ಆನ್ ಲೈನ್ ಮೂಲಕ 3,700 ಕೋಟಿ ರು. ಲೂಟಿ ಮಾಡಿದ್ದವರ ಬಂಧನ
ಆನ್ ಲೈನ್ ಪೋರ್ಟಲ್ ಮೂಲಕ ಹೇರಳವಾಗಿ ಹಣ ಸಂಪಾದಿಸಬಹುದೆಂದು ಆಸೆ ತೋರಿಸಿ ಸುಮಾರು 6.5 ಲಕ್ಷ ಜನರನ್ನು ವಂಚಿಸಿದ್ದ ತಂಡ.
ಲಖನೌ, ಫೆಬ್ರವರಿ 3: ಆನ್ ಲೈನ್ ಪೋರ್ಟಲ್ ಮೂಲಕ ಹೂಡಿಕೆ ವ್ಯವಹಾರವನ್ನಾರಂಭಿಸಿ ಸುಮಾರು ಲಕ್ಷಾಂತರ ಗ್ರಾಹಕರಿಂದ 3,700 ಕೋಟಿ ರು.ಗಳಷ್ಟು ಹಣ ದೋಚಿದ್ದ ವಂಚಕರ ತಂಡವೊಂದನ್ನು ಉತ್ತರ ಪ್ರದೇಶ ಎಸ್ ಟಿಎಫ್ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧನದ ವೇಳೆ ಆರೋಪಿಗಳಿಂದ ಸುಮಾರು 500 ಕೋಟಿ ರು. ವಶಪಡಿಸಿಕೊಳ್ಳಲಾಗಿದೆ. ಇವರ ವಂಚನೆಗೆ ಸುಮಾರು ಆರೂವರೆ ಲಕ್ಷ ಜನರು ಮೋಸ ಹೋಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ಅನುಭವ್ ಮಿತ್ತಲ್, ಶ್ರೀಧರ್ ಪ್ರಸಾದ್ ಹಾಗೂ ಮಹೇಶ್ ದಯಾಳ್ ಎಂಬುವರು ನೋಯ್ಡಾ ವಿಳಾಸ ಹೊಂದಿರುವ ಅಬ್ಲೇಜ್ ಇನ್ಫೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯೊಂದರ ಅಡಿಯಲ್ಲಿ ಸೋಷಿಯಲ್ ಟ್ರೇಡ್ ಡಾಟ್ ಬಿಝ್ ಎಂಬ ಆನ್ ಲೈನ್ ಹೂಡಿಕೆ ಪೋರ್ಟಲ್ ಅನ್ನು ಸ್ಥಾಪಿಸಿದ್ದರು.

ಅನುಭವ್ ಮಿತ್ತಲ್ ಈ ಮೋಸದ ಕಂಪನಿಯ ಪ್ರಮುಖ ರೂವಾರಿ ಎಂದು ಹೇಳಲಾಗಿದ್ದು, ಈತ ಬಿಟೆಕ್ ಪದವೀಧರ ಹಾಗೂ ಗಾಜಿಯಾಬಾದ್ ಮೂಲದವ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಶ್ರೀಧರ್ ಪ್ರಸಾದ್ ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಸೇರಿದವನಾಗಿದ್ದು ಮಹೇಶ್ ದಯಾಳ್ ಎಂಬಾತ ಉತ್ತರ ಪ್ರದೇಶದ ಮಥುರಾದವನು ಎಂದು ಹೇಳಲಾಗಿದೆ.
ಆಸಕ್ತ ಗ್ರಾಹಕರು ಇದರಲ್ಲಿ 5,750 ರು.ಗಳಿಂದ 57,500 ರು.ಗಳವರೆಗೆ ಹೂಡಿಕೆ ಮಾಡಿ ಸಂಸ್ಥೆಯ ಸದಸ್ಯತ್ವ ಪಡೆಯಬೇಕಿತ್ತು. ಹಾಗೆ ಸದಸ್ಯತ್ವ ಪಡೆದ ಗ್ರಾಹಕರು ಈ ಆನ್ ಲೈನ್ ಪೋರ್ಟಲ್ ಸರ್ಚ್ ಮಾಡುವ ವೇಳೆ ಪ್ರತಿಯೊಂದು ಬಾರಿ ಕ್ಲಿಕ್ ಮಾಡಿದಾಗಲೂ ಐದು ರು.ಗಳು ಗ್ರಾಹಕರ ಖಾತೆಗೆ ಜಮೆಯಾಗುತ್ತದೆ ಎಂಬ ಆಶ್ವಾಸನೆಯನ್ನು ಕಂಪನಿ ನೀಡಿತ್ತು.
2015ರಲ್ಲ ಈ ಕಂಪನಿ ಹುಟ್ಟುಹಾಕಲಾಗಿದ್ದು, ಇದರಲ್ಲಿ ಸದಸ್ಯತ್ವ ಪಡೆದ ಎಲ್ಲರಿಗೂ ಈ ವೆಬ್ ಸೈಟ್ ನಲ್ಲಿರುವ ಕೆಲವಾರು ಪೇಜ್ ಗಳನ್ನು ಲೈಕ್ ಮಾಡುವಂತೆ ಸೂಚಿಸಲಾಗಿತ್ತು. ಹೀಗೆ, ಪ್ರತಿ ಪೇಜ್ ಗಳನ್ನು ಲೈಕ್ ಮಾಡುವಾಗ ಕ್ಲಿಕ್ ಮಾಡುತ್ತಾ ಹೋದಂತೆ ಗ್ರಾಹಕರ ಖಾತೆಗೆ ಹಣ ಹರಿದುಬರುವುದಾಗಿ ಹೇಳಲಾಗಿತ್ತು.
ಆದರೆ, ಇದು ಕೇವಲ ಮೋಸದಾಟವಾಗಿದ್ದರಿಂದ ಆರೋಪಿಗಳು ಹಣ ಬಂದು ಒಂದಿಷ್ಟು ಗ್ರಾಹಕರ ಸೇರ್ಪಡೆಯಾದ ಮೇಲೆ ವೆಬ್ ಸೈಟ್ ನ ಪೋರ್ಟಲ್ ಹೆಸರನ್ನು ಪದೇ ಪದೇ ಬದಲಾಯಿಸಿಬಿಡುತ್ತಿದ್ದರು. ಆಗ, ಹಣ ಹಾಕಿದವರಿಗೆ ಈ ವೆಬ್ ಸೈಟ್ ಸಿಗುತ್ತಲೇ ಇರಲಿಲ್ಲ. ಈ ಮೂಲಕ ಅವರು ಗ್ರಾಹಕರನ್ನು ವಂಚಿಸುತ್ತಿದ್ದರೆಂದು ಉತ್ತರ ಪ್ರದೇಶದ ಎಸ್ ಟಿಎಫ್ ಪೊಲೀಸ್ ಕಮೀಷನರ್ ತ್ರಿವೇಣಿ ಸಿಂಗ್ ಹೇಳಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications