Odia Sambad: ವಿವಿಧ ಬ್ಯಾಂಕ್ಗಳಿಂದ ಕೋಟಿಗಟ್ಟಲೇ ಸಾಲ ಪಡೆದ ಸುದ್ದಿ ಪತ್ರಿಕೆ ಸಂಸ್ಥೆ, ತನಿಖೆ
ನವದೆಹಲಿ, ಸೆಪ್ಟಂಬರ್ 20: ಒಡಿಯಾ ಪತ್ರಿಕೆ 'ಸಂಬಾದ್' ವಿವಿಧ ಬ್ಯಾಂಕ್ಗಳಲ್ಲಿ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿದೆ. ಸಾಲಕ್ಕಾಗಿ ಉದ್ಯೋಗಿಗಳ ನಕಲಿ ವೇತನ ಪ್ರಮಾಣ ಪತ್ರ ಒದಗಿಸಲಾಗಿದೆ ಎಂದು ಒಡಿಶಾ ಪೊಲೀಸ್ ಆರ್ಥಿಕ ಅಪರಾಧ ವಿಭಾಗ (EOW) ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಒಡಿಯಾ ಪತ್ರಿಕೆ 'ಸಂಬಾದ್' ಇದು ಬ್ಯಾರನ್ ಸೌಮ್ಯ ರಂಜನ್ ಪಟ್ನಾಯಕ್ ಅವರ ಒಡೆತನದಲ್ಲಿದೆ. ಈ ಪತ್ರಿಕೆ ಹೆಸರಿನಲ್ಲಿ ವಿವಿಧ ಬ್ಯಾಂಕ್ಗಳಿಂದ ಕನಿಷ್ಠ ₹50 ಕೋಟಿ ಸಾಲ ಪಡೆಯುವ ಮೂಲಕ "ಸೂಕ್ಷ್ಮ ಸಂಘಟಿತ ಸಾಲ ಹಗರಣ" ನಡೆಸಿದೆ ಎಂದು EOW ಹೇಳಿಕೊಂಡಿದೆ. ಈ ಸಂಬಂಧ ಅಧಿಕಾರಿಗಳು ಸೋಮವಾರ ಸಂಬಾದ್ ಕಚೇರಿ ಮೇಲೆ ದಾಳಿ ನಡೆಸಿತ್ತು.

ಬಿಜು ಜನತಾ ದಳ ಪಕ್ಷದಲ್ಲಿನ ಬಣ ಕಲಹದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನದಿಂದ ಪಟ್ನಾಯಕ್ ಅವರನ್ನು ಕೆಳಗಿಳಿಸಿದ ವಾರದೊಳಗೆ ಈ ಬೆಳವಣಿಗೆ ನಡೆದಿದೆ.
ಭಾರತೀಯ ದಂಡ ಸಂಹಿತೆ 506, 467, 468, 471, 420, ಮತ್ತು 120 ಬಿ ಅಡಿಯಲ್ಲಿ ದಿನಪತ್ರಿಕೆಯ ಮಾಜಿ ಉದ್ಯೋಗಿ ಆಶಿಮ್ ಮೊಹಾಪಾತ್ರ ಕಳೆದ ವಾರ ದೂರು ಸಲ್ಲಿಸಿದ ನಂತರ ಒಡಿಯಾ ದೈನಿಕ ವಿರುದ್ಧ EOW ತನಿಖೆ ಆರಂಭಿಸಿದೆ.
ಒಂದೇ ತೆರನಾಗಿ ಸಾಲ ಸ್ವೀಕಾರ
ಇನ್ನೂ ಮಾನವ ಸಂಪನ್ಮೂಲ (HR) ಮುಖ್ಯಸ್ಥ ಮತ್ತು ಸಂಬಾದ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (COO) ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿವಿಧ ಬ್ಯಾಂಕ್ಗಳಲ್ಲಿ ಪಡೆದ ಸಾಲದ ರೀತಿಗಳು ಬಹುತೇಕ ಎಲ್ಲವು ಒಂದೇ ತೆರನಾಗಿವೆ.

ಬ್ಯಾಂಕ್ನ ಸುಲಭ ಹಣ ಸಾಲ ಯೋಜನೆಯಡಿ ಈ ಪತ್ರಿಕೆಯ ಉದ್ಯೋಗಿಗಳಿಗೆ ಮನೆ/ಮನೆ ದುರಸ್ತಿ ಮುಂತಾದ ಆಧಾರದ ಮೇಲೆ ಒಟ್ಟು ₹5 ಲಕ್ಷ ಸಾಲ ಮಂಜೂರು ಆಗಿದೆ. ಅದಕ್ಕಾಗಿ ನಕಲಿ ವೇತನ ಪತ್ರ ಸಲ್ಲಿಸಲಾಗಿದ್ದು ಬೆಳಕಿಗೆ ಬಂದಿದೆ. ನಿಜವಾದ ಸಂಬಳಕ್ಕೂ ಸಂಬಾದ್ ತಯಾರಿಸಿದ ಸಂಬಳ ಪ್ರಮಾಣ ಪತ್ರಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ.
ಉದ್ಯೋಗಿಗಳು ಸಾಲದ ಹಣ ಸ್ವೀಕರಿಸಿಲ್ಲ
ಸಾಲದ ನಮೂನೆಗಳನ್ನು ಬೇರೊಬ್ಬರು ಸಿದ್ಧಪಡಿಸಿ ಭರ್ತಿ ಮಾಡಿದ್ದಾರೆ. ಆದರೆ ಒಬ್ಬ ಉದ್ಯೋಗಿಯು ಸಾಲದ ಪಡೆದ ಹಣದಲ್ಲಿ ಒಂದು ಪೈಸೆ ಸಹ ಸ್ವೀಕರಿಸಿಲ್ಲ. ಒಮ್ಮೆ ಸಾಲ ಮಂಜೂರಾದರೆ, ಮೊತ್ತವನ್ನು ನಗದು ರೂಪದಲ್ಲಿ ಹಿಂಪಡೆಯಲಾಗುತ್ತಿತ್ತು. ಪಾವತಿಸಬೇಕಾದ EMI ಉದ್ಯೋಗಿಗಳ ನಿವ್ವಳ ಸಂಬಳಕ್ಕೆ ಸಮನಾಗಿತ್ತು.
ಕೆಲವು ನೌಕರರು 2-3 ಬಾರಿ ಸಾಲ ಪಡೆಯುವಂತೆ ಒತ್ತಾಯಿಸಿದ್ದಾರೆ. ಇಎಂಐಗಳನ್ನು ಸಂಬಾದ್ ಅವರು 60 ಕಂತುಗಳಲ್ಲಿ ಪಾವತಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ, ನೌಕರರು ರಾಜೀನಾಮೆ ನೀಡಿದರೂ ಸಂಬಾದ್ ಅವರಿಂದ EMI ಗಳನ್ನು ಪಾವತಿಸಲಾಗಿದೆ. ಹೀಗಾಗಿ ವರ್ಷಗಳಿಂದಲೂ ಬ್ಯಾಂಕ್ಗಳು ಸಾಲ ಮಂಜೂರು ಮುಂದುವರಿಸಿವೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಬಾದ್ ಪತ್ರಿಕೆಯ 350 ಕ್ಕೂ ಹೆಚ್ಚು ಉದ್ಯೋಗಿಗಳು ಒಡಿಶಾ ಗ್ರಾಮ್ಯ ಬ್ಯಾಂಕ್, ಭುವನೇಶ್ವರದಲ್ಲಿರುವ ಐಆರ್ಸಿ ವಿಲೇಜ್ ಶಾಖೆಯಿಂದ ಸಾಲ ಪಡೆದಿದ್ದಾರೆ. ಎಸ್ಬಿಐ ಮತ್ತು ಇತರ ಬ್ಯಾಂಕ್ಗಳಿಂದ ಪಡೆದ ಸಾಲವನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications