ವಿಡಿಯೋ, ಚಿತ್ರಗಳಲ್ಲಿ ಲಕ್ಷದ್ವೀಪದ ಓಖಿ ಅಬ್ಬರ!
ಲಕ್ಷದ್ವೀಪ, ಡಿಸೆಂಬರ್ 02: ಮೂರ್ನಾಲ್ಕು ದಿನಗಳಕಾಲ ತಮಿಳುನಾಡು ಮತ್ತು ಕೇರಳದ ಜನರ ನಿದ್ದೆಕೆಡಿಸಿದ್ದ ಓಖಿ ಚಂಡಮಾರುತ ಇದೀಗ ಲಕ್ಷದ್ವೀಪದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದೆ!
In Pics:ಓಖಿ ಸೋಕಿದ ಊರೆಲ್ಲ ನೀರೋ ನೀರು, ನೆಲ ನೋಡಿದ ಮರಗಳು
ಸುತ್ತೆಲ್ಲ ಕಡಲು ತುಂಬಿದ ಸುಂದರ, ರಮಣೀಯ ದ್ವೀಪಕ್ಕೀಗ ಸುಡುಗಾಡಿನ ಛಾಯೆ! ಉದುರಿಬಿದ್ದ ಮರಗಳು, ಭೋರ್ಗರೆವ ಕಡಲು, ಮನೆ-ಮನೆಯಯನ್ನೇ ಬೀಳಿಸುವಂಥ ರಭಸದ ಗಾಳಿ ಎಲ್ಲವೂ ಸೇರಿ ಲಕ್ಷದ್ವೀಪದ ಜನರ ನೆಮ್ಮದಿ ಕದ್ದಿವೆ. ಪ್ರವಾಸಕ್ಕೆಂದು ತೆರಳಿದ್ದ ಜನರೂ ಅಲ್ಲಿ ಸಿಕ್ಕಿಹಾಕಿಕೊಂಡು ಏನು ಮಾಡಬೇಕೆಂದೇ ತೋಚದೆ ಆತಂಕದಲ್ಲಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ ಪ್ರಕೃತಿಯ ಅಗಾಧ ಶಕ್ತಿಯ ವಿರುದ್ಧ ಹೋರಾಡುವುದಕ್ಕೆ ಸಾಧ್ಯವೇ? ಲಕ್ಷದ್ವೀಪದಲ್ಲಿ ಓಖಿ ಚಂಡಮಾರುತ ಸೃಷ್ಟಿಸಿದ ಸ್ಮಶಾನಸದೃಶ ದೃಶ್ಯಗಳ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಲ್ಲಿರುವ ಪ್ರತಿಯೊಬ್ಬರೂ ಯಾವ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿರಲಿ, ಓಖಿ, ಚಂಡಿ ಬಿಟ್ಟು ಸುಮ್ಮನಾಗಿಬಿಡು ಪ್ಲೀಸ್... ಎಂದು ಚಂಡಮಾರುತವನ್ನು ಹಲವರು ಪ್ರಾರ್ಥಿಸಿದ್ದಾರೆ. ಎಲ್ಲರ ಪ್ರಾರ್ಥನೆ ಓಖಿಗೆ ಕೇಳೀತಾ? ಅದು ಮುನಿಸನ್ನೆಲ್ಲ ಮರೆತು ಸುಮ್ಮನಾದೀತಾ..? ಆಗಲಿ ಎಂಬುದು ನಮ್ಮದೂ ಹಾರೈಕೆ.
ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ಓಖಿ ಅಬ್ಬರ ಕೆಲವು ವಿಡಿಯೋ, ಚಿತ್ರಗಳು ಇಲ್ಲಿವೆ. ಲಕ್ಷದ್ವೀಪದ ಜನರ ಪಾಡನ್ನು ಪದಗಳಿಗಿಂತ ಪರಿಣಾಮಕಾರಿಯಾಗಿ ಈ ವಿಡಿಯೋ ಮತ್ತು ಚಿತ್ರಗಳೇ ಹೇಳುವುದು ಸುಳ್ಳಲ್ಲ!
|
ನಮ್ಮ ಪ್ರಾರ್ಥನೆ ನಿಮಗಾಗಿ!
ಸದ್ಯಕ್ಕೆ ಓಖಿ ಚಂಡಮಾರುತ ಲಕ್ಷದ್ವೀಪದತ್ತ ಸಾಗಿದೆ. ಅಲ್ಲಿನ ಜನರಿಗಾಗಿ ನಮ್ಮೆಲ್ಲ ಪ್ರಾರ್ಥನೆ ಎಂದು ಬದ್ರುದ್ದೀನ್ ಎಂಬುವವರು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ. ಮಂಗಳೂರಿನಲ್ಲಿ ಓಖಿ ಭೀತಿ ಆವರಿಸಿದ್ದು, ಕಡಲ ತೀರದಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.
|
ಗಂಟೆಗೆ 110-120 ಕಿ.ಮೀ.ವೇಗ!
ಸೈಕ್ಲೋನ್ ಓಖಿ ಇದೀಗ ಲಕ್ಷದ್ವೀಪದತ್ತ ಮನೆಮಾಡಿದೆ. ಎಲ್ಲೆಡೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಶ್ವಿನ್ ತಿರುವನಂತಪುರಂ ಟ್ವೀಟ್ ಮಾಡಿದ್ದಾರೆ. ಓಖಿ ಸದ್ಯಕ್ಕೆ ಗಂಟೆಗೆ 110-120 ಕಿ.ಮೀ.ವೇಗದಲ್ಲಿ ಸಾಗುತ್ತಿದೆ!
|
ಲಕ್ಷದ್ವೀಪಕ್ಕೆ ಬೇಕಿದೆ ಹೆಚ್ಚಿನ ರಕ್ಷಣೆ
ಲಕ್ಷದ್ವೀಪ ಅಪಾಯದಲ್ಲಿದೆ. ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಏಕೆಂದರೆ ಅಲ್ಲಿ ವಿದ್ಯುತ್ ಇಲ್ಲ, ಸಂವಹನ ಮಾಧ್ಯಮಗಳೂ ಇಲ್ಲ. ಭದ್ರತೆಯಿಲ್ಲ, ರಕ್ಷಣಾ ಕಾರ್ಯಾಚರಣೆಯೂ ಇಲ್ಲ ಎಂದು ಶಫೀಖ್ ರಹಮಾನ್ ಎನ್ನುವವರು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.
|
ಲಕ್ಷದ್ವೀಪದ ಈಗಿನ ಚಿತ್ರ
ಲಕ್ಷದ್ವೀಪದಲ್ಲಿರುವ ನನ್ನ ಸ್ನೇಹಿತ ಮೊಹಮ್ಮದ್ ಸಲೀಮ್ ಈಗಷ್ಟೆ ಕಳಿಸಿದ ಚಿತ್ರಗಳು ಇವು ಎಂದು ಕೆಲವು ಚಿತ್ರಗಳನ್ನು ಬದ್ರುದ್ದೀನ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಲಕ್ಷದ್ವೀಪದ ಭಯಾನಕ ಸ್ಥಿತಿಯನ್ನು ಈ ಚಿತ್ರಗಳು ಸಮರ್ಪಕವಾಗಿ ತೋರಿಸುತ್ತಿವೆ!
|
ಲಕ್ಷದ್ವೀಪದ ಬೆಳಗ್ಗಿನ ಚಿತ್ರ!
ಇಂದು ಬೆಳಿಗ್ಗೆ ಲಕ್ಷದ್ವೀಪದಲ್ಲಿ ಸ್ಮಶಾನ ಸದೃಶ ನಾತಾವರಣ ಸೃಷ್ಟಿಯಾಗಿತ್ತು. ಎಲ್ಲೆಲ್ಲೂ ಮುರಿದು ಬಿದ್ದ ಮರಗಳು, ಮನೆಗಳು, ಮಳೆ, ನೀರು... ನರಪಿಳ್ಳೆಯ ಪತ್ತೆಯಿಲ್ಲ! ಅವುಗಳ ಚಿತ್ರವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications