ರಜನಿಕಾಂತ್, ರವಿಶಂಕರ್ ಗುರೂಜಿಗೆ ಪದ್ಮ ವಿಭೂಷಣ ಪ್ರಶಸ್ತಿ

ನವದೆಹಲಿ, ಜ. 25: ಸೂಪರ್ ಸ್ಟಾರ್ ರಜನಿಕಾಂತ್, ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ರವಿಶಂಕರ್ ಗುರೂಜಿ ಅವರಿಗೆ ಪ್ರಸಕ್ತ ಸಾಲಿನ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಉಳಿದಂತೆ ಮಾಧ್ಯಮ ಕ್ಷೇತ್ರದಲ್ಲಿ ಈಟಿವಿಯ ರಾಮೋಜಿರಾವ್ ಸೇರಿದಂತೆ 10 ಜನ ಸಾಧಕರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸುತ್ತಿದೆ.

ಕ್ರೀಡಾ ಕ್ಷೇತ್ರದಲ್ಲಿ ಸೈನಾ ನೆಹ್ವಾಲ್ ಹಾಗೂ ಸಾನಿಯಾ ಮಿರ್ಜಾ ಇಬ್ಬರಿಗೂ ಪದ್ಮಭೂಷಣ ಲಭಿಸಿದೆ. ನಟ ಅನುಪಮ್ ಖೇರ್ ಗೆ ಪದ್ಮಭೂಷಣ, ನಿರ್ದೇಶಕ ಮಧುರ್ ಭಂಡಾರ್ಕರ್, ಅಜಯ್ ದೇವಗನ್ ಹಾಗೂ ನಟಿ ಪ್ರಿಯಾಂಕಾ ಛೋಪ್ರಾಗೆ ಪದ್ಮಶ್ರೀಗೆ ಆಯ್ಕೆ ಮಾಡಲಾಗಿದೆ.[ರಾಜಮೌಳಿಗೆ ಪದ್ಮಶ್ರೀ, ಸಿದ್ದರಾಮಯ್ಯಗೆ ಬಹಿರಂಗ ಪತ್ರ]

ಒಟ್ಟು 112 ಪ್ರಶಸ್ತಿ ವಿಜೇತರು, 10 ಪದ್ಮ ವಿಭೂಷಣ, 19 ಪದ್ಮ ಭೂಷಣ, 83 ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಒಟ್ಟಾರೆ 19 ಜನ ಮಹಿಳಾ ಸಾಧಕಿಯರು ಪಟ್ಟಿಯಲ್ಲಿದ್ದಾರೆ.

ಪದ್ಮ ವಿಭೂಷಣ
* ಯಾಮಿನಿ ಕೃಷ್ಣಮೂರ್ತಿ -ಕಲೆ-ನೃತ್ಯ-ದೆಹಲಿ
* ರಜನಿಕಾಂತ್-ಕಲೆ-ಸಿನಿಮಾ-ತಮಿಳುನಾಡು
* ಗಿರಿಜಾ ದೇವಿ-ಕಲೆ-ಶಾಸ್ತ್ರೀಯ ಗಾಯಕಿ- ಪಶ್ಚಿಮ ಬಂಗಾಳ
* ರಾಮೋಜಿ ರಾವ್ -ಮಾಧ್ಯಮ- ಆಂಧ್ರಪ್ರದೇಶ
* ವಿಶ್ವನಾಥನ್ ಶಾಂತಾ- ಮೆಡಿಸನ್-ಅಂಕಾಲಜಿ -ತಮಿಳುನಾಡು
* ರವಿಶಂಕರ್ ಗುರೂಜಿ- ಆಧಾತ್ಮ ಗುರು, ಆರ್ಟ್ ಆಫ್ ಲಿವಿಂಗ್-ಕರ್ನಾಟಕ
* ಜಗ್ಮೋಹನ್-ಸಾರ್ವಜನಿಕ ವ್ಯವಹಾರ-ದೆಹಲಿ
* ಡಾ. ವಸುದೇವ್ ಕಲ್ಕುಂಟೆ ಆತ್ರೆ-ವಿಜ್ಞಾನ ಮತ್ತು ಇಂಜಿನಿಯರಿಂಗ್-ಕರ್ನಾಟಕ
* ಅವಿನಾಶ್ ದಿಕ್ಷೀತ್ (ವಿದೇಶಿ)- ಸಾಹಿತ್ಯ ಹಾಗೂ ಶಿಕ್ಷಣ-ಯುಎಸ್ಎ
* ಧೀರೂಭಾಯಿ ಅಂಬಾನಿ (ಮರಣೋತ್ತರ)- ಉದ್ಯಮಿ- ಮಹಾರಾಷ್ಟ್ರ

Padma Vibhushan for Superstar Rajinikanth

ಪದ್ಮ ಭೂಷಣ
* ಅನುಪಮ್ ಖೇರ್- ಕಲೆ-ಸಿನಿಮಾ- ಮಹಾರಾಷ್ಟ್ರ
* ಉದಿತ್ ನಾರಾಯಣ್- ಕಲೆ-ಹಿನ್ನಲೆ ಗಾಯನ- ಮಹಾರಾಷ್ಟ್ರ
* ರಾಮ್ ವಿ ಸುತಾರ್-ಕಲೆ -ಶಿಲ್ಪಕಲೆ-ಉತ್ತರಪ್ರದೇಶ
* ಹೈಸ್ನಾಮ್ ಕನ್ಹೈಲಾಲ್-ಕಲೆ-ರಂಗಭೂಮಿ-ಮಣಿಪುರ
* ವಿನೋದ್ ರಾಯ್-ಸರ್ಕಾರಿ ಸೇವೆ-ಕೇರಳ
* ಯರ್ಲಗಡ್ಡಾ ಲಕ್ಷ್ಮಿ ಪ್ರಸಾದ್-ಸಾಹಿತ್ಯ-ಶಿಕ್ಷಣ-ಆಂಧ್ರಪ್ರದೇಶ
* ಪ್ರೊ ಎನ್.ಎಸ್ ರಾಮಾನುಜ ತಾತಾಚಾರ್ಯ-ಸಾಹಿತ್ಯ-ಶಿಕ್ಷಣ-ಮಹಾರಾಷ್ಟ್ರ
* ಡಾ. ಬರೀಂದರ್ ಸಿಂಗ್ ಹಮ್ದರ್ದ್-ಸಾಹಿತ್ಯ-ಮಾಧ್ಯಮ-ಪಂಜಾಬ್

* ಪ್ರೊ.ಡಾ ನಾಗೇಶ್ವರ್ ರೆಡ್ಡಿ-ವೈದ್ಯಕೀಯ-ತೆಲಂಗಾಣ
* ಸ್ವಾಮಿ ತೆಜೋಮಯಾನಂದ-ಆಧಾತ್ಮ-ಮಹಾರಾಷ್ಟ್ರ
* ಹಫೀಜ್ ಕಂಟ್ರಾಕ್ಟರ್-ವಾಸ್ತುಶಿಲ್ಪ-ಮಹಾರಾಷ್ಟ್ರ
* ರವೀಂದ್ರ ಚಂದ್ರ ಭಾರ್ಗವ-ಸಾರ್ವಜನಿಕ ವ್ಯವಹಾರ-ಉತ್ತರಪ್ರದೇಶ

* ಡಾ.ವೆಂಕಟ ರಾಮರಾವ್ ಅಲ್ಲ-ವಿಜ್ಞಾನ ಮತ್ತು ತಂತ್ರಜ್ಞಾನ-ಆಂಧ್ರಪ್ರದೇಶ
* ಸೈನಾ ನೆಹ್ವಾಲ್- ಕ್ರೀಡೆ-ಬಾಡ್ಮಿಂಟನ್-ತೆಲಂಗಾಣ
* ಸಾನಿಯಾ ಮಿರ್ಜಾ-ಕ್ರೀಡೆ-ಟೆನ್ನಿಸ್-ತೆಲಂಗಾಣ
* ಇಂದೂ ಜೈನ್-ಉದ್ಯಮ-ದೆಹಲಿ
* ಸ್ವಾಮಿ ದಯಾನಂದ ಸರಸ್ವತಿ(ಮರಣೋತ್ತರ)-ಆಧ್ಯಾತ್ಮ-ಉತ್ತರಾಖಂಡ್
* ಪಲ್ಲೋಂಜಿ ಶಾಪೂರ್ಜಿ ಮಿಸ್ತ್ರಿ (ಎನ್ನಾರೈ)-ಉದ್ಯಮ-ಐರ್ಲೆಂಡ್

ಪದ್ಮಶ್ರೀ
* ಪ್ರತಿಭಾ ಪ್ರಹ್ಲಾದ್-ಕಲೆ-ಶಾಸ್ತ್ರೀಯ ನೃತ್ಯ-ದೆಹಲಿ
* ಭಿಕುದಾನ್ ಗಾಧ್ವಿ-ಕಲೆ-ಜಾನಪದ ಸಂಗೀತ-ಗುಜರಾತ್
* ಶ್ರೀಭಾಸ್ ಚಂದ್ರ ಸುಪಾಕರ್-ಕಲೆ-ಜವಳಿ ವಿನ್ಯಾಸ-ಉತ್ತರಪ್ರದೇಶ
* ಅಜಯ್ ದೇವಗನ್-ಕಲೆ-ಸಿನಿಮಾ-ಮಹಾರಾಷ್ಟ್ರ
* ಪ್ರಿಯಾಂಕಾ ಛೋಪ್ರಾ-ಕಲೆ-ಸಿನಿಮಾ-ಮಹಾರಾಷ್ಟ್ರ
* ತುಳಸಿದಾಸ್ ಬೋರ್ಕರ್-ಕಲೆ-ಶಾಸ್ತ್ರೀಯ ಸಂಗೀತ-ಗೋವಾ
* ಡಾ.ಸೋಮಾ ಘೋಶ್-ಕಲೆ-ಶಾಸ್ತ್ರೀಯ ಗಾಯನ-ಉತ್ತರ ಪ್ರದೇಶ
* ನೀಲ ಮಢಾಬ್ ಪಂಡಾ-ಕಲೆ-ಸಿನಿಮಾ ನಿರ್ದೇಶನ-ದೆಹಲಿ
* ಎಸ್.ಎಸ್ ರಾಜಮೌಳಿ-ಕಲೆ-ಸಿನಿಮಾ ನಿರ್ದೇಶನ-ಕರ್ನಾಟಕ
* ಮಧುರ್ ಭಂಡಾರ್ಕರ್-ಕಲೆ-ಸಿನಿಮಾ ನಿರ್ದೇಶನ-ಮಹಾರಾಷ್ಟ್ರ
* ಪ್ರೊ.ಎಂ ವೆಂಕಟೇಶ್ ಕುಮಾರ್-ಕಲೆ ಜಾನಪಕ ಕಲಾವಿದ-ಕರ್ನಾಟಕ
* ಗುಲಾಬಿ ಸಪೆರ-ಕಲೆ-ಜಾನಪದ ನೃತ್ಯ- ರಾಜಸ್ಥಾನ
* ಮಮತಾ ಚಂದ್ರಾಕರ್-ಕಲೆ-ಜಾನಪದ ಸಂಗೀತ-ಚತ್ತೀಸ್ ಗಢ
* ಮಾಲಿನಿ ಅವಸ್ತಿ-ಕಲೆ-ಜಾನಪದ ಸಂಗೀತ-ಉತ್ತರಪ್ರದೇಶ
* ಜೈ ಪ್ರಕಾಶ್ ಲೇಖಿವಾಲ್-ಕಲೆ -ಚಿತ್ರಕಲೆ-ದೆಹಲಿ
* ಕೆ ಲಕ್ಷ್ಮಗೌಡ್-ಕಲೆ-ಚಿತ್ರಕಲೆ-ತೆಲಂಗಾಣ

* ಬಾಲಚಂದ್ರ ದತ್ತಾತ್ರೇಯ ಮೊಂಧೆ-ಕಲೆ-ಫೋಟೋಗ್ರಾಫಿ-ಮಧ್ಯಪ್ರದೇಶ

* ನರೇಶ್ ಚಂದರ್ ಲಾಲ್-ಕಲೆ-ರಂಗಭೂಮಿ-ಸಿನಿಮಾ- ಅಂಡಮಾನ್ ಅಂಡ್ ನಿಕೋಬಾರ್

* ಧೀರೇಂದ್ರ ನಾಥ್ ಬೇಜ್ಬಾರುವಾ-ಸಾಹಿತ್ಯ-ಅಸ್ಸಾಂ
* ಪ್ರಹ್ಲಾದ್ ಚಂದ್ರ ತಾಸಾ-ಸಾಹಿತ್ಯ-ಅಸ್ಸಾಂ

* ಡಾ. ರವೀಂದ್ರ ನಾಗರ್-ಸಾಹಿತ್ಯ-ದೆಹಲಿ

* ದಹ್ಯಾಭಾಯಿ ಶಾಸ್ತ್ರಿ-ಸಾಹಿತ್ಯ-ಗುಜರಾತ್

* ಡಾ. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ - ಸಾಹಿತ್ಯ-ಕರ್ನಾಟಕ

* ಹಲ್ದಾರ್ ನಾಗ್ -ಸಾಹಿತ್ಯ-ಒಡಿಶಾ

* ಕಾಮೇಶ್ವರಂ ಬ್ರಹ್ಮ-ಸಾಹಿತ್ಯ- ಪತ್ರಿಕೋದ್ಯಮ-ಅಸ್ಸಾಂ

* ಪ್ರೊ. ಪುಷ್ಪೇಶ್ ಪಂತ್-ಸಾಹಿತ್ಯ-ಪತ್ರಿಕೋದ್ಯಮ-ದೆಹಲಿ

* ಜವಹರಲಾಲ್ ಕೌಲ್-ಸಾಹಿತ್ಯ, ಪತ್ರಿಕೋದ್ಯಮ-ಜಮ್ಮು ಮತ್ತು ಕಾಶ್ಮೀರ

* ಅಶೋಕ್ ಮಲ್ಲಿಕ್-ಸಾಹಿತ್ಯ-ದೆಹಲಿ

* ಡಾ ಮನ್ನಂ ಗೋಪಿಚಂದ್-ವೈದ್ಯಕೀಯ-ತೆಲಂಗಾಣ
* ಪ್ರೊ ರವಿಕಾಂತ್-ವೈದ್ಯಕೀಯ-ಉತ್ತರಪ್ರದೇಶ

* ಪ್ರೊ.ರಾಮ್ ಹರ್ಷ್ ಸಿಂಗ್-ವೈದ್ಯಕೀಯ-ಆಯುರ್ವೇದ-ಉತ್ತರಪ್ರದೇಶ

* ಪ್ರೊ ಶಿವ್ ನಾರಾಯಣ್ ಕುರೀಲ್- ವೈದ್ಯಕೀಯ-ಉತ್ತರಪ್ರದೇಶ

* ಡಾ.ಸವ್ಯಸಾಚಿ ಸರ್ಕಾರ್- ವೈದ್ಯಕೀಯ-ಉತ್ತರಪ್ರದೇಶ

* ಡಾ.ಅಲ್ಲಾ ಗೋಪಾಲ ಕೃಷ್ಣ ಗೋಖಲೆ-ವೈದ್ಯಕೀಯ- ಆಂಧ್ರಪ್ರದೇಶ

* ಪ್ರೊ ಟಿಕೆ ಲಹಿರಿ-ವೈದ್ಯಕೀಯ-ಉತ್ತರಪ್ರದೇಶ

* ಡಾ. ಪ್ರವೀಣ್ ಚಂದ್ರ-ವೈದ್ಯಕೀಯ-ದೆಹಲಿ

* ಪ್ರೊ. ಡಾ. ದಲ್ಜೀತ್ ಸಿಂಗ್ ಗಂಭೀರ್-ವೈದ್ಯಕೀಯ-ಉತ್ತರಪ್ರದೇಶ.

* ಡಾ.ಚಂದ್ರಶೇಖರ್ ಶೇಷಾದ್ರಿ ತೊಗುಲುವ-ವೈದ್ಯಕೀಯ-ತಮಿಳುನಾಡು

* ಡಾ. ಅನಿಲ್ ಕುಮಾರಿ ಮಲ್ಹೋತ್ರ-ವೈದ್ಯಕೀಯ-ದೆಹಲಿ

* ಪ್ರೊ. ಎಂವಿ ಪದ್ಮ ಶ್ರೀವಾಸ್ತವ-ವೈದ್ಯಕೀಯ-ದೆಹಲಿ

* ಡಾ. ಸುಧೀರ್ ವಿ ಶಾ-ವೈದ್ಯಕೀಯ-ಗುಜರಾತ್

* ಡಾ.ಎಂಎಂ ಜೋಶಿ-ವೈದ್ಯಕೀಯ-ಕರ್ನಾಟಕ

* ಪ್ರೊ. ಡಾ. ಜಾನ್ ಎಬ್ನೆಜರ್-ವೈದ್ಯಕೀಯ-ಕರ್ನಾಟಕ

* ಡಾ. ನಾಯುಡಮ್ಮ ಯರ್ಲಗಡ್ಡಾ-ವೈದ್ಯಕೀಯ-ಆಂಧ್ರಪ್ರದೇಶ.

* ಸೈಮನ್ ಒರಾಯನ್-ಪರಿಸರ ಸಂರಕ್ಷಣೆ-ಜಾರ್ಖಂಡ್

* ಇಮ್ತಿಯಾಜ್ ಖುರೇಶಿ-ಪಾಕಶಾಸ್ತ್ರ-ದೆಹಲಿ

* ಪಿಯೂಶ್ ಪಾಂಡೆ-ಜಾಹೀರಾತು- ಸಂವಹನ-ಮಹಾರಾಷ್ಟ್ರ

* ಸುಭಾಷ್ ಪಾಲೇಕರ್- ಕೃಷಿ-ಮಹಾರಾಷ್ಟ್ರ

* ರವೀಂದರ್ ಕುಮಾರ್ ಸಿನ್ಹಾ-ವನ್ಯಜೀವಿ ಸಂರಕ್ಷಣೆ-ಬಿಹಾರ

* ಡಾ. ನಾಗೇಂದ್ರ -ಯೋಗ- ಕರ್ನಾಟಕ
* ಎಂ.ಸಿ. ಮೆಹ್ತಾ-ಸಾರ್ವಜನಿಕ ವ್ಯವಹಾರ-ದೆಹಲಿ

* ಎಂ.ಎನ್ ಕೃಷ್ಣಮಣಿ-ಸಾರ್ವಜನಿಕ ವ್ಯವಹಾರ-ದೆಹಲಿ

* ಉಜ್ವಲ್ ನಿಕಮ್-ಸಾರ್ವಜನಿಕ ವ್ಯವಹಾರ-ಮಹಾರಾಷ್ಟ್ರ

* ತೊಖೆಹೊ ಸೆಮಾ-ಸಾರ್ವಜನಿಕ ವ್ಯವಹಾರ-ನಾಗಾಲ್ಯಾಂಡ್

* ಡಾ.ಸತೀಶ್ ಕುಮಾರ್-ವಿಜ್ಞಾನ ಮತ್ತು ಇಂಜಿನಿಯರಿಂಗ್ -ದೆಹಲಿ

* ಡಾ. ಮೈಲಸ್ವಾಮಿ ಅಣ್ಣಾದೊರೈ-ವಿಜ್ಞಾನ ಮತ್ತು ಇಂಜಿನಿಯರಿಂಗ್-ಕರ್ನಾಟಕ
* ಪ್ರೊ. ದೀಪಾಂಕರ್ ಚಟರ್ಜಿ-ವಿಜ್ಞಾನ ಮತ್ತು ಇಂಜಿನಿಯರಿಂಗ್-ಕರ್ನಾಟಕ

* ಪ್ರೊ.ಗಣಪತಿ ದಾದಾಸಾಹೇಬ್ ಯಾದವ್-ವಿಜ್ಞಾನ ಮತ್ತು ಇಂಜಿನಿಯರಿಂಗ್-ಮಹಾರಾಷ್ಟ್ರ

* ಪ್ರೊ ವೀಣಾ ಥಂಡನ್-ವಿಜ್ಞಾನ ಮತ್ತು ಇಂಜಿನಿಯರಿಂಗ್-ಮೇಘಾಲಯ

* ಓಂಕಾರ್ ನಾಥ್ ಶ್ರೀವಾಸ್ತವ- ವಿಜ್ಞಾನ ಮತ್ತು ಇಂಜಿನಿಯರಿಂಗ್-ಉತ್ತರಪ್ರದೇಶ

* ಸುನೀತಾ ಕೃಷ್ಣನ್- ಸಮಾಜಸೇವೆ-ಆಂಧ್ರಪ್ರದೇಶ

* ಅಜೋಯ್ ಕುಮಾರ್ ದತ್ತ-ಸಮಾಜ ಸೇವೆ-ಅಸ್ಸಾಂ

* ಎಂ ಪಂಡಿತ್ ದಾಸ-ಸಮಾಜ ಸೇವೆ-ಕರ್ನಾಟಕ

* ಪಿ.ಪಿ ಗೋಪಿನಾಥನ್ ನಾಯರ್-ಸಮಾಜ ಸೇವೆ-ಕೇರಳ

* ಮೆಡೆಲೈನ್ ಹರ್ಮಾನ್ ಡಿ ಬ್ಲಿಕ್ -ಸಮಾಜ ಸೇವೆ-ಪುದುಚೇರಿ

* ಶ್ರೀನಿವಾಸನ್ ದಮಾಲ್ ಕಂಡಲಾಯಿ-ಸಮಾಜಸೇವೆ-ತಮಿಳುನಾಡು

* ಸುಧಾಕರ್ ಓವ್ಲೆ-ಸಮಾಜಸೇವೆ-ಮಹಾರಾಷ್ಟ್ರ

* ಡಾ. ಟಿ.ವಿ ನಾರಾಯಣ-ಸಮಾಜ ಸೇವೆ-ತೆಲಂಗಾಣ

* ಅರುಣಾಚಲಂ ಮುರುಗಂಥಮ್-ಸಮಾಜಸೇವೆ -ತಮಿಳುನಾಡು

* ದೀಪಿಕಾ ಕುಮಾರಿ-ಕ್ರೀಡೆ-ಬಿಲ್ಲುಗಾರಿಕೆ-ಜಾರ್ಖಂಡ್

* ಸುಶೀಲ್ ದೋಷಿ-ಕ್ರೀಡೆ-ಕಾಮೆಂಟರಿ-ಮಧ್ಯಪ್ರದೇಶ

* ಮಹೇಶ್ ಶರ್ಮ-ವ್ಯಾಪಾರ-ದೆಹಲಿ

* ಸೌರಭ್ ಶ್ರೀವಾಸ್ತವ-ಉದ್ಯಮ-ದೆಹಲಿ

* ದಿಲಿಪ್ ಸಾಂಘ್ವಿ-ಉದ್ಯಮ-ಮಹಾರಾಷ್ಟ್ರ

* ಡಾ.ಕೇಕಿ ಹರ್ಮುಸ್ಜಿ ಘಾರ್ಡಾ-ಉದ್ಯಮ-ಮಹಾರಾಷ್ಟ್ರ

* ಪ್ರಕಾಶ್ ಚಂದ್ ಸುರಾನ (ಮರಣೋತ್ತರ) -ಸಂಗೀತ-ರಾಜಸ್ಥಾನ

* ಸಯೀದ್ ಜಫ್ರಿ(ಮರಣೋತ್ತರ) ಎನ್ನಾರೈ-ಸಿನಿಮಾ-ಯುಕೆ

* ಮೈಕಲ್ ಪೊಸ್ಟೆಲ್(ವಿದೇಶಿ)-ಕಲೆ-ವಾಸ್ತುಶಿಲ್ಪ-ಫ್ರಾನ್ಸ್

* ಸಲ್ಮಾನ್ ಅಮೀನ್ ಸಲಾ ಖಾನ್ (ಎನ್ನಾರೈ-ಸಾಹಿತ್ಯ- ಯುಎಸ್ ಎ

* ಹುಯಿ ಲಾನ್ ಝಂಗ್ (ವಿದೇಶಿ)-ಯೋಗ-ಚೀನಾ
* ಪ್ರೆಡ್ರಾಗ್ ಕೆ ನಿಕಿಕ್ (ವಿದೇಶಿ)ಯೊಗ-ಸೆರ್ಬಿಯಾ

* ಡಾ. ಸುಂದರ್ ಆದಿತ್ಯಾ ಮೆನನ್ (ಎನ್ನಾರೈ)-ಸಮಾಜಸೇವೆ-ಯುಎಇ

* ಅಜಯ್ ಪಾಲ್ ಸಿಂಗ್ ಬಂಗಾ(ಎನ್ನಾರೈ)-ಉದ್ಯಮ-ಯುಎಸ್ ಎ

(ಪಿಐಬಿ ಪತ್ರಿಕಾ ಪ್ರಕಟಣೆ/ ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+