ಪದ್ಮಾವತಿ ಪ್ರತಿಭಟನೆ: ಜೈಪುರ ಕೋಟೆಯಲ್ಲಿ ನಿಗೂಢವಾಗಿ ಪತ್ತೆಯಾದ ಶವ!
ಜೈಪುರ, ನವೆಂಬರ್ 24: ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತಿ ಚಿತ್ರ ಬಿಡುಗಡೆಯನ್ನು ವಿರೋಧಿಸಿ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿದೆ. ಇಂದು(ನ.24) ಜೈಪುರದ ನಹಾರ್ಘರ್ ಕೋಟೆಯಲ್ಲಿ ವ್ಯಕ್ತಿಯೊಬ್ಬನ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಲ್ಲೇ ಪಕ್ಕದಲ್ಲಿದ್ದ ಕಲ್ಲಿನ ಮೇಲೆ ಬೆದರಿಕೆ ಸಂದೇಶವನ್ನೂ ಬರೆಯಲಾಗಿದೆ.
ನೆಲದಿಂದ 200 ಮೀ ಎತ್ತರದಲ್ಲಿ ದೇಹ ನೇತಾಡುತ್ತಿದ್ದು, ಮೊದಲಿಗೆ ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಭಾವಿಸಲಾಗಿತ್ತು. ಆದರೆ ಪಕ್ಕದ ಕಲ್ಲಿನಲ್ಲಿ ಬರೆದ ಸಂದೇಶವನ್ನು ನೋಡಿ ಇದು ಆತ್ಮಹತ್ಯೆಯೇ, ಕೊಲೆಯೇ ಎಂಬ ಅನುಮಾನ ಎದ್ದಿದೆ.

ಪದ್ಮಾವತಿ ವಿರುದ್ಧದ ಪ್ರತಿಭಟನೆಯಲ್ಲಿ ನಾವು ಕೇವಲ ಪ್ರತಿಮೆಗಳನ್ನು ಸುಡುವುದಿಲ್ಲ ಎಂಬರ್ಥದಲ್ಲಿ ಹಿಂದಿಯಲ್ಲಿ ಸಂದೇಶವನ್ನು ಕೆತ್ತಲಾಗಿದೆ. ಮೃತ ವ್ಯಕ್ತಿಯ ಗುರುತುಪತ್ತೆಯಾಗಿಲ್ಲವಾದರೂ, ಸುಮಾರು 40 ವರ್ಷದ ವ್ಯಕ್ತಿ ಎಂದು ಅಂದಾಜಿಸಲಾಗಿದೆ.












Click it and Unblock the Notifications