ಪಾಕಿಸ್ತಾನಕ್ಕೆ ಯುದ್ಧ ಬೇಡವಾಗಿದ್ದರೆ ಪಿಒಕೆಯನ್ನು ಬಿಟ್ಟುಕೊಡಲಿ:ರಾಮ್ದಾಸ್ ಅಠಾವಳೆ
ಚಂಡೀಗಢ, ಸೆಪ್ಟೆಂಬರ್ 14: ''ಪಾಕಿಸ್ತಾನಕ್ಕೆ ಯುದ್ಧ ಬೇಡವಾಗಿದ್ದರೆ ಪಾಕ್ ಆಕ್ರಮಿತ ಪ್ರದೇಶವನ್ನು ಭಾರತಕ್ಕೆ ಬಿಟ್ಟುಕೊಡಲಿ'' ಎಂದು ಕೇಂದ್ರ ಸಚಿವ ರಾಮ್ದಾಸ್ ಅಠಾವಳೆ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನವು ಭಾರತದ ಜೊತೆ ಯುದ್ಧ ಮಾಡಲು ಹಿಂದೇಟು ಹಾಕುತ್ತಿದೆ ಹಾಗಾದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಿಒಕೆಯನ್ನು ಭಾರತದಕ್ಕೆ ಬಿಟ್ಟುಕೊಡಬಹುದಲ್ಲ ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನವು ತಮ್ಮ ಒಳ್ಳೆಯತನವನ್ನು ಪ್ರದರ್ಶಿಸಬೇಕೆಂದಿದ್ದರೆ , ಭಾರತಕ್ಕೆ ಪಿಒಕೆಯನ್ನು ಬಿಟ್ಟುಕೊಡಿ ಇದರಿಂದ ಪಾಕಿಸ್ತಾನದ ಜನತೆಗೆ ಒಳಿತಾಗುತ್ತದೆ ಎಂದಿದ್ದಾರೆ.

ಪಿಒಕೆಯಲ್ಲಿ ವಾಸಮಾಡುತ್ತಿರುವವರಿಗೆ ಪಾಕಿಸ್ತಾನಕ್ಕೆ ಸೇರಲು ಇಷ್ಟವಿಲ್ಲ, ಭಾರತದ ಜೊತೆ ಇರಲು ಇಷ್ಟಪಡುತ್ತಿದ್ದಾರೆ. ಕಳೆದ 70 ವರ್ಷದಲ್ಲಿ ಪಾಕಿಸ್ತಾನವು ಒಂದನೇ ಮೂರು ಭಾಗದಲ್ಲಿ ಕಾಶ್ಮೀರವನ್ನು ವಶಪಡಿಸಿಕೊಂಡಿದೆ, ಇದು ಗಂಭೀರವಾದ ವಿಷಯ ಎಂದು ಹೇಳಿದರು.
ಭಾರತೀಯ ಸೇನೆಯು ಕೇಂದ್ರ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ. ಪೊಒಕೆ ಕುರಿತು ಯಾವುದೇ ಆದೇಶ ನೀಡಿದರೂ ನಾವು ಬದ್ಧ ಎಂದು ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದರು.












Click it and Unblock the Notifications