ವಾಸ್ತು ಸರಿಯಿದ್ದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ, ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಈ ಸರಳ ವಾಸ್ತು ಟಿಪ್ಸ್ ಪಾಲಿಸಿ
ವಾಸ್ತು ನಿಯಮಗಳನ್ನು ಅನುಸರಿಸಿ ಮನೆ ಕಟ್ಟಿದರೂ ಕೆಲವೊಮ್ಮೆ ಆರ್ಥಿಕ ಸಂಕಷ್ಟಗಳು ಎದುರಾಗಬಹುದು. ಅನಗತ್ಯ ಜಗಳಗಳು, ಕಿರಿಕಿರಿ ಮತ್ತು ಹಣಕಾಸಿನ ತೊಂದರೆಗಳು ಕಂಡುಬರುತ್ತವೆ. ಇದನ್ನು ವಾಸ್ತು ದೋಷ ಎಂದು ಭಾವಿಸಿ ದೊಡ್ಡ ಬದಲಾವಣೆಗಳಿಗೆ ಹೋಗುವ ಬದಲು, ವಾಸ್ತು ತಜ್ಞರು ಸೂಚಿಸುವ ಕೆಲವು ಸರಳ ಕ್ರಮಗಳನ್ನು ಪಾಲಿಸಿದರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಮನೆಯಲ್ಲಿ ಲಾಕರ್ ಇಡುವ ಸರಿಯಾದ ದಿಕ್ಕು
ಹಣ, ಚಿನ್ನ ಮುಂತಾದವುಗಳನ್ನು ಇಡುವ ಲಾಕರ್ ಅಥವಾ ಪೆಟ್ಟಿಗೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಬೇಕು. ಲಾಕರ್ ಅಥವಾ ಪೆಟ್ಟಿಗೆ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತೆ ಇರಬೇಕು ಉತ್ತರ ದಿಕ್ಕು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಲಾಕರ್ ಅನ್ನು ಬೀಮ್ ಕೆಳಗೆ, ಮೆಟ್ಟಿಲಿನ ಕೆಳಗೆ ಅಥವಾ ಬಾತ್ರೂಮ್ ಗೋಡೆಯ ಹತ್ತಿರ ಇಡಬಾರದು.

ಉತ್ತರ ದಿಕ್ಕಿನ ಮಹತ್ವ
ಉತ್ತರ ದಿಕ್ಕನ್ನು ಸದಾ ಸ್ವಚ್ಛ ಮತ್ತು ಖಾಲಿಯಾಗಿ ಇಡುವುದು ಮುಖ್ಯ.
ಇಲ್ಲಿ ಕಸ ಅಥವಾ ಭಾರವಾದ ವಸ್ತುಗಳನ್ನು ಇಡಬಾರದು.
ಸಣ್ಣ ನೀರಿನ ಫೌಂಟನ್ ಅಥವಾ ಅಕ್ವೇರಿಯಂ ಇಟ್ಟರೆ ಹಣದ ಹರಿವು ಹೆಚ್ಚುತ್ತದೆ ಎಂದು ನಂಬಲಾಗಿದೆ.
ಮನೆಯ ಮುಖ್ಯ ದ್ವಾರ ಬಾಗಿಲು
ಮನೆಯ ಮುಖ್ಯ ಬಾಗಿಲು ಆಕರ್ಷಕವಾಗಿದ್ದು ಬೆಳಕಿನಿಂದ ತುಂಬಿರಬೇಕು.
ಸ್ವಸ್ತಿಕ್ ಅಥವಾ ಓಂ ಚಿಹ್ನೆ ಅಳವಡಿಸುವುದು ಶುಭಕರ.
ಮುರಿದು ಹೋಗಿರುವ ಅಥವಾ ಶಬ್ದ ಮಾಡುವ ಬಾಗಿಲುಗಳನ್ನು ತಕ್ಷಣ ಸರಿಪಡಿಸಬೇಕು.
ಅಡಿಗೆಮನೆ ದಿಕ್ಕು
ಅಡಿಗೆಮನೆ ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಇರಬೇಕು.
ನಳಗಳಲ್ಲಿ ನೀರು ಲೀಕ್ ಆಗಬಾರದು.
ನೀರು ವ್ಯರ್ಥವಾದರೆ ಹಣವೂ ವ್ಯರ್ಥವಾಗುತ್ತದೆ ಎಂಬ ನಂಬಿಕೆ ಇದೆ.
ಮನೆಯಲ್ಲಿ ಇರಬೇಕಾದ ಸಸ್ಯಗಳು
ಉತ್ತರ ದಿಕ್ಕಿನಲ್ಲಿ ಮನಿ ಪ್ಲಾಂಟ್ ಬೆಳೆಸುವುದು ಉತ್ತಮ.
ಲಾಕರ್ ಒಳಗೆ ಸಣ್ಣ ಕನ್ನಡಿ ಇಡಬಹುದು.
ಲಾಕರ್ ಎದುರು ಕನ್ನಡಿ ಇದ್ದರೆ ಧನ ಹೆಚ್ಚುತ್ತದೆ ಎಂದು ನಂಬಲಾಗಿದೆ.
ತುಳಸಿ ಮತ್ತು ಲಕ್ಷ್ಮೀ ಕೃಪೆ
ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡ ನೆಟ್ಟು ಪ್ರತಿದಿನ ಸಂಜೆ ದೀಪ ಹಚ್ಚುವುದು ಶುಭಕರ.
ಇದರಿಂದ ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಸ್ವಚ್ಛತೆ - ಸಂಪತ್ತು
ಮನೆ ಸ್ವಚ್ಛವಾಗಿದ್ದು ಸುವ್ಯವಸ್ಥಿತವಾಗಿದ್ದರೆ ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ವಾಸ್ತು ಹೇಳುತ್ತದೆ.
ಒಟ್ಟಿನಲ್ಲಿ ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಶಾಂತಿ, ಸಮೃದ್ದಿ ಮತ್ತು ಅಭವೃದ್ದಿ ಹೊಂದಲು ಸಹಕಾರಿಯಾಗುತ್ತದೆ ಎಂದು ವಾಸ್ತು ತಜ್ಞರು ಅಭಿಪ್ರಾಯ ಪಡುತ್ತಾರೆ.
-
ವಾಸ್ತು ಮಾತ್ರ ಸಾಲದು! ನಿಮ್ಮ ಜಾತಕವೇ ಯಶಸ್ಸನ್ನು ನಿರ್ಧರಿಸುತ್ತದೆ -
Vastu Tips: ಅಡುಗೆಮನೆಯಲ್ಲಿ ಪೂಜೆ ಮಾಡಬಹುದೇ? ಇಲ್ಲಿದೆ ವಾಸ್ತು ತಜ್ಞರ ಸ್ಪಷ್ಟ ಉತ್ತರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ














Click it and Unblock the Notifications