ರಾಜಸ್ಥಾನ: ನದಿಗೆ ಉರುಳಿ ಬಿದ್ದ ಬಸ್, 30 ಸಾವು, ಹಲವರಿಗೆ ಗಾಯ
ದುಬಿ (ರಾಜಸ್ಥಾನ), ಡಿಸೆಂಬರ್ 23: ಸೇತುವೆ ಮೇಲಿಂದ ಬಸ್ ವೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 30 ಜನ ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿರುವ ಭೀಕರ ದುರಂತ ರಾಜಸ್ಥಾನದ ಸವೈ ಮಧೋಪುರ್ ಜಿಲ್ಲೆಯ ದುಬಿಯಲ್ಲಿ ಶನಿವಾರ ನಡೆದಿದೆ.
Rajasthan: Total 26 bodies have been recovered so far. Rescue operation is underway to find any survivors: Subhash Mishra, CO, City on bus accident in Sawai Madhopur's Dubi pic.twitter.com/x8QCCTFED6
— ANI (@ANI) December 23, 2017
ಶನಿವಾರ ಬೆಳಗ್ಗೆ ಸವೈ ಮಧೋಪುರ್ ಜಿಲ್ಲೆಯ ದುಬಿಯ ಬಳಿ ಇರುವ ಬನಸ್ ನದಿ ಸೇತುವೆ ಮೇಲೆ ಚಲಿಸುತ್ತಿದ್ದ ಬಸ್ ಏಕಾಏಕರಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿದೆ.
Rajasthan: #Visuals from the site of accident in Dubi, Sawai Madhopur ; 12 people dead, 24 injured after a bus carrying passengers fell of a bridge into a river pic.twitter.com/7pruEkOjmc
— ANI (@ANI) December 23, 2017
ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ ಈಗಾಗಲೇ ಮೂವತ್ತು ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ದುರಂತದಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.