಗವಹಿಸುತ್ತಿರುವ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2016ರಲ್ಲಿ ವಾಯುಪಡೆ ಸೇರ್ಪಡೆಯಾಗಿದ್ದ ಮೂವರು ಮಹಿಳಾ ಫೈಟರ್ ಪೈಲಟ್ ಗಳಲ್ಲಿ ಭಾವನಾ ಕಾಂತ್ ಒಬ್ಬರಾಗಿದ್ದರು. ಈ ಬಾರಿ ಗಣರಾಜ್ಯೋತ್ಸವದಲ್ಲಿ ಇವರು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಎಲ್ ಸಿಎ ತೇಜಸ್, ಲೈಟ್ ಕಾಂಬಾಟ್ ಹೆಲಿಕಾಪ್ಟರ್, ರೋಹಿಣಿ ರಾಡರ್, ಆಕಾಶ್ ಮಿಸೆಲಿ, ಸುಖಿಯೋ 30ಎಂಕೆಐನ ಭಾಗವಾಗಲಿದ್ದಾರೆ.
ಒಟ್ಟು 38 ಭಾರತೀಯ ವಿಮಾನಗಳು ಈ ಪರೇಡ್ ನಲ್ಲಿ ಭಾಗವಹಿಸಲಿವೆ. ಹಂತಹಂತಗಳಲ್ಲಿ ವಿಮಾನಗಳ ಪರೇಡ್ ನಿಗದಿಪಡಿಸಲಾಗಿದ್ದು, ಮೊದಲ ಹಂತದಲ್ಲಿ ಮೂರು ರಚನೆಗಳು ಇರಲಿವೆ. ಮೊದಲು "ನಿಶಾನ್" ರಚನೆಯಿದ್ದು, ಅದರಲ್ಲಿ Mi17V5 ವಿಮಾನಗಳು ಇರಲಿವೆ. ನಂತರ "ಧ್ರುವ" ರಚನೆಯಿದ್ದು, ಆರ್ಮಿ ಏವಿಯೇಷನ್ ಕಾರ್ಪ್ಸ್ ನ ನಾಲ್ಕು ಹೆಲಿಕಾಪ್ಟರ್ ಗಳು ಭಾಗವಹಿಸಲಿವೆ. ಅಂತಿಮವಾಗಿ "ರುದ್ರ" ರಚನೆಯಲ್ಲಿ ಒಂದು ಡಾಕೋಟಾ ವಿಮಾನವಿದ್ದು, ಎರಡು Mi17V5 ಹೆಲಿಕಾಪ್ಟರ್ ಗಳು ಇದಕ್ಕೆ ಜೊತೆಯಾಗಲಿವೆ.
ಎರಡನೇ ಹಂತ ಒಂಬತ್ತು ರಚನೆಗಳನ್ನು ಒಳಗೊಂಡಿದ್ದು, ಸುದರ್ಶನ, ರಕ್ಷಕ್, ಭೀಮ್, ನೇತ್ರಾ, ಗರುಡಾ, ಏಕಲವ್ಯ, ತ್ರಿನೇತ್ರ, ವಿಜಯ್ ಹಾಗೂ ಬ್ರಹ್ಮಾಸ್ತ ರಚನೆಗಳನ್ನು ಒಳಗೊಂಡಿದೆ. ಒಂದು ರಫೇಲ್ ಜೊತೆ ಎರಡು ಜಾಗ್ವಾರ್ ಹಾಗೂ ಮಿಗ್ 29 ವಿಮಾನಗಳು ಏಕಲವ್ಯ ರಚನೆ ಮಾಡಲಿವೆ ಎಂದು ವಿಂಗ್ ಕಮಾಂಡರ್ ತೇಜ್ ಪ್ರತಾಪ್ ಪಾಂಡೆ ತಿಳಿಸಿದ್ದಾರೆ. ಭಾರತೀಯ ವಾಯುಸೇನೆಯಿಂದ ಪರೇಡ್ ಇದ್ದು, ಅದರಲ್ಲಿ ನಾಲ್ಕು ಅಧಿಕಾರಿಗಳನ್ನೊಳಗೊಂಡ 96 ಯೋಧರು ಭಾಗವಹಿಸಲಿದ್ದಾರೆ ಎಂದು ವಿಂಗ್ ಕಮಾಂಡರ್ ವಾಸುದೇವ್ ಅಹುಜಾ ತಿಳಿಸಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications