ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಸ್‌ನಿಂದ ಮೃತರಾದ ಪತ್ರಕರ್ತರನ್ನು ಕೋವಿಡ್ ವಾರಿಯರ್‌ಗಳೆಂದು ಪರಿಗಣಿಸಿ: ಪಿಸಿಐ

|
Google Oneindia Kannada News

ನವದೆಹಲಿ, ಡಿಸೆಂಬರ್ 3: ಕೊರೊನಾ ವೈರಸ್ ಸೋಂಕಿನಿಂದ ಮರಣ ಹೊಂದಿದ ಪತ್ರಕರ್ತರನ್ನು ಕೂಡ ವೈದ್ಯರು ಹಾಗೂ ಇತರೆ ಅಗತ್ಯ ಆರೋಗ್ಯ ಸಿಬ್ಬಂದಿಯಂತೆ 'ಕೋವಿಡ್ ವಾರಿಯರ್'ಗಳೆಂದು ಪರಿಗಣಿಸಿ ಅದರ ಅಡಿಯಲ್ಲಿ ಸವಲತ್ತುಗಳನ್ನು ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಮನವಿ ಮಾಡಿದೆ.

ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಪಿಸಿಐ, ಹರಿಯಾಣ ಸರ್ಕಾರ ಈಗಾಗಲೇ ಜಾರಿಗೆ ಮಾಡಿರುವಂತಹ ಪತ್ರಕರ್ತರಿಗೆ ಗ್ರೂಪ್ ಇನ್ಶೂರೆನ್ಸ್ ಅನ್ನು ರೂಪಿಸಿ ಜಾರಿಗೆ ತರುವಂತೆ ಕೂಡ ಕೋರಿದೆ.

ಕೊರೊನಾ ವೈರಸ್ ನಿಂದ ಮೈಸೂರಿನ ಯುವ ಪತ್ರಕರ್ತ ನಿಧನಕೊರೊನಾ ವೈರಸ್ ನಿಂದ ಮೈಸೂರಿನ ಯುವ ಪತ್ರಕರ್ತ ನಿಧನ

'ಸರ್ವಾನುಮತದ ನಿರ್ಣಯದಂತೆ ಎಲ್ಲ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರಕ್ಕೆ ಸಮಿತಿಯು ಶಿಫಾರಸು ಮಾಡಿದ್ದು, ಹರಿಯಾಣ ಸರ್ಕಾರ ರೂಪಿಸಿರುವ ಪಾಲಿಸಿ ಮಾದರಿಗೆ ಅನುಗುಣವಾಗಿ ಪ್ರತ್ರಕರ್ತರಿಗೆ ಗ್ರೂಪ್ ಇನ್ಶೂರೆನ್ಸ್ ಯೋಜನೆಯನ್ನು ರಚಿಸಿ ಅನುಷ್ಠಾನಕ್ಕೆ ತರುವಂತೆ ಮನವಿ ಮಾಡಲಾಗಿದೆ' ಎಂದು ಪಿಸಿಐ ತಿಳಿಸಿದೆ.

PCI Urges Centre To Treat Journalists Who Succumbed To Virus As Covid Warriors

'ಕೋವಿಡ್ 19ರಿಂದ ಮೃತಪಟ್ಟ ಪತ್ರಕರ್ತರನ್ನು ಕೂಡ ವೈದ್ಯರು ಮತ್ತು ಇತರರಂತೆ ಕೋವಿಡ್ ವಾರಿಯರ್‌ಗಳೆಂದು ಪರಿಗಣಿಸಿ ಅದೇ ರೀತಿಯ ಸವಲತ್ತುಗಳನ್ನು ಒದಗಿಸಬೇಕು ಎಂದು ಕೂಡ ಶಿಫಾರಸು ಮಾಡಿದೆ' ಎಂದು ಹೇಳಿದೆ.

ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ವಿತರಣೆಶಿವಮೊಗ್ಗ ಜಿಲ್ಲೆಯ ಪತ್ರಕರ್ತರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ವಿತರಣೆ

Recommended Video

ODI ಪಾಯಿಂಟ್ಸ್ ಟೇಬಲ್ ಅಲ್ಲಿ Pakistan ಟಾಪ್! | Oneindia Kannada

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳಿಗೆ ಪಿಸಿಐ ಪತ್ರಗಳನ್ನು ರವಾನಿಸಿದೆ.

English summary
Press Council of India in a letter to Centre to treat journalist who died due to Covid-19 as Covid Warriors like doctors and other health staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X