ಎಎಪಿ ಬಿಟ್ಟು ಮೋದಿಗೆ ಜೈ ಎಂದ ಗುಳಿಕೆನ್ನೆ ಚೆಲುವೆ
ವಾರಣಾಸಿ, ಮೇ .2: ಲೋಕಸಭೆ ಚುನಾವಣೆಗೆ ಇನ್ನೆರದು ಹಂತದ ಮತದಾನ ಮಾತ್ರ ಬಾಕಿ ಉಳಿದಿದೆ. ವಾರಣಾಸಿಯಲ್ಲಿ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರ ಪ್ರಚಾರ ನಡೆಸಲು ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಜ್ಜಾಗಿದ್ದಾರೆ. ವಾರಣಾಸಿ ಪ್ರವಾಸದಲ್ಲಿರುವ ಪ್ರೀತಿ, ಆಮ್ ಆದ್ಮಿ ಪಕ್ಷದ ಆಫರ್ ತಿರಸ್ಕರಿಸಿ ಮೋದಿ ಪರ ನಿಂತಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪ್ರೀತಿ ಜಿಂಟಾ ಅವರು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರ ಬದಲಿಗೆ ಮೋದಿ ಪರ ನಿಂತಿರುವುದೇಕೆ? ಎಂಬ ಪ್ರಶ್ನೆಗೆ ಉತ್ತರಿಸಿದರು. ನಾನು ಮೋದಿ ಅವರ್ ಫ್ಯಾನ್ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಅವರ ಪರ ಪ್ರಚಾರ ಮಾಡುವ ಅವಶ್ಯಕತೆಯೇ ಇಲ್ಲ. ಮೋದಿ ಅಲೆ ಎಲ್ಲೆಲ್ಲೂ ಕಾಣಬಹುದು. ನಾನಿಲ್ಲಿ ದೇಶದ ಒಳಿತಿಗಾಗಿ ನನ್ನ ತಂಡ(ಕಿಂಗ್ಸ್ XI ಪಂಜಾಬ್) ದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ' ಎಂದಿದ್ದಾರೆ.
ದುಬೈನಲ್ಲಿ ನಡೆದಿದ್ದ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ XI ತಂಡ ಎಲ್ಲಾ ಐದ್ ಪಂದ್ಯಗಳನ್ನು ಗೆದ್ದು ಭರ್ಜರಿ ಪ್ರದರ್ಶನ ನೀಡಿದೆ. ಅರಬ್ ನಾಡಿನಿಂದ ಭಾರತಕ್ಕೆ ಬಂದು ಮತದಾನ ಮಾಡಿದ್ದ ಪ್ರೀತಿ ಅವರು ಈಗ ಕಾಶಿ ಪ್ರವಾಸಕ್ಕೆ ಬಂದಿದ್ದರು.
ವಾರಣಾಸಿಯಲ್ಲಿ ಮೇ.12 ರಂದು ಮತದಾನ ನಡೆಯಲಿದ್ದು, ಎಎಪಿಯ ಅರವಿಂದ್ ಕೇಜ್ರಿಆಲ್, ಕಾಂಗ್ರೆಸ್ಸಿನ ಅಜಯ್ ರಾಯ್ ವಿರುದ್ಧ ಬಿಜೆಪಿಯ ನರೇಂದ್ರ ಮೋದಿ ಕಣದಲ್ಲಿದ್ದಾರೆ.ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ವಾರಣಾಸಿ ಬಗ್ಗೆ ಸರಣಿ ಟ್ವೀಟ್ ಮಾಡಿದ್ದರು.

ನನಗೆ ಆಮ್ ಆದ್ಮಿಪಕ್ಷ ಇಷ್ಟ... ಆದರೆ..
ನನಗೆ ಆಮ್ ಆದ್ಮಿಪಕ್ಷ ಇಷ್ಟ ಆದರೆ..ಅವರಿಗೆ ಇನ್ನೂ ಕಾಲಾವಕಾಶ ಬೇಕಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮೋದಿ ಅವರು ಪ್ರಧಾನಿಯಾದರೆ ದೇಶಕ್ಕೆ ಒಳಿತು ಎಂದು ಪ್ರೀತಿ ಜಿಂಟಾ ಹೇಳಿದ್ದಾರೆ.
|
ಚುನಾವಣೆ ಪ್ರಚಾರ ಮಾಡುವುದಿಲ್ಲ ಎಂದ ಪ್ರೀತಿ
ವಾರಣಾಸಿ ಪ್ರವಾಸ ಮುಗಿಸಿಕೊಂಡು ಮುಂಬೈಗೆ ವಾಪಸ್ ಬಂದಿರುವ ಪ್ರೀತಿ ಜಿಂಟಾ ಅವರು ತಾವು ಯಾವುದೇ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ, ಮುಂದೆ ಕೂಡಾ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ.
|
ವಾರಣಾಸಿಯಲ್ಲಿ ಗಂಗೆ ಉಳಿಸಿ ಎಂದಿದ್ದ ಪ್ರೀತಿ
ವಾರಣಾಸಿಯಲ್ಲಿ ಪವಿತ್ರ ನದಿ ಗಂಗಾ ಕಲುಷಿತಗೊಂಡಿರುವುದು ಕಂಡರೆ ದುಃಖವಾಗುತ್ತದೆ ಎಂದು ಟ್ವೀಟ್
|
ವಾರಣಾಸಿಯಲ್ಲಿ ಮಾಧ್ಯಮಗಳ ಕೆಬಿಸಿ ಪ್ರಶ್ನೆ
ವಾರಣಾಸಿಗೆ ಬಂದ ನನಗೆ ಮಾಧ್ಯಮಗಳು ಕೆಬಿಸಿ ಮಾದರಿಯಲ್ಲಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ನಾನು ಯಾವುದೆ ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ಇದು ನನ್ನ ವೈಯಕ್ತಿಕ ಪ್ರವಾಸ ಎಂದಿದ್ದ ಪ್ರೀತಿ ಜಿಂಟಾ
|
ಎಲ್ಲೆಡೆ ಮೋದಿ ಅಲೆ, ನಿರೀಕ್ಷೆಗಳು ತುಂಬಿವೆ
ಎಲ್ಲೆಡೆ ಮೋದಿ ಅಲೆ, ನಿರೀಕ್ಷೆಗಳು ತುಂಬಿವೆ, ನಿರೀಕ್ಷೆಗೆ ತಕ್ಕಂತೆ ಅವರು ನಡೆಯುವ ಭರವಸೆ ಇದೆ
|
ಬನಾರಸಿ ಸೀರೆ, ಸಾತ್ವಿಕ ಆಹಾರ, ದೇಗುಲ
ಬನಾರಸಿ ಸೀರೆ, ಸಾತ್ವಿಕ ಆಹಾರ, ದೇಗುಲ, ಸೂರ್ಯೋದಯ ಹೀಗೆ ಕಾಶಿ ಕ್ಷೇತ್ರವನ್ನು ಹಾಡಿಹೊಗಳಿದ ಪಂಜಾಬ್ ಬೆಡಗಿ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications