ಅಧಿಕಾರಿಯ ಆಕ್ಷೇಪದ ನಡುವೆಯೇ 36 ರಫೇಲ್ ಖರೀದಿ ಒಪ್ಪಂದಕ್ಕೆ ಸಹಿ
ನವದೆಹಲಿ, ಸೆಪ್ಟೆಂಬರ್ 27: ರಫೇಲ್ ಒಪ್ಪಂದದ ಸಂಬಂಧ ರಚಿಸಲಾಗಿದ್ದ ಒಪ್ಪಂದ ವ್ಯವಹಾರ ಸಮಿತಿಯ (ಸಿಎನ್ಸಿ) ಭಾಗವಾಗಿದ್ದ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ರಫೇಲ್ ಯುದ್ಧ ವಿಮಾನಕ್ಕೆ ನಿಗದಿಪಡಿಸಲಾಗಿದ್ದ ದರದ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕುವ ಒಂದು ತಿಂಗಳ ಮೊದಲೇ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಮಾಧ್ಯಮ ವರದಿ ತಿಳಿಸಿದೆ.
'ಇಂಡಿಯನ್ ಎಕ್ಸ್ಪ್ರೆಸ್' ಮಾಡಿರುವ ವರದಿ ಪ್ರಕಾರ, 36 ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಆಗಿನ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಮತ್ತು ಫ್ರಾನ್ಸ್ನ ರಕ್ಷಣಾ ಸಚಿವರ ನಡುವೆ ನವದೆಹಲಿಯಲ್ಲಿ ಸಹಿ ಹಾಕುವ ಮೊದಲೇ ತಮ್ಮ ಆಕ್ಷೇಪಗಳ ದಾಖಲಾತಿ ಸಹಿತ ಅವರು ಪ್ರಶ್ನೆಗಳನ್ನು ಮುಂದಿರಿಸಿದ್ದರು.
ಆಗಿನ ಜಂಟಿ ಕಾರ್ಯದರ್ಶಿ ಮತ್ತು ಸ್ವಾಧೀನ ವ್ಯವಸ್ಥಾಪಕ ಅಧಿಕಾರಿಯ ಆಕ್ಷೇಪಣೆ ಸಲ್ಲಿಕೆ ಕಾರಣದಿಂದಾಗಿ ಒಪ್ಪಂದಕ್ಕೆ ಸಂಪುಟ ಅನುಮೋದನೆ ದೊರಕುವುದು ವಿಳಂಬವಾಗಿತ್ತು. ಆದರೆ, ರಕ್ಷಣಾ ಸಚಿವಾಲಯದ ಮತ್ತೊಬ್ಬ ಹಿರಿಯ ಅಧಿಕಾರಿಯಾಗಿದ್ದ ಸಚಿವಾಲಯದ ಪ್ರಧಾನ ನಿರ್ದೇಶಕರು ಈ ಆಕ್ಷೇಪಣೆಯನ್ನು ತಳ್ಳಿಹಾಕಿದ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಒಪ್ಪಂದವು ರಾಜಕೀಯ ವಿವಾದ ಸೃಷ್ಟಿಯಾಗಿರುವುದರಿಂದ ಆ ಅಧಿಕಾರಿಯು ಸಲ್ಲಿಸಿದ್ದ ಆಕ್ಷೇಪಣೆಯ ಪತ್ರವನ್ನು ನಿಯಂತ್ರಕರು ಮತ್ತು ಮಹಾಲೇಖಪಾಲರು (ಸಿಎಜಿ) ಅಧ್ಯಯನಕ್ಕೆ ಒಳಪಡಿಸಿದ್ದಾರೆ.
ಈ ಪತ್ರದ ಕುರಿತಂತೆ ಸಿಎಜಿ ಡಿಸೆಂಬರ್ನಲ್ಲಿ ನಡೆಯಲಿರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ವರದಿ ಮಂಡಿಸುವ ಸಾಧ್ಯತೆ ಇದೆ.
ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಆಕ್ಷೇಪಣೆಗಳಿರುವ ಪತ್ರ ಮತ್ತು ಈ ಆಕ್ಷೇಪಣೆಗಳನ್ನು ಯಾವ ರೀತಿ ತಿರಸ್ಕರಿಸಲಾಯಿತು ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖಿಸುವ ಸಂಭವವಿದೆ.
ರಫೇಲ್ ಅಲ್ಲದೆ ಎರಡನೆಯದಾಗಿ ಪರಿಗಣನೆಯಲ್ಲಿದ್ದ ಯುರೋ ಫೈಟರ್ ಯುದ್ಧ ವಿಮಾನ ಕಂಪೆನಿಯು 2014ರ ಜುಲೈನಲ್ಲಿ ಭಾರತ ಸರ್ಕಾರ ನೀಡಿದ್ದ ಬಿಡ್ ದರಕ್ಕೆ ಶೇ 20ರಷ್ಟು ರಿಯಾಯಿತಿಯಲ್ಲಿ ವಿಮಾನ ತಯಾರಿಸಿ ಕೊಡುವುದಾಗಿ ಆಫರ್ ನೀಡಿತ್ತು.
Nearly a month before the deal for 36 Rafale aircraft was signed , a senior officer of the Ministry of Defence, who had been part of the Contract Negotiations Committee raised questions about the deal’s benchmark price and put his objections on record#ModiAmbaniRafaleBlockbuster
— shubham lalwani (@SHUBHAMPCC) 27 September 2018
ರಫೇಲ್ನ ಸ್ಪರ್ಧಿಯು ಶೇ 20ರಷ್ಟು ರಿಯಾಯಿತಿ ನೀಡಲು ಮುಂದಾಗಿರುವಾಗ ಅದನ್ನು 36 ರಫೇಲ್ ಯುದ್ಧ ವಿಮಾನಗಳ ಖರೀದಿಗೂ ಅನ್ವಯಿಸಬೇಕಿತ್ತು ಎಂದು ಅಧಿಕಾರಿ ಹೇಳಿದ್ದರು.
ಇದೇ ಮೊತ್ತಕ್ಕೆ ಭಾರತೀಯ ವಾಯಿಪಡೆಯು ಇನ್ನೂ ಹೆಚ್ಚಿನ ಸುಖೋಯ್ ಯುದ್ಧ ವಿಮಾನಗಳನ್ನು ಎಚ್ಎಎಲ್ನಿಂದ ಪಡೆದುಕೊಳ್ಳಬಹುದಾಗಿತ್ತಯ ಎಂದು ತಿಳಿಸಿದ್ದರು.
-
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ದರ: ಇಂದು 10 ಗ್ರಾಂ ಬಂಗಾರದ ಬೆಲೆ 1,58,620 ರೂಪಾಯಿ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು












Click it and Unblock the Notifications