"ರಾಹುಲ್ ಗಾಂಧಿಗೆ ಚುನಾವಣೆ ಸಮಯದಲ್ಲಿ ದೇವಾಲಯ ನೆನಪಾಗುತ್ತೆ"
ಅಹ್ಮದಾಬಾದ್, ನವೆಂಬರ್ 13: ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುವ ಮನಸ್ಸು ಸಹಜವಾಗಿ ಮೂಡಬೇಕು, ಚುನಾವಣೆಯ ಸಮಯದಲ್ಲಿ ಮಾತ್ರ ಇದ್ದಕ್ಕಿದ್ದಂತೆ ಸೃಷ್ಟಿಯಾಗಬಾರದು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭುಪೇಂದರ್ ಯಾದವ್, ರಾಹುಲ್ ಗಾಂಧಿಯವರಿಗೆ ವ್ಯಂಗ್ಯವಾಗಿ ಕುಟುಕಿದರು.
ಇಲ್ಲಿ ಕಿರೀಟ ಧರಿಸೋದು ಜರೂರತ್ತು, ಅಲ್ಲಿ ಬದುಕು ಉಳಿಸೋಕೆ ಕಸರತ್ತು!
ಗುಜರಾತಿನಲ್ಲಿ ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾರೀ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಹಲವು ದೇವಾಲಯಗಳಿಗೂ ತೆರಳಿ ಹಿಂದುಗಳ ಮನವೊಲಿಸುವ ಪ್ರಯತ್ನ ಮಾಡಿದರು.
ಜಿಎಸ್ಟಿ : ರಾಹುಲ್ ಮೂರು ಅತ್ಯಮೂಲ್ಯ ಉಪದೇಶಗಳು
ಈ ಕುರಿತು ಅಹ್ಮದಾಬಾದಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭುಪೇಂದರ್ ಸಿಂಗ್, ರಾಹುಲ್ ಗಾಂಧಿ ದೇವಾಲಯಕ್ಕೆ ಭೇಟ ನೀಡುವುದು ಮತ್ತು ಪೂಜೆ ಮಾಡುವುದು ನಿಜಕ್ಕೂ ಸಂತಸದ ಸಂಗತಿ. ಏಕೆಂದರೆ ಇವೆಲ್ಲ ಭಾರತೀಯ ಸಂಸ್ಕೃತಿಯ ಭಾಗಗಳು. ಆದರೆ ಈ ಭಕ್ತಿಯೆಲ್ಲ ಸಹಜವಾಗಿಯೇ ಮೂಡಬೇಕು, ಕೇವಲ ಚುನಾವಣೆ ಹತ್ತಿರ ಬಂದಾಗ ಮಾತ್ರವಲ್ಲ ಎಂದರು.