ಓಲಾ ಕ್ಯಾಬ್ ಸಿಇಒ ಭವಿಶ್ ಕುಟುಂಬದಲ್ಲಿ ದುರಂತ
ಲೂಧಿಯಾನ (ಪಂಜಾಬ್), ಫೆ.04: ಓಲಾ ಕ್ಯಾಬ್ ಸರ್ವೀಸ್ ಸಂಸ್ಥೆ ಸಿಇಒ ಭವಿಶ್ ಅಗರವಾಲ್ ಕುಟುಂಬದಲ್ಲಿ ದುರಂತ ಸಂಭವಿಸಿ ಒಂದು ವಾರವಾದರೂ ಪೊಲೀಸರು ಯಾವುದೇ ತನಿಖೆ ಕೈಗೊಂಡಿಲ್ಲ ಎಂದು ಅಗರವಾಲ್ ಕುಟುಂಬ ಆರೋಪಿಸಿದೆ. ಆದರೆ, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಯುಕ್ತ ನರೀಂದ್ರ ಭಾರ್ಗವ್ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಜನವರಿ 29ರಂದು ಭವಿಶ್ ಅವರ ಅಜ್ಜಿ ಹಾಗೂ ಸಂಬಂಧಿಯೊಬ್ಬರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದರು.ಈ ಪ್ರಕರಣದಲ್ಲಿ ಮೊದಲಿಗೆ ಮನೆಕೆಲಸದಾಕೆ ಪೂಜಾ ಮೇಲೆ ಅನುಮಾನ ವ್ಯಕ್ತವಾಗಿತ್ತು. ಪೂಜಾ ಘಟನೆ ನಡೆದ ದಿನ ರಾತ್ರಿ 12.43 ರ ಸಮಯದಲ್ಲಿ ಯಾರೋ ಒಬ್ಬರು ಪೊಲೀಸ್ ಕಂಟ್ರೋಲ್ ರೂಮಿಗೆ ಬ್ಲಾಂಕ್ ಕಾಲ್ ಮಾಡಿದ್ದರು. 1.30ರ ಸಮಯದಲ್ಲಿ ಕೊಲೆ ನಡೆದಿದೆ.

ಲೂಧಿಯಾನದ ಶೇರ್ ಇ ಪಂಜಾಬ್ ಕಾಲೋನಿಯ ಮನೆಯಲ್ಲಿ ಈ ಡಬ್ಬಲ್ ಮರ್ಡರ್ ಆಗಿದ್ದು, ಪೂಜಾರನ್ನು ಸಾಕ್ಷಿ ಹೇಳಲು ಕರೆದೊಯ್ದ ಪೊಲೀಸರು ನಂತರ ಆಕೆಯನ್ನು ಚೆನ್ನಾಗಿ ಥಳಿಸಿದ್ದಾರೆ. ಈ ಬಗ್ಗೆ ತಿಳಿದ ಆಕೆಯ ಮನೆಯವರು ಠಾಣೆ ಮುಂದೆ ಪ್ರತಿಭಟನೆ ಮಾಡಿ ಆಕೆಯನ್ನು ಬಿಡಿಸಿಕೊಂಡು ಹೋಗಿದ್ದಾರೆ.
ಮೃತರನ್ನು ಪುಷ್ಪಾವತಿ ಅಗರ್ ವಾಲ್ (84) ಹಾಗೂ ಡಾ. ಸರಿತಾ ಅಗರ್ ವಾಲ್ (57) ಎಂದು ಗುರುತಿಸಲಾಗಿದೆ. ತಲೆ, ಕೈಕಾಲು ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಅಟಾಪ್ಸಿ ವರದಿಯಂತೆ ಹ್ಯಾಮರ್ ಬಳಸಿ ಕೃತ್ಯ ಎಸಗಲಾಗಿದೆ. ಆದರೆ, ಘಟನಾ ಸ್ಥಳದಲ್ಲಿ ಯಾವುದೇ ಆಯುಧ ಸಿಕ್ಕಿಲ್ಲ.
ಘಟನೆ ದಿನ ಕಂಟ್ರೋಲ್ ರೂಮಿಗೆ 2.15ರ ಸುಮಾರಿಗೆ ಪೂಜಾ ಅವರು ಕರೆ ಮಾಡಿ ವಿಷಯ ತಿಳಿಸಿದರು. ಪೂಜಾ ವಿಚಾರಣೆ ಬಳಿಕ ಇದು ಹಣದ ಆಸೆಗಾಗಿ ಪೂಜಾ ನಡೆಸಿದ ಕೃತ್ಯವಲ್ಲ ಎಂದು ತಿಳಿದು ಬಂದಿದೆ.
ನಂತರ ಈ ಹಿಂದೆ ಡ್ರೈವರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಅನುಮಾನ ಬಂದಿದೆ. ಇದು ಹಳೆ ದ್ವೇಷಕ್ಕಾಗಿ ನಡೆದ ಕೊಲೆ ಎಂದು ಸದ್ಯಕ್ಕೆ ಪೊಲೀಸರು ತೀರ್ಮಾನಿಸಿದ್ದಾರೆ. ಆದರೆ, ಪೂಜಾ ಬಂಧನ, ಬಿಡುಗಡೆ ಹೊರತೂ ಯಾರೊಬ್ಬರ ವಿಚಾರಣೆ ನಡೆಸದಿರುವುದಕ್ಕೆ ಅಗರವಾಲ್ ಕುಟುಂಬದಿಂದ ಆಕ್ಷೇಪ ವ್ಯಕ್ತವಾಗಿದೆ. ಲೂಧಿಯಾನ ಪೊಲೀಸರಿಗೆ ಇನ್ನೂ ಸರಿಯಾದ ಸುಳಿವು ಪತ್ತೆಯಾಗಿಲ್ಲ (ಒನ್ ಇಂಡಿಯಾ ಸುದ್ದಿ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications