Get Updates
Get notified of breaking news, exclusive insights, and must-see stories!

ಹಬ್ಬದಲ್ಲಿ ರಾಹುಲ್ ಗಾಂಧಿ, ತೇಜಸ್ವಿ ಯಾದವ್‌ ಕುರಿ, ಮೀನು ತಿಂತಾರೆ- ಮೋದಿ ದಾಳಿ

ದೆಹಲಿ ಏಪ್ರಿಲ್ 12: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಗುದ್ದಾಟ ಶುರುವಾಗಿದೆ. ಹಬ್ಬಗಳ ಸಂದರ್ಭದಲ್ಲಿ ಮಾಂಸಾಹಾರ ಸೇವನೆಯ ಬಗ್ಗೆ ವಾದ ವಿವಾದ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕರು ಹಬ್ಬಗಳ ಸಂದರ್ಭದಲ್ಲಿ ಮಾಂಸಾಹಾರವನ್ನು ಸೇವಿಸುತ್ತಾರೆ. ಇದು ಯಾವ ಸಂದೇಶವನ್ನು ರವಾನಿಸುತ್ತದೆ? ಯಾರನ್ನು ಮೆಚ್ಚಿಸಲಾಗಿ ಈ ವಿಡಿಯೋಗಳನ್ನು ಮಾಡಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ನವರಾತ್ರಿ ವೇಳೆ ಮೀನು ತಿಂದಿರುವ ವಿಡಿಯೋ ವೈರಲ್‌ ಆಗಿರುವ ವಿಚಾರ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವಿಚಾರದಲ್ಲಿ ಬಿಜೆಪಿ ಆರ್‌ಜೆಡಿ ಮತ್ತು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇಂದು ಜಮ್ಮು-ಕಾಶ್ಮೀರದ ಉಧಮ್‌ಪುರದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಆಕ್ರೋಶಗೊಂಡರು.

Rahul Gandhi and Tejashwi Yadav eating meat at the festival - Modi attacked

ಪ್ರಧಾನಿ ಮೋದಿ ಚುನಾವಣಾ ರ್‍ಯಾಲಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಲಾಲು ಯಾದವ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿ ಹಬ್ಬಗಳ ಸಮಯದಲ್ಲಿ ಮಾಂಸಾಹಾರ ತಿನ್ನುವುದರ ವಿರುದ್ಧ ಟೀಕಿಸಿದ್ದಾರೆ. ರಾಹುಲ್‌ ಹೆಸರು ಹೇಳದೆ ಪ್ರಧಾನಿ ಮೋದಿ, ಶ್ರಾವಣ ಮಾಸದಲ್ಲಿ ಶಿಕ್ಷೆಗೊಳಗಾದ ಅಪರಾಧಿಯ ಮನೆಗೆ ಭೇಟಿ ನೀಡಿ ಕುರಿ ಮಾಂಸ ತಿನ್ನುತ್ತಾರೆ. ಈ ಜನರು ಇದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಾರೆ ಎಂದು ಪರೋಕ್ಷವಾಗಿ ಗುಡುಗಿದ್ದಾರೆ.

ಮುಂದುವರೆದು ಮಾತನಾಡಿದ ಮೋದಿ ಅವರು, 'ಮೋದಿ ಯಾರೂ ಏನನ್ನೂ ತಿನ್ನುವುದನ್ನು ತಡೆಯುವುದಿಲ್ಲ. ತಮಗೆ ಬೇಕೆನಿಸಿದಾಗ ವೆಜ್ ಅಥವಾ ನಾನ್ ವೆಜ್ ತಿನ್ನುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಇಂತಹ ವಿಡಿಯೋ ಮಾಡಿ ದೇಶದ ಜನರನ್ನು ತೆಗಳುವುದು ಇವರ ಉದ್ದೇಶವಾಗಿದೆ' ಎಂದರು.

ಕಾಂಗ್ರೆಸ್ ಯಾರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದೆ?-ಮೋದಿ ಪ್ರಶ್ನೆ

ತೇಜಸ್ವಿ ಯಾದವ್ ಅವರನ್ನು ಗುರಿಯಾಗಿಟ್ಟುಕೊಂಡ ಪ್ರಧಾನಿ ಮೋದಿ, 'ನವರಾತ್ರಿಯಲ್ಲಿ ಮಾಂಸಾಹಾರಿ ಆಹಾರ ಸೇವನೆಯ ವೀಡಿಯೊಗಳನ್ನು ಪ್ರದರ್ಶಿಸುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ತರುವ ಮೂಲಕ ಯಾರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ? ಇಂದು ನಾನು ಇದನ್ನು ಹೇಳಿದರೆ, ಅದರ ನಂತರ ಈ ಜನರು ನನ್ನ ಮೇಲೆ ನಿಂದನೆಗಳನ್ನು ಮಾಡುತ್ತಾರೆ' ಎಂದರು.

Rahul Gandhi and Tejashwi Yadav eating meat at the festival - Modi attacked

'ಪ್ರಜಾಪ್ರಭುತ್ವದಲ್ಲಿ ಎಲ್ಲದರ ನಿಜವಾದ ಭಾಗವನ್ನು ದೇಶಕ್ಕೆ ತಿಳಿಸುವುದು ನನ್ನ ಜವಾಬ್ದಾರಿಯಾಗಿದೆ. ಈ ಜನರು ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಾರೆ. ಇದರಿಂದ ಈ ದೇಶದ ನಂಬಿಕೆಗಳ ಮೇಲೆ ದಾಳಿ ಮಾಡಲಾಗುತ್ತದೆ. ಇದು ಅವರ ಮೊಘಲ್ ಚಿಂತನೆ. ಈ ರಾಜಮನೆತನದ ರಾಜಕುಮಾರರನ್ನು ಕಿತ್ತೊಗೆಯಬೇಕು' ಎಂದರು.

ಏನಿದು ವಿಷಯ?

ಚೈತ್ರ ನವರಾತ್ರಿಯ ಮೊದಲ ದಿನದಂದು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ವಿಐಪಿ ಮುಖ್ಯಸ್ಥ ಮುಖೇಶ್ ಸಾಹ್ನಿ ಅವರೊಂದಿಗೆ ಮೀನು ತಿನ್ನುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ನಂತರ ಸಾಕಷ್ಟು ವಿವಾದ ಉಂಟಾಗಿತ್ತು.

ಕಳೆದ ವರ್ಷ ಶ್ರಾವಣ ಮಾಸದಲ್ಲಿ ದೆಹಲಿಯಲ್ಲಿ ಲಾಲು ಯಾದವ್ ಅವರನ್ನು ಭೇಟಿಯಾಗಲು ಬಂದಿದ್ದ ರಾಹುಲ್ ಗಾಂಧಿ ಕೂಡ ಮಟನ್ ತಿಂದು ಕುರಿ ಮಾಂಸವನ್ನು ತಯಾರಿಸಿ ತಿನ್ನುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆ ಸಮಯದಲ್ಲಿ ಲಾಲು ಮತ್ತು ರಾಹುಲ್ ಅವರ ಈ ವಿಡಿಯೋ ಬಗ್ಗೆ ಸಾಕಷ್ಟು ರಾಜಕೀಯ ಗದ್ದಲ ಎದ್ದಿತ್ತು.

ಪ್ರಧಾನಿ 10 ವರ್ಷಗಳ ಮಾಹಿತಿ ನೀಡಬೇಕು: ತೇಜಸ್ವಿ ಯಾದವ್

ನವರಾತ್ರಿ ವೇಳೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಮೀನು ತಿನ್ನುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿರುವ ಬಗ್ಗೆ ಪ್ರಧಾನಿ ಮೋದಿಯವರ ಪ್ರತಿಕ್ರಿಯೆಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, 'ನಾನು ಇಷ್ಟು ದಿನ ಉದ್ಯೋಗ-ಹಣದುಬ್ಬರದ ಬಗ್ಗೆ ಮಾತನಾಡುತ್ತಿದ್ದೆ. ಆದರೆ ಅವರು ಅದರ ಬಗ್ಗೆ ಯಾವುದೇ ಲೆಕ್ಕವನ್ನು ನೀಡುತ್ತಿಲ್ಲ.

10 ವರ್ಷಗಳಲ್ಲಿ ಬಿಹಾರಕ್ಕಾಗಿ ನೀವು ಏನು ಮಾಡಿದ್ದೀರಿ ಎಂಬುದನ್ನು ನಾನು ಕೇಳುತ್ತಿದ್ದೇನೆ? ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಖಾತೆ ನೀಡಬೇಕು. ಅವರು (ಪ್ರಧಾನಿ ನರೇಂದ್ರ ಮೋದಿ) ಅದು ಇದು ಮಾತನಾಡುವುದನ್ನು ಬಿಟ್ಟು ನಿಜವಾದ ಸಮಸ್ಯೆಯ ಬಗ್ಗೆ ಮಾತನಾಡಬೇಕು. ಸಮಸ್ಯೆಯ ಬಗ್ಗೆ ಮೌನ ಏಕೆ?' ಎಂದು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಪ್ರತಿದಾಳಿ

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಯಾವ ನಾಯಕರು ಯಾವ ತಿಂಗಳಲ್ಲಿ ಏನು ತಿಂದಿದ್ದಾರೆ ಎಂಬುದನ್ನು ನಾವು ಪತ್ತೆ ಮಾಡಿಲ್ಲ. ನಾವು ಪೌಷ್ಟಿಕಾಂಶವನ್ನು ಸೇವಿಸುವುದನ್ನು ಮಾತ್ರ ತಿಳಿಸಿದ್ದೇವೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+