ಚಿತ್ರಗಳಲ್ಲಿ: ಭೋಪಾಲ್ ದುರಂತದಲ್ಲಿ ಮಡಿದವರಿಗೆ ನಮನ
ಬೆಂಗಳೂರು, ಡಿ. 3 : ಬೆಂಗಳೂರಿನ ಏಕತಾ ಗುಂಪಿನ ಸದಸ್ಯರು ಪುರಭವನದ ಎದುರಿಗೆ ಸೇರಿ 1984ರ ಭೋಪಾಲ್ ಅನಿಲ ದುರಂತದಲ್ಲಿ ಸಾವನ್ನಪ್ಪಿದವರಿಗೆ ನಮನ ಸಲ್ಲಿಸಿದರು. ಆಪ್ ಕಿ ಅದಾಲತ್ ಗೆ 21 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು.
ಮುಂಬೈ ನಲ್ಲಿ 2015ರ ವಿಶ್ವಕಪ್ ಟ್ರೋಫಿ ಪ್ರದರ್ಶಿಸಿದ ವೀರೇಂದ್ರ ಸೆಹ್ವಾಗ್, ಎನ್ ಡಿಎ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಮತ್ತಷ್ಟು ಚಿತ್ರಗಳು...
ನಮನ
1984ರ ಭೋಪಾಲ್ ಅನಿಲ ದುರಂತದಲ್ಲಿ ಮಡಿದವರಿಗೆ ಏಕತಾ ಗುಂಪಿನ ಸದಸ್ಯರು ಬೆಂಗಳೂರು ಪುರಭವನದ ಎದುರಿಗೆ ಸೇರಿ ನಮನ ಸಲ್ಲಿಸಿದರು.
ಮಾನವತೆ ತುಂಬಿ
ಅನಿಲ ದುರಂತದ ಪರಿಣಾಮವನ್ನು ಭೋಪಾಲ್ ನಲ್ಲಿ ಇನ್ನು ಅನುಭವಿಸುತ್ತಿದ್ದು ಅವರಿಗೆಲ್ಲ ನೆರವು ನೀಡಬೇಕಿದೆ ಎಂಬ ಭಿತ್ತಿ ಪತ್ರ ಪ್ರದರ್ಶನ.
ವಿಶ್ವಕಪ್ ಟ್ರೋಫಿ
ಮುಂಬೈ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 2015ರ ವಿಶ್ವಕಪ್ ಟ್ರೋಫಿ ಪ್ರದರ್ಶಿಸಿದ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್.
ರಾಹುಲ್ ಪ್ರತಿಭಟನೆ
ದೆಹಲಿ ಮಹಾತ್ಮ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ ನಾಯಕರೊಂದಿಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ.
ಸಚಿವರ ಭೇಟಿ
ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ಯುವೆಸ್ ಲಿಡ್ರಿಯಾನ್ ಮತ್ತು ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಭೇಟಿ.
ಸಿಂಧು ಸಂತಸ
ಮಕಾವೊ ಪ್ರಶಸ್ತಿ ಜಯಿಸಿದ ನಂತರ ತವರಿಗೆ ಆಗಮಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೈದ್ರಾಬಾದ್ ನಲ್ಲಿ ಕಾಣಿಸಿಕೊಂಡರು.
ಕಾದಾಟ
ದೆಹಲಿ ಮತ್ತು ಕೊಲ್ಕತ್ತಾ ನಡುವೆ ನಡೆದ ಐಎಸ್ ಎಲ್ ವಾಲಿಬಾಲ್ ಪಂದ್ಯವೊಂದರ ದೃಶ್ಯ
ಸೈನಿಕರ ರಂಜನೆ
ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಾಯುಸೇನೆ ಸೈನಿಕರಿಂದ ಮನರಂಜನಾ ಕಾರ್ಯಕ್ರಮ.
ಆಪ್ ಕಿ ಅದಾಲತ್ ಗೆ 21 ವರರ್ಷ
ಆಪ್ ಕಿ ಅದಾಲತ್ ಕಾರ್ಯಕ್ರಮಕ್ಕೆ 21 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು