Get Updates
Get notified of breaking news, exclusive insights, and must-see stories!

ದೆಹಲಿ ಮಹಾನಗರ ಪಾಲಿಕೆಯಲ್ಲಿ ಜಗಳ: ಬಿಜೆಪಿ ಕೌನ್ಸಿಲರ್‌ಗೆ ಗಾಯ- ಎಎಪಿ ಮೇಲೆ ಆರೋಪ!

ನವದೆಹಲಿ ಫೆಬ್ರವರಿ 24: ಎಂಸಿಡಿ ಹೌಸ್‌ನ ಚೇಂಬರ್‌ನಲ್ಲಿ ಇಂದು ಬಿಜೆಪಿ ಮತ್ತು ಎಎಪಿಯ ಹಲವಾರು ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಘರ್ಷಣೆಯಲ್ಲಿ ಬಿಜೆಪಿ ಕೌನ್ಸಿಲರ್ ಗಾಯಗೊಂಡಿದ್ದು, ಆಪ್ ಶಾಸಕಿ ಅತಿಶಿ ದಾಳಿಗೆ ಪ್ರಚೋದನೆ ನೀಡಿದ್ದಾರೆ ಎಂದು ಕೇಸರಿ ಪಕ್ಷ ಆರೋಪಿಸಿದೆ.

ಬಿಜೆಪಿಯು ಟ್ವಿಟ್ಟರ್‌ನಲ್ಲಿ ಘರ್ಷಣೆಯ ವಿಡಿಯೊವನ್ನು ಹಂಚಿಕೊಂಡಿದೆ. ಅತಿಶಿ ಎಎಪಿ ಸದಸ್ಯರೊಬ್ಬರಿಗೆ ಏನೋ ಪಿಸುಗುಟ್ಟಿದ್ದಾರೆ. ನಂತರ ಅವರು ತಮ್ಮ ಯಜಮಾನಗೆ ವಿಧೇಯರಾಗಿ ಬಿಜೆಪಿ ಕೌನ್ಸಿಲರ್‌ಗಳನ್ನು ಥಳಿಸಲು ಪ್ರಾರಂಭಿಸಿದರು. ಈ ಘರ್ಷಣೆಯಲ್ಲಿ ಬಿಜೆಪಿ ಕೌನ್ಸಿಲರ್ ಕೈಗೆ ಕೆಲ ಗಾಯಗಳಾಗಿವೆ.

Quarrel in Delhi Metropolitan Council: BJP councilor injured- BJP blames AAP

ಆದರೆ ಎಎಪಿ ಶಾಸಕಿ ಅತಿಶಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸುಖ ಸುಮ್ಮನೆ ತಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದರು. ಬಿಜೆಪಿ ಪಕ್ಷವು ಗದ್ದಲವನ್ನು ಸೃಷ್ಟಿಸಿದೆ. ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಅವರ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದರು.

ಇಂದು ಬಿಜೆಪಿಯವರು ನಾಗರಿಕ ಕೇಂದ್ರದಲ್ಲಿ ಗೂಂಡಾಗಿರಿ ತೋರಿಸಿದ್ದಾರೆ. ಸ್ಥಾಯಿ ಸಮಿತಿ ಚುನಾವಣೆ ನಡೆಯುತ್ತಿತ್ತು. ಮತ ಎಣಿಕೆ ಆರಂಭವಾದಾಗ ಬಿಜೆಪಿ ಸೋಲುವುದನ್ನು ಅರಿತು ಗದ್ದಲ ಸೃಷ್ಟಿಸಿತು. ಮೇಯರ್ ಮೇಲೆ ಬಿಜೆಪಿ ಪುರುಷ ಸದಸ್ಯರು ಹಲ್ಲೆ ನಡೆಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅತಿಶಿ ಹೇಳಿರುವುದಾಗಿ ವರದಿಯಾಗಿದೆ.

"ಇದು ಯಾವ ನಡವಳಿಕೆ? ಇದು ನಾಚಿಕೆಗೇಡಿನ ಮತ್ತು ಖಂಡನೀಯ ನಡುವಳಿಕೆ. ದೇಶ ಇದನ್ನು ನೋಡುತ್ತಿದೆ. ಬಿಜೆಪಿ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕು. ಬಿಜೆಪಿ ಅವರ ಗೂಂಡಾಗಿರಿಯನ್ನು ನಿಲ್ಲಿಸಬೇಕೆಂದು ನಾನು ವಿನಂತಿಸುತ್ತೇನೆ. ಮೇಯರ್ ಮೇಲೆ ಹಲ್ಲೆ ನಡೆಸಿದವರನ್ನು ಕಂಬಿ ಹಿಂದೆ ಕಳುಹಿಸಲಾಗುವುದು'' ಎಂದು ಅತಿಶಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+