ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಹುಲ್ ಗಾಂಧಿಗೆ ಕಾದಿದೆ 'ಕರ್ನಾಟಕ ಬಂದ್'ನ ಸ್ವಾಗತ
ಬೆಂಗಳೂರು, ಜೂನ್ 10: ಜೂನ್ 12ರಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ ಅದೇ ದಿನ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಹೀಗಾಗಿ ರಾಹುಲ್ ಗಾಂಧಿಗೆ ಬಂದ್ ನ ಸ್ವಾಗತ ಸಿಗುವಂತೆ ಕಾಣಿಸುತ್ತಿದೆ.
ನೆಹರೂ ಕಾಲದ 'ನ್ಯಾಷನಲ್ ಹೆರಾಲ್ಡ್'ಗೆ ಬೆಂಗಳೂರಲ್ಲಿ ಪುನರ್ಜನ್ಮ
ಜೂನ್ 12ರಂದು ಬೆಂಗಳೂರಿಗೆ ಬರಲಿರುವ ರಾಹುಲ್ ಗಾಂಧಿ ನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ 'ನ್ಯಾಷನಲ್ ಹೆರಾಲ್ಡ್ ಪತ್ರಿಕೆ'ಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಕೆಪಿಸಿಸಿಯ ಸಾಮಾನ್ಯ ಸಭೆಯಲ್ಲೂ ಭಾಗವಹಿಸಲಿದ್ದಾರೆ.
ಆದರೆ ಅದೇ ದಿನ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆಲವು ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ರೈತರ ಪರವಾಗಿ ಅವತ್ತು ವಿಧಾನಸವಧಕ್ಕೆ ರ್ಯಾಲಿ ನಡೆಸುವುದಾಗಿ ವಾಟಾಳ್ ನಾಗರಾಜ್ ಹೇಳಿದ್ದಾರೆ. ಇದರಿಂದ ರಾಹುಲ್ ಗಾಂಧಿ ಭೇಟಿಗೆ ಭದ್ರತೆ ನೀಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
Comments
karnataka bandh sonia gandhi rahul gandhi bengaluru congress ಕರ್ನಾಟಕ ಬಂದ್ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಬೆಂಗಳೂರು ಕಾಂಗ್ರೆಸ್
English summary
Vice President of the Congress Rahul Gandhi is scheduled to visit Bengaluru on June 12. While Rahul Gandhi will release National Herald's Commemorative Publication, pro-Kannada organisations have called for a bandh over farmer crisis.
Story first published: Saturday, June 10, 2017, 17:44 [IST]