ಸಂಸತ್ ದಾಳಿಗೆ 15 ವರ್ಷ, ರೂವಾರಿ ಅಜರ್ ಗೆ ಪಾಕ್ ಫುಡ್ಡು!
ನವದೆಹಲಿ, ಡಿಸೆಂಬರ್ 13: ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ ಮೇಲೆ ದಾಳಿಯಾಗಿ ಡಿಸೆಂಬರ್ 13ಕ್ಕೆ ಹದಿನೈದು ವರ್ಷಗಳಾಯಿತು. ಭಾರತದ ಸಂಸತ್ ಮೇಲೆ ಜೈಶ್ ಇ ಮೊಹ್ಮದ್ ಸಂಘಟನೆಗೆ ಸೇರಿದ ಉಗ್ರರು ನಡೆಸಿದ ದಾಳಿಯ ಗಾಯಕ್ಕೆ ಮತ್ತೊಂದು ವಾರ್ಷಿಕವೂ ಸೇರಿಹೋಗಿದೆ.
ಅಂದಿನ ದಾಳಿಯ ಹಿಂದೆ ಇದ್ದ ಮಾಸ್ಟರ್ ಮೈಂಡ್ ಇನ್ನೂ ಪಾಕಿಸ್ತಾನದಲ್ಲಿ ಆರಾಮವಾಗಿ ಓಡಾಡಿಕೊಂಡು ಇದ್ದಾನೆ. ಕಂದಹಾರ್ ಗೆ ವಿಮಾನ ಅಪಹರಿಸಿ, ಉಗ್ರ ಮಸೂದ್ ಅಜರ್ ನ ಬಿಡುಗಡೆ ಮಾಡುವಂತೆ ಒತ್ತಡ ಹಾಕಿ, ಅದರಲ್ಲೂ ಸಫಲವೂ ಅಗಿದ್ದಾಯಿತು. ಆ ನಂತರವೇ ಜೈಶ್ ಇ ಮೊಹ್ಮದ್ ಎಂಬ ಉಗ್ರಸಂಘಟನೆ ವಿಷ ಬೀಜಾಂಕುರವಾಯಿತು.[ದೆಹಲಿ ವಿವಿ ಮಾಜಿ ಉಪನ್ಯಾಸಕ ಎಸ್ಎಆರ್ ಗಿಲಾನಿ ಬಂಧನ]

ಅಜರ್ ನನ್ನು ಕಾನೂನು ಕಟ್ಟಳೆಯೊಳಗೆ ಎಳೆದು ತರ್ತೀವಿ ಎಂದು ಪರ್ವೇಜ್ ಮುಷರಫ್ ತಿಪ್ಪೆ ಸಾರಿಸಿದರೆ ವಿನಾ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಅಜರ್ ಮಾತ್ರ ಉಗ್ರ ಸಂಘಟನೆ ಆರಂಭಿಸಿ, ಭಾರತದ ಸಂಸತ್ ಮೇಲೆ ದಾಳಿ ಮಾಡಿಸಿಬಿಟ್ಟ. 2001ರ ಡಿಸೆಂಬರ್ 13ರಂದು ಜೈಶ್ ಇ ಮೊಹ್ಮದ್ ಉಗ್ರರು ಸಂಸತ್ ಸಮುಚ್ಚಯದಲ್ಲಿ ಗುಂಡು ಹಾರಿಸಿ, ಹನ್ನೆರಡು ಮಂದಿ ಸಾವಿಗೆ ಕಾರಣರಾದರು.
ಸಂಸತ್ ಕಲಾಪ ಮುಂದೂಡಿದ ನಲವತ್ತು ನಿಮಿಷದ ನಂತರ ದಾಳಿ ನಡೆದಿತ್ತು. ಆ ವೇಳೆ ಎಲ್ಲ ಸಂಸದರು ಹಾಗೂ ಸಚಿವರು ಸಂಸತ್ ನ ಒಳಗೆ ಇದ್ದಿದ್ದರಿಂದ ಯಾರಿಗೇನೂ ತೊಂದರೆ ಆಗಲಿಲ್ಲ. ಒಂದು ಗಂಟೆಗಳ ಗುಂಡಿನ ಚಕಮಕಿ ನಂತರ ಉಗ್ರಗಾಮಿಗಳನ್ನು ಕೊಲ್ಲಲಾಯಿತು. ಈ ಸಂಬಂಧ ಅಫ್ಜಲ್ ಗುರು, ಶೌಕತ್ ಹುಸೇನ್, ಎಸ್ ಎಆರ್ ಗಿಲಾನಿ ಮತ್ತು ನವಜೋತ್ ಸಂಧುನನ್ನು ಬಂಧಿಸಲಾಯಿತು.[ಉಂಡ ಮನೆಗೆ 2 ಬಗೆದಿದ್ದ ಗುರು ಟೈಂ ಲೈನ್]
ಆ ಪೈಕಿ ಸಂಧುಗೆ ಒಂದು ಪ್ರಕರಣ ಬಿಟ್ಟು ಉಳಿದಿದ್ದರಲ್ಲಿ ಖುಲಾಸೆಯಾಯಿತು. ಉಳಿದವರಿಗೆ ಮರಣದಂಡನೆ ಘೋಷಿಸಲಾಯಿತು. ಅದರಲ್ಲಿ ಗಿಲಾನಿಗೆ ಖುಲಾಸೆಯಾದರೆ, ಹುಸೇನ್ ನ ಮರಣದಂಡನೆ ಶಿಕ್ಷೆಯು ಜೀವಾವಧಿ ಶಿಕ್ಷೆಯಾಗಿ ಬದಲಿಸಲಾಯಿತು. ಅಫ್ಜಲ್ ಗುರು ಮರಣದಂಡನೆ ಖಾತ್ರಿಯಾದರೆ, ಗಿಲಾನಿ ಖುಳಾಸೆ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಫೆಬ್ರವರಿ 2012ರಲ್ಲಿ ಅಫ್ಜಲ್ ಗುರುವನ್ನು ನೇಣಿಗೇರಿಸಲಾಯಿತು.
ಹದಿನೈದು ವರ್ಷಗಳ ನಂತರ
ಆ ಹೇಯ ದಾಳಿ ನಡೆದು ಹದಿನೈದು ವರ್ಷಗಳ ನಂತರ ಕೂಡ ತುಂಬ ಬದಲಾಗಿಲ್ಲ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನಾ ದಾಳಿಗಳು ಭಾರತದಲ್ಲಿ ಆಗುತ್ತಲೇ ಇವೆ. ಅಜರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭಾರತ ಸಲ್ಲಿಸಿದ ಮನವಿ ಪಾಕ್ ನಿಂದ ಯಾವ ಸ್ಪಂದನೆ ಇಲ್ಲ.[ಡಿ.13ರ ಸಂಸತ್ ದಾಳಿಯನ್ನು ಮರೆಯಲು ಸಾಧ್ಯವೇ?]
ಅಜರ್ ಇಂದಿಗೂ ಐಎಸ್ ಐ ಪಾಲಿಗೆ ನೆಚ್ಚಿನ ವ್ಯಕ್ತಿ. ನಗ್ರೋಟಾ, ಪಠಾಣ್ ಕೋಟ್ ದಾಳಿಯಲ್ಲಿ ಕೂಡ ಜೈಶ್ ಇ ಮೊಹ್ಮದ್ ಉಗ್ರರ ಕೈವಾಡ ಇತ್ತು. ಆ ದಾಳಿ ನಡೆದಿದ್ದು ಕೂಡ ಇದೇ ಅಜರ್ ಆದೇಶದಂತೆ. ಅಜರ್ ಮೇಲೆ ನಿಷೇಧ ಹೇರಬೇಕೆಂಬ ಭಾರತದ ಕೋರಿಕೆಗೆ ಚೀನಾ ಅಡ್ಡಗಾಲಾಗಿ ನಿಂತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications