"ರಾಹುಲ್ ಗಾಂಧಿಗೆ ಚುನಾವಣೆ ಸಮಯದಲ್ಲಿ ದೇವಾಲಯ ನೆನಪಾಗುತ್ತೆ"
ಅಹ್ಮದಾಬಾದ್, ನವೆಂಬರ್ 13: ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುವ ಮನಸ್ಸು ಸಹಜವಾಗಿ ಮೂಡಬೇಕು, ಚುನಾವಣೆಯ ಸಮಯದಲ್ಲಿ ಮಾತ್ರ ಇದ್ದಕ್ಕಿದ್ದಂತೆ ಸೃಷ್ಟಿಯಾಗಬಾರದು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭುಪೇಂದರ್ ಯಾದವ್, ರಾಹುಲ್ ಗಾಂಧಿಯವರಿಗೆ ವ್ಯಂಗ್ಯವಾಗಿ ಕುಟುಕಿದರು.

ಗುಜರಾತಿನಲ್ಲಿ ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾರೀ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಹಲವು ದೇವಾಲಯಗಳಿಗೂ ತೆರಳಿ ಹಿಂದುಗಳ ಮನವೊಲಿಸುವ ಪ್ರಯತ್ನ ಮಾಡಿದರು.

ಈ ಕುರಿತು ಅಹ್ಮದಾಬಾದಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭುಪೇಂದರ್ ಸಿಂಗ್, ರಾಹುಲ್ ಗಾಂಧಿ ದೇವಾಲಯಕ್ಕೆ ಭೇಟ ನೀಡುವುದು ಮತ್ತು ಪೂಜೆ ಮಾಡುವುದು ನಿಜಕ್ಕೂ ಸಂತಸದ ಸಂಗತಿ. ಏಕೆಂದರೆ ಇವೆಲ್ಲ ಭಾರತೀಯ ಸಂಸ್ಕೃತಿಯ ಭಾಗಗಳು. ಆದರೆ ಈ ಭಕ್ತಿಯೆಲ್ಲ ಸಹಜವಾಗಿಯೇ ಮೂಡಬೇಕು, ಕೇವಲ ಚುನಾವಣೆ ಹತ್ತಿರ ಬಂದಾಗ ಮಾತ್ರವಲ್ಲ ಎಂದರು.












Click it and Unblock the Notifications