India Pakistan War: ಭಾರತದ ದಾಳಿಗೆ ಬೆಚ್ಚಿದ ಪಾಕಿಸ್ಥಾನ ಪ್ರಧಾನಿ ಗೌಪ್ಯ ಸ್ಥಳಕ್ಕೆ ಶಿಫ್ಟ್! ತೀವ್ರ ಮುಖಭಂಗ
India Pakistan Tensions: ಭಾರತದ ವಿವಿಧ ಗಡಿ ಪ್ರದೇಶಗಳಲ್ಲಿ ದಾಳಿ ಮಾಡಿದ ಪಾಕಿಸ್ತಾನಿ ಕ್ಷಿಪಣಿಗಳನ್ನು ಬ್ಲಾಕ್ ಮಾಡಿದ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ನಿರಂತರವಾಗಿ ಗಂಟೆಗಳ ಕಾಲ ಪಾಕ್ ಪೇಶಾವರ ನಗರ, ಮಿಲಿಟರಿ ಪ್ರದೇಶ, ಅಷ್ಟೇ ಯಾಕೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಷ್ ನಿವಾಸದ ಸಮೀಪವೇ ಮಿಸೈಲ್ ದಾಳಿ ನಡೆಸಿದೆ. ಪರಿಣಾಮ 24 ಗಂಟೆಯಲ್ಲಿ ತಿರುಗೇಟು ಕೊಡುವುದಾಗಿ ಗುಡುಗಿದ್ದ ಶಹಬಾಜ್ ಷರೀಷ್ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾನೆ. ಯುದ್ಧದ ಸಂದರ್ಭದಲ್ಲಿ ಸೈನ್, ಜನರನ್ನು ನಡು ನೀರಲ್ಲಿ ಕೈ ಬಿಟ್ಟು ಜೀವ ಉಳಿಸಿಕೊಳ್ಳಲು ತೆರಳಿದ್ದಾನೆ. ಈ ನಡೆಗೆ ಜಾಗತಿಕವಾಗಿ ಟೀಕೆ ವ್ಯಕ್ತವಾಗಿದೆ.
ಗುರುವಾರ ಸಂಜೆಯಿಂದಲೇ ಕ್ಷಿಪಣಿ ದಾಳಿ ಮಾಡಿದ್ದ ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದ ಭಾರತವು ಪ್ರತಿ ದಾಳಿ ಮಾಡಿ ಸಾಕಷ್ಟು ನಷ್ಟು ಉಂಟು ಮಾಡಿದೆ. ಸಿಂದೂರ ಆಪರೇಷನ್ 2ರಲ್ಲೂ ಸಹ ಭಾರತವು ಯಶಸ್ವಿಯಾಗಿದೆ. ಪಾಕಿಸ್ತಾನಕ್ಕೆ ಮುಟ್ಟಿನೋಡಿಕೊಳ್ಳುವಂತೆ ಮಾಡಿದೆ. ಇದಲ್ಲದೇ ಪಾಕಿಸ್ತಾನದ F 16 ಫೈಟರ್ ಜೆಟ್ ಅನ್ನು ಭಾರತೀಯ ವಾಯು ಪಡೆ ಉಡೀಸ್ ಮಾಡಿದೆ. ಪಾಕ್ ಮಿಲಿಟರಿ ಸಾಧನೆಗಳನ್ನು ಧ್ವಂಸಗೊಳಿಸುತ್ತಿದ್ದಂತೆ ಎಚ್ಚೆತ್ತ ಪಾಕ್ ಪ್ರಧಾನಿ ಷರಿಪ್ ಅಡಿಗಿ ಕೂತಿದ್ದಾನೆ.

ಪಾಕ್ ಪ್ರಧಾನಿ, ಸೇನಾ ಮುಖ್ಯಸ್ಥರಿಗೆ ನಡುಕ
ಪಾಕ್ ಸೇನಾ ಪ್ರದೇಶ, ರಾವಲ್ಪಿಂಡಿ ಭಾಗದಲ್ಲಿ ಭಾರತ ಕ್ಷಿಪಣಿ ದಾಳಿ ಮಾಡಿದೆ. ಭಾರತದ S 400 ರಕ್ಷಣಾ ವ್ಯವಸ್ಥೆಯಿಮದ ಪಾಕ್ ಕ್ಷಿಪಣಿಗಳನ್ನು, ಡ್ರೋನ್ಗಳನ್ನು ಧ್ವಂಸಗೊಳಿಸಲಾಗಿದೆ. ಇಸ್ಲಾಮಾಬಾದ್ನ ಹೈ-ಸೆಕ್ಯುರಿಟಿ ವಲಯಗಳ ಬಳಿ ಸ್ಫೋಟಗಳು ಸಂಭವಿಸಿವೆ. ಇದೆಲ್ಲ ಅರಿತು ಪಾಕ್ ಪ್ರಧಾನಿಯನ್ನು ಗೌಪ್ಯ ಸ್ಥಳಕ್ಕೆ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಪ್ರಧಾನಿ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಸೇರಿದಂತೆ ಪ್ರಮುಖ ಸರ್ಕಾರಿ ವ್ಯಕ್ತಿಗಳ ಸುತ್ತ ಭದ್ರತಾ ಕ್ರಮಗಳನ್ನು ಗಮನಾರ್ಹವಾಗಿ ತೀವ್ರಗೊಳಿಸಲಾಗಿದೆ. ಈ ಮೂಲಕ ಸದಾ ಶಾಂತಿ ಕಾಯ್ದುಕೊಳ್ಳುವ ಭಾರತಕ್ಕೆ ತೊಂದರೆ ನೀಡಿದರೆ ಎಂತಹ ತಿರುಗೇಟು ನೀಡಲು ಸಿದ್ಧ ಎಂಬುದು ವಿಶ್ವಕ್ಕೆ ಜಗಜ್ಜಾಹೀರಾಗಿದೆ.
ದೆಹಲಿ ಇಂಡಿಯಾ ಗೇಟ್ ಖಾಲಿ..
ಭಾರತದ ದಾಳಿಯಿಂದಾಗಿ ಪಾಕಿಸ್ತಾನ ಗಡಿ ಭಾಗಗಳು, ಜಮ್ಮು ಮತ್ತು ಕಾಶ್ಮೀರ ಉಗ್ರರ ನೆಲೆಗಳು, ಪಾಕ್ ಪ್ರಧಾನಿ ನಿವಾಸ ಸುತ್ತಮುತ್ತ ಸ್ಥಳಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಪಾಕ್ನ ಎಲ್ಲ ಮಿಸೈಲ್ಗಳನ್ನು ನೆಲಕ್ಕುರುಳಿಸಿದ ಭಾರತ ಭಾರತದ ದಾಳಿ ಜೊತೆಗೆ ಜೊತೆಗೆ ದೆಹಲಿ ಇಂಡಿಯಾ ಗೇಟ್ನಿಂದ ಜನರನ್ನು ಖಾಲಿ ಮಾಡಿಸಿದೆ. ಜನರ ಸುರಕ್ಷತೆಗಾಗಿ ಎಲ್ಲಿಯೂ ನಿಲ್ಲದಂತೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ. ದೆಹಲಿ ಸೇರಿದಂತೆ ಭಾರತ ಗಡಿಗಳಲ್ಲಿ, ಗಡಿ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಹೈ ಅಲರ್ಟ್ ಘೋಷಿಸಿದೆ..
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications