ಹಿರಿಯ ನಾಗರಿಕರಿಗೆ ಶುಭ ಸುದ್ದಿ ನೀಡಿದ ಮೋದಿ ಸರ್ಕಾರ
ನವದೆಹಲಿ, ಮೇ 20: ಹಿರಿಯ ನಾಗರಿಕರು(60 ಮತ್ತು ಅದಕ್ಕಿಂತ ಮೇಲ್ಪಟ್ಟ) ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆಯಾಗಿರುವ ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ)ಯನ್ನು ವಿಸ್ತರಿಸಲಾಗಿದೆ. ಈ ಮೂಲಕ ಲಾಕ್ದೌನ್ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರವು ನೆಮ್ಮದಿಯ ಸುದ್ದಿ ಕೊಟ್ಟಿದೆ.
Recommended Video
ಈ ಯೋಜನೆಯ ಕೊನೆ ದಿನಾಂಕವನ್ನು 2020 ರ ಮಾರ್ಚ್ 31 ರ ಬದಲಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಹೀಗಾಗಿ 2023 ಮಾರ್ಚ್ 31 ರವರೆಗೆ ವಿಸ್ತರಣೆಗೊಂಡಿದೆ. ಈ ಕುರಿತ ಬದಲಾವಣೆಗೆ ಕೇಂದ್ರ ಸಚಿವ ಸಂಪುಟವು ಬುಧವಾರಂದು ಅನುಮೋದನೆ ನೀಡಿದೆ.
ಪಿಎಂವಿವಿವೈ ವಿಸ್ತರಣೆಯು ವೃದ್ಧಾಪ್ಯದ ಆದಾಯ ಸುರಕ್ಷತೆ ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕೆ ಅನುವು ಮಾಡಿಕೊಡುತ್ತದೆ. ಪಿಎಂವಿವಿವೈ ಪಿಂಚಣಿ ದರ ಶೇ. 8ರಷ್ಟಿದ್ದು, 10 ವರ್ಷಗಳ ಪಿಂಚಣಿ ಅವಧಿ/ಪಾಲಿಸಿ ಅವಧಿ ಇರುತ್ತದೆ. ಆದರೆ, ಈಗ ಪ್ರಸಕ್ತ ಸಾಲಿನಲ್ಲಿ ಪಿಂಚಣಿ ದರವನ್ನು ಶೇ 7.4ಕ್ಕೆ ಇಳಿಸಲಾಗಿದೆ. ಪ್ರತಿ ವರ್ಷ ಪಿಂಚಣಿ ದರವನ್ನು ಬದಲಾಯಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಪಿಂಚಣಿ ಪಡೆಯುವ ಆಯ್ಕೆ ನೀಡಲಾಗಿದೆ
ಪಿಎಂವಿವಿವೈನಲ್ಲಿ ಹೂಡಿಕೆ ಮಾಡಲು, ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಯೋಜನೆಯನ್ನು ನೀಡಲು ಸರ್ಕಾರವು ಅನುಮತಿಸುವ ಏಕೈಕ ಸಂಸ್ಥೆಯಾದ ಕಾರಣ ಎಲ್ಐಸಿಯನ್ನು ಸಂಪರ್ಕಿಸಬೇಕು. ಈ ಸ್ಕೀಮ್ ಎಲ್ಐಸಿ ಮುಖಾಂತರ ಖರೀದಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಹೀಗೆ ನೀವು ಆಯ್ಕೆ ಮಾಡಿದ ಅವಧಿಯ ಕೊನೆಯಲ್ಲಿ ಪಿಂಚಣಿ ಪಡೆಯಬಹುದು.
ಹೂಡಿಕೆ ಮೊತ್ತ, ಅವಧಿ ಮಾಸಿಕ ಅವಧಿ
* ಮಾಸಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1.50 ಲಕ್ಷ; ಗರಿಷ್ಠ ಹೂಡಿಕೆ: ರೂ. 7.50 ಲಕ್ಷ ರು
* ತ್ರೈಮಾಸಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,49,068; ಗರಿಷ್ಠ ಹೂಡಿಕೆ: ರೂ. 7,45,342
* ಅರ್ಧವಾರ್ಷಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,47,601; ಗರಿಷ್ಠ ಹೂಡಿಕೆ: ರೂ. 7,38,007
*ವಾರ್ಷಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,44,578; ಗರಿಷ್ಠ ಹೂಡಿಕೆ: ರೂ. 7,22,892

ಪಿಂಚಣಿ ಮೊತ್ತ
ಹಿರಿಯ ನಾಗರಿಕರು ಪಿಂಚಣಿ ಮೊತ್ತವನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಪಡೆಯಬಹುದು.
* ಮಾಸಿಕ ಅವಧಿ: ಕನಿಷ್ಟ ಪಿಂಚಣಿ: ರೂ. 1,000/; ಗರಿಷ್ಠ ಪಿಂಚಣಿ: ರೂ. 5,000/
* ತ್ರೈಮಾಸಿಕ ಅವಧಿ: ಕನಿಷ್ಟ ಪಿಂಚಣಿ: ರೂ. 3,000/; ಗರಿಷ್ಠ ಪಿಂಚಣಿ: ರೂ. 15,000/
* ಅರ್ಧವಾರ್ಷಿಕ ಅವಧಿ: ಕನಿಷ್ಟ ಪಿಂಚಣಿ: ರೂ. 6,000/ ಗರಿಷ್ಠ ಪಿಂಚಣಿ: ರೂ. 30,000/
* ವಾರ್ಷಿಕ ಅವಧಿ: ಕನಿಷ್ಟ ಪಿಂಚಣಿ: ರೂ. 12,000/ ಗರಿಷ್ಠ ಪಿಂಚಣಿ: ರೂ. 60,000/

ಪಿಂಚಣಿದಾರರು ಮರಣ ಹೊಂದಿದಲ್ಲಿ
ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ವಾರ್ಷಿಕ ಮರುಹೊಂದಿಸುವ ದರವನ್ನು ಅನುಮೋದಿಸಲು ಹಣಕಾಸು ಸಚಿವರಿಗೆ ಅಧಿಕಾರವನ್ನು ನೀಡಲಾಗಿದೆ. 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ 7.40% ನಷ್ಟು ಆದಾಯದ ದರವನ್ನು ಆರಂಭದಲ್ಲಿ ಅನುಮತಿಸಲು ಮತ್ತು ನಂತರ ಪ್ರತಿ ವರ್ಷ ಮರುಹೊಂದಿಸಬಹುದಾಗಿದೆ. ಪಿಎಂವಿವಿವೈ ಪಾಲಿಸಿ ಅವಧಿಯಲ್ಲಿ ಪಿಂಚಣಿದಾರರು ಮರಣ ಹೊಂದಿದಲ್ಲಿ, ಖರೀದಿ ಮೊತ್ತವನ್ನು ನಾಮಿನಿಗೆ/ಫಲಾನುಭವಿಗೆ ಹಿಂದಿರುಗಿಸಲಾಗುತ್ತದೆ. ಒಂದು ವೇಳೆ ಯಾವುದೇ ನಾಮಿನಿ ಇಲ್ಲದಿದ್ದರೆ ಕಾನೂನುಬದ್ದ ಉತ್ತರಾಧಿಕಾರಿಗೆ ಮೊತ್ತ ಸಲ್ಲಲಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications