ರಾಜಸ್ಥಾನ: ನದಿಗೆ ಉರುಳಿ ಬಿದ್ದ ಬಸ್, 30 ಸಾವು, ಹಲವರಿಗೆ ಗಾಯ
ದುಬಿ (ರಾಜಸ್ಥಾನ), ಡಿಸೆಂಬರ್ 23: ಸೇತುವೆ ಮೇಲಿಂದ ಬಸ್ ವೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 30 ಜನ ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿರುವ ಭೀಕರ ದುರಂತ ರಾಜಸ್ಥಾನದ ಸವೈ ಮಧೋಪುರ್ ಜಿಲ್ಲೆಯ ದುಬಿಯಲ್ಲಿ ಶನಿವಾರ ನಡೆದಿದೆ.
Rajasthan: Total 26 bodies have been recovered so far. Rescue operation is underway to find any survivors: Subhash Mishra, CO, City on bus accident in Sawai Madhopur's Dubi pic.twitter.com/x8QCCTFED6
— ANI (@ANI) December 23, 2017
ಶನಿವಾರ ಬೆಳಗ್ಗೆ ಸವೈ ಮಧೋಪುರ್ ಜಿಲ್ಲೆಯ ದುಬಿಯ ಬಳಿ ಇರುವ ಬನಸ್ ನದಿ ಸೇತುವೆ ಮೇಲೆ ಚಲಿಸುತ್ತಿದ್ದ ಬಸ್ ಏಕಾಏಕರಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿದೆ.

Rajasthan: #Visuals from the site of accident in Dubi, Sawai Madhopur ; 12 people dead, 24 injured after a bus carrying passengers fell of a bridge into a river pic.twitter.com/7pruEkOjmc
— ANI (@ANI) December 23, 2017
ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ ಈಗಾಗಲೇ ಮೂವತ್ತು ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ದುರಂತದಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.












Click it and Unblock the Notifications