ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೂ ಬದಿಯಲ್ಲಿ 'ಹೆಡ್' ಇರುವ ಕಾಯಿನ್ ಟಾಸ್ ಹಾರಿಸುತ್ತಿದ್ದೆ!: ಚಿದಂಬರಂ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿರಾಕರಿಸಿರುವುದಲ್ಲದೆ, ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಒಲಾಂಡ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ಇರುವ ಸಂಬಂಧದ ಬಗ್ಗೆ ಪ್ರಶ್ನಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಮಾಜಿ ಸಚಿವ ಪಿ. ಚಿದಂಬರಂ ಹರಿಹಾಯ್ದಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಚಿದಂಬರಂ, ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.

ರಫೆಲ್ ಡೀಲ್ ರದ್ದಾಗಲ್ಲ, ರಾಹುಲ್- ಹೊಲ್ಲಾಂಡೆ ಕೂಗಿಗೆ ಜೇಟ್ಲಿ ಬ್ರೇಕ್! ರಫೆಲ್ ಡೀಲ್ ರದ್ದಾಗಲ್ಲ, ರಾಹುಲ್- ಹೊಲ್ಲಾಂಡೆ ಕೂಗಿಗೆ ಜೇಟ್ಲಿ ಬ್ರೇಕ್!

'ಸತ್ಯಕ್ಕೆ ಎರಡು ಆಯಾಮಗಳಿರಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಖಂಡಿತಾ ಅದು ಸತ್ಯ. ಹಣಕಾಸು ಸಚಿವರ ಪ್ರಕಾರ, ಇಲ್ಲಿ ಎರಡು ಆಯಾಮಗಳಿವೆ. ಇವುಗಳಲ್ಲಿ ಸತ್ಯದ ಆಯಾಮವನ್ನು ಕಂಡು ಹಿಡಿಯುವ ಅತ್ಯುತ್ತಮ ಮಾರ್ಗ ಯಾವುದು' ಎಂದು ಮೊದಲ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

rafale deal chidambaram series tweet against arun jaitley on two version truth

'ಒಂದೋ ತನಿಖೆಗೆ ಆದೇಶ, ಇಲ್ಲವೇ ಕಾಯಿನ್ ಟಾಸ್ ಮಾಡುವುದು. ನಾನು ಹಣಕಾಸು ಸಚಿವನಾಗಿದ್ದರೆ ಕಾಯಿನ್ ಟಾಸ್ ಮಾಡುವುದನ್ನು ಆಯ್ದುಕೊಳ್ಳುತ್ತಿದ್ದೆ (ಆ ಕಾಯಿನ್ ಎರಡೂ ಬದಿಗಳಲ್ಲಿ 'ಹೆಡ್' ಇರುತ್ತಿತ್ತು) ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

 ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

'ಈಗ ನಡೆಯುತ್ತಿರಯವ ಘಟನಾವಳಿಗಳ ಸಮಸ್ಯೆಗಳನ್ನು ಸರ್ಕಾರ ಗಮನಿಸದೆ ಇರುವುದಕ್ಕೆ ಮತ್ತು ತನಿಖೆಗೆ ಆದೇಶ ನೀಡದೆ ಇರುವುದಕ್ಕೆ ಬೇಸರವಾಗುತ್ತಿದೆ. ಮುಂದಿನ ಆರು ಅಥವಾ 12 ತಿಂಗಳಿನಲ್ಲಿ ಏನಾಗಲಿದೆಯೋ ಯಾರಿಗೆ ತಿಳಿದಿದೆ' ಎಂದು ಮೂರನೇ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಫ್ರೆಂಚ್ ವೆಬ್‌ಸೈಟ್‌ಗೆ ನೀಡಿದ್ದ ಸಂದರ್ಶನದಲ್ಲಿ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಒಲಾಂಡ್, ದಸಾಲ್ಟ್ ಏವಿಯೇಷನ್ ಸಂಸ್ಥೆಯೊಂದಿಗೆ ಪಾಲುದಾರನಾಗಿ ರಿಲಯನ್ಸ್ ಡಿಫೆನ್ಸ್ ಸಮೂಹವನ್ನು ಆಯ್ದುಕೊಳ್ಳುವಂತೆ ಭಾರತ ಸರ್ಕಾರ ಸಲಹೆ ನೀಡಿತ್ತು ಎಂದು ಹೇಳಿದ್ದರು. ಆದರೆ, ಅದರ ಬಗ್ಗೆ ಮತ್ತೆ ಹೇಳಿಕೆ ನೀಡಿದ್ದ ಅವರು, ರಿಲಯನ್ಸ್ ಡಿಫೆನ್ಸ್ ಪರವಾಗಿ ಸರ್ಕಾರ ಲಾಬಿ ಮಾಡಿತ್ತೇ ಇಲ್ಲವೇ ಎನ್ನುವುದು ಗೊತ್ತಿಲ್ಲ. ಅದು ದಾಸಾಲ್ಟ್ ಕಂಪೆನಿಗೆ ಬಿಟ್ಟ ವಿಚಾರ ಎಂದು ಹೇಳಿದ್ದರು.

ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ

ಒಲಾಂಡ್ ಹೇಳಿಕೆ ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಇದರ ಬಗ್ಗೆ ಮಾತನಾಡಿದ್ದ ಅರುಣ್ ಜೇಟ್ಲಿ, ಸತ್ಯಕ್ಕೆ ಎರಡು ಆಯಾಮಗಳಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು.

English summary
Former Finance Minister P. Chidambaram slammed Arun Jaitley and Modi government in a series of tweets on Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X