ಅಬ್ದುಲ್ ಕಲಾಂ ನಿವಾಸದಲ್ಲೇ ವಾಸ್ತವ್ಯ ಹೂಡಲಿರುವ ಪ್ರಣಬ್ ಮುಖರ್ಜಿ
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ನೀಡಲಾಗಿದ್ದ ನಿವಾಸಕ್ಕೆ ಹಾಲಿ ರಾಷ್ಟ್ರಪತಿ ಶಿಫ್ಟ್. ಜುಲೈ 25ರಂದು ತಮ್ಮ ಸ್ಥಾನದಿಂದ ನಿವೃತ್ತಿಯಾದ ನಂತರ, ಪ್ರಣಬ್ ಮುಖರ್ಜಿ ಅವರು ಇಲ್ಲಿಗೆ ಸ್ಥಳಾಂತರಗೊಳ್ಳಲಿದ್ದಾರೆ.
ನವದಹೆಲಿ, ಜುಲೈ 18: ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿಯು ಇದೇ ತಿಂಗಳ 25ಕ್ಕೆ ಕೊನೆಗೊಳ್ಳಲಿದ್ದು, ನಿವೃತ್ತಿಯ ನಂತರ, ನವದೆಹಲಿಯ ರಾಜಾಜಿ ಮಾರ್ಗದಲ್ಲಿರುವ ನಂಬರ್ 10 ನಿವಾಸಕ್ಕೆ ಅವರು ಸ್ಥಳಾಂತರಗೊಳ್ಳಲಿದ್ದಾರೆ.
ಈ ಬಡಾವಣೆಯು ಅತ್ಯಂತ ಪ್ರತಿಷ್ಠಿತವಾಗಿದ್ದು, ಅಲ್ಲಿ ಮಾಜಿ ರಾಷ್ಟ್ರಪತಿಗಳಿಗೆ ನಿವಾಸಗಳನ್ನು ನೀಡಲಾಗುತ್ತದೆ. ಈ ಹಿಂದೆ ಇದೇ ನಿವಾಸವನ್ನು ಮತ್ತೊಬ್ಬ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ನೀಡಲಾಗಿತ್ತು. ಆನಂತರ ಅವರು ನಿಧನರಾದ ಹಿನ್ನೆಲೆಯಲ್ಲಿ ಅವರ ನಿವಾಸ ನಿವಾಸಕ್ಕೆ ಪ್ರಣಬ್ ಮುಖರ್ಜಿ ಸ್ಥಳಾಂತರಗೊಳ್ಳಲಿದ್ದಾರೆ.
ಹಾಗಾದರೆ, ಈ ನಿವಾಸಕ್ಕೆ ಶಿಫ್ಟ ಆದ ನಂತರ ರಾಷ್ಟ್ರಪತಿಯವರ ಸಂಬಳ ಎಷ್ಟಿರಲಿದೆ. ಅವರ ಸೌಕರ್ಯಗಳು ಹೇಗಿರುತ್ತವೆ. ಒಬ್ಬ ಮಾಜಿ ರಾಷ್ಟ್ರಪತಿಯ ನಿವೃತ್ತಿ ಜೀವನಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳೇನು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತಿಂಗಳಿಗೆ 75 ಸಾವಿರ ರು. ಪಡೆಯಲಿರುವ ಪ್ರಣಬ್
ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ, ತಿಂಗಳಿಗೆ ಒಂದೂವರೆ ಲಕ್ಷ ರು. ಸಂಬಳ ಪಡೆಯುತ್ತಿದ್ದರು. ನಿವೃತ್ತಿಯಾದ ನಂತರ, ಇದರ ಅರ್ಧದಷ್ಟು ಸಂಬಳ ಅವರಿಗೆ ಸಿಗಲಿದೆ. ಅಂದರೆ, ತಿಂಗಳಿಗೆ 75 ಸಾವಿರ ರು. ಹಣವನ್ನು ಅವರು ಪಿಂಚಣಿ ರೂಪದಲ್ಲಿ ಪಡೆಯಲಿದ್ದಾರೆ. ಇನ್ನು, ಇದೇ ನಿವಾಸದಲ್ಲಿ ಆರಂಭವಾಗಲಿರುವ ಪ್ರಣಬ್ ಅವರ ಸ್ವಂತ ಕಚೇರಿಯ ನಿರ್ವಹಣೆಗಾಗಿ ವರ್ಷಕ್ಕೆ 60 ಸಾವಿರ ರು. ಅನುದಾನ ಸಿಗಲಿದೆ.

ಸರ್ಕಾರದಿಂದ ಉಚಿತ ನಿವಾಸ
1951ರ ರಾಷ್ಟ್ರಪತಿ ಸೌಲಭ್ಯಗಳ ಕಾಯ್ದೆ ಪ್ರಕಾರ, ಪ್ರಣಬ್ ಮುಖರ್ಜಿಯವರಿಗೆ ನೀಡಲಾಗಿರುವ ಈ ಹೊಸ ಮನೆಗೆ ಯಾವುದೇ ಬಾಡಿಗೆ ತೆರಬೇಕಾಗಿಲ್ಲ. ಸರ್ಕಾರದ ವತಿಯಿಂದ ಅದು ಉಚಿತವಾಗಿರುತ್ತದೆ.

ಇಂಟರ್ನೆಂಟ್ ಕನೆಕ್ಷನ್ ಸಹ ಉಂಟು
ಇನ್ನು, ನಿಯಮಗಳ ಪ್ರಕಾರ, ಪ್ರಣಬ್ ಅವರಿಗೆ ಎರಡು ದೂರವಾಣಿ ಸಂಪರ್ಕ (ಲ್ಯಾಂಡ್ ಲೈನ್) ನೀಡಲಾಗುತ್ತದೆ. ಅದರಲ್ಲೊಂದು, ಇಂಟರ್ನೆಟ್ ಗೆ ಸೀಮಿತವಾಗಿರಲಿದೆ. ಇನ್ನು, ಪ್ರಣಬ್ ಅವರಿಗೊಂದು ರಾಷ್ಟೀಯ ಮಟ್ಟದ ರೋಮಿಂಗ್ ಸೌಲಭ್ಯವುಳ್ಳ ಸೆಲ್ ಫೋನ್ ಕನೆಕ್ಷನ್ ನೀಡಲಾತ್ತದೆ.

ಸೇವೆಗೆ ಐವರು ಅಧಿಕಾರಿಗಳ ನಿಯೋಜನೆ
ಕಾಯ್ದೆಯಲ್ಲಿರುವ ನಿಯಮಗಳ ಪ್ರಕಾರ, ಪ್ರಣಬ್ ಜೀ ಅವರಿಗೆ ಒಂದು ಕಾರು ಉಚಿತವಾಗಿ ಸಿಗಲಿದೆ. ಸಹಾಯಕ ಅಧಿಕಾರಿಗಳ ಪುಟ್ಟ ತಂಡವನ್ನು ನೀಡಲಾಗುತ್ತದೆ. ಇದರಲ್ಲಿ ಒಬ್ಬ ಆಪ್ತ ಕಾರ್ಯದರ್ಶಿ, ಒಬ್ಬ ಹೆಚ್ಚುವರಿ ಆಪ್ತ ಕಾರ್ಯದರ್ಶಿ, ಒಬ್ಬ ಆಪ್ತ ಸಹಾಯಕ ಹಾಗೂ ಇಬ್ಬರು ಹೆಚ್ಚುವರಿ ಸಹಾಯಕರನ್ನು ನೇಮಿಸಲಾಗುತ್ತದೆ.

ಎಲ್ಲಾ ಮಾದರಿ ಪ್ರಯಾಣ ಫ್ರೀ
ಇನ್ನು, ಪ್ರಣಬ್ ಜೀ ಅವರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಚಿಕಿತ್ಸೆಗಳು, ತಪಾಸಣೆಗಳು ಉಚಿತವಾಗಿರಲಿವೆ. ದೇಶದ ಯಾವುದೇ ಪ್ರಾಂತ್ಯಕ್ಕೆ ಅವರು ಉಚಿತವಾಗಿ ಹೋಗಿಬರಬಹುದು. ಭಾರತದ ವ್ಯಾಪ್ತಿಯೊಳಗಿನ ಪ್ರದೇಶಗಳಿಗೆ ಹೋಗಿಬರಲು ಪ್ರಣಬ್ ಅವರು, ವಿಮಾನ, ರೈಲು, ಬಸ್ಸು ಅಥವಾ ಹಡಗಿನಲ್ಲಿ ಪ್ರಯಾಣಿಸಿದರೆ ಆ ಪ್ರಯಾಣ ಹೈ ಕ್ಲಾಸ್ ಪ್ರಯಾಣವಾಗಿರುತ್ತದಲ್ಲದೆ, ಜೀವನ ಪರ್ಯಂತ ಉಚಿತವಾಗಿರಲಿದೆ. ಇಂಥ ಪ್ರಯಾಣಗಳ ವೇಳೆ, ಅವರೊಂದಿಗೆ ಒಬ್ಬ ವ್ಯಕ್ತಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications