ನೂಪುರ್ ಶರ್ಮಾ ವಿವಾದ: ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಕಂಪನಿ ಹೇಳಿದ್ದೇನು?

ನವದೆಹಲಿ, ಜೂನ್ 13: ಟ್ವಿಟ್ಟರ್‌ನಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಬಿಜೆಪಿಯಿಂದ ನವೀನ್ ಕುಮಾರ್ ಜಿಂದಾಲ್ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಮಾಧ್ಯಮ ಸಂಸ್ಥೆಗಳು ಮಾಡಿರುವ ವರದಿ ಗೊಂದಲಗೊಳಿಸುತ್ತಿವೆ ಎಂದು ಜಿಂದಾಲ್ ಸ್ಟೀಲ್ ಮತ್ತು ಪವರ್ ಹೇಳಿಕೆ ನೀಡಿದೆ. ಉಚ್ಚಾಟನೆಗೊಂಡಿರುವ ನವೀನ್ ಕುಮಾರ್ ಬದಲಿಗೆ ನವೀನ್ ಜಿಂದಾಲ್‌ ಚಿತ್ರವನ್ನು ಕೆಲವರು ಬಳಸಿ ವರದಿ ಮಾಡಿದ್ದಾರೆ. ಇದರಿಂದ ಜಿಂದಾಲ್ ಕಡೆಗೆ ಆಕ್ರೋಶದ ಕಿಡಿಗಳು ಬರಲಾರಂಭಿಸಿವೆ. ಹೀಗಾಗಿ, ಗುರುತು ಪತ್ತೆ ಪ್ರಮಾದದ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಿದೆ.

"ಇತ್ತೀಚಿನ ಕೆಲವು ಬೆಳವಣಿಗೆಗಳಲ್ಲಿ ನವೀನ್ ಕುಮಾರ್ ಜಿಂದಾಲ್ ಅವರ ಹೆಸರನ್ನು ಒಳಗೊಂಡಿದೆ. ಬೆಳವಣಿಗೆಗಳು ನಮ್ಮ ಗುಂಪಿನ ಅಧ್ಯಕ್ಷ ನವೀನ್ ಜಿಂದಾಲ್‌ಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸುತ್ತೇವೆ. ಮಾಧ್ಯಮದ ಕೆಲವು ವಿಭಾಗಗಳು ವಿಷಯವನ್ನು ವರದಿ ಮಾಡುವಾಗ ನಮ್ಮ ಅಧ್ಯಕ್ಷರ ಛಾಯಾಚಿತ್ರಗಳನ್ನು ತಪ್ಪಾಗಿ ಬಳಸಿದ್ದಾರೆ. ಇದು ಸ್ಪಷ್ಟವಾಗಿ ತಪ್ಪಾದ ಗುರುತಿನ ಪ್ರಕರಣವಾಗಿದೆ" ಎಂದು ಗುಂಪು ಹೇಳಿಕೆಯಲ್ಲಿ ತಿಳಿಸಿದೆ.

ಬಿಜೆಪಿಯಿಂದ ಅಮಾನತು

ಬಿಜೆಪಿಯಿಂದ ಅಮಾನತು

ಸಮುದಾಯಗಳ ನಡುವೆ ಧಾರ್ಮಿಕ ದ್ವೇಷವನ್ನು ಹುಟ್ಟುಹಾಕಿದ ಆರೋಪದ ಮೇಲೆ ಬಿಜೆಪಿ ನಾಯಕ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಅವರು ಹಲವು ರಾಜ್ಯಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಟಿವಿ ಕಾರ್ಯಕ್ರಮದ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರನ್ನು ಬಿಜೆಪಿ ಅಮಾನತುಗೊಳಿಸಿತ್ತು.

ವಿವಿಧೆಡೆ ಹಿಂಸಾಚಾರದ ಪ್ರತಿಭಟನೆ

ವಿವಿಧೆಡೆ ಹಿಂಸಾಚಾರದ ಪ್ರತಿಭಟನೆ

ಇಬ್ಬರು ಬಿಜೆಪಿ ನಾಯಕರ ಹೇಳಿಕೆಗೆ ಹಲವು ಅರಬ್ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಹೇಳಿಕೆಯು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ಹಿಂಸಾಚಾರದ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಹಿಂಸಾಚಾರದ ನಡುವೆ ರಾಂಚಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹಲವಾರು ಮುಸ್ಲಿಂ ಸಂಸ್ಥೆಗಳು ಶಾಂತಿಗಾಗಿ ಮನವಿ ಮಾಡಿಕೊಂಡಿವೆ.

ಶರ್ಮಾ ಮತ್ತು ನವೀನ್ ವಿರುದ್ಧ ಪ್ರತಿಭಟನೆ

ಶರ್ಮಾ ಮತ್ತು ನವೀನ್ ವಿರುದ್ಧ ಪ್ರತಿಭಟನೆ

ಟಿವಿ ಸುದ್ದಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ನಂತರ ನೂಪುರ್ ಶರ್ಮಾ ದೇಶ ವಿದೇಶದಲ್ಲಿ ಬಿರುಗಾಳಿ ಎದ್ದಿದೆ. ಆಕೆಯ ಕಾಮೆಂಟ್‌ಗಳ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ. ಜೊತೆಗೆ ಪ್ರತಿಭಟನೆಗಳು ನಡೆದಿವೆ.

ಬಿಜೆಪಿ ಹೇಳಿದ್ದೇನು?

ಬಿಜೆಪಿ ಹೇಳಿದ್ದೇನು?

ಕ್ರಮಕ್ಕೆ ಒತ್ತಾಯ ಬಿಗುವಿನ ವಾತಾವರಣ ನಿರ್ಮಾಣಗೊಳ್ಳುತ್ತಿದ್ದಂತೆ ಬಿಜೆಪಿಯು ಶರ್ಮಾ ಅವರನ್ನು ಅಮಾನತುಗೊಳಿಸಿದೆ ಮತ್ತು "ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವ ಅಥವಾ ಅವಮಾನಿಸುವ ಯಾವುದೇ ಸಿದ್ಧಾಂತಕ್ಕೆ ಬಿಜೆಪಿ ವಿರುದ್ಧವಾಗಿದೆ" ಎಂದು ಹೇಳಿಕೆ ನೀಡಿದೆ. "ಅಂತಹ ಜನರನ್ನು ಅಥವಾ ತತ್ವಶಾಸ್ತ್ರವನ್ನು ಉತ್ತೇಜಿಸುವುದಿಲ್ಲ" ಎಂದು ಹೇಳಿದೆ.

ಆದರೆ, ಬಿಜೆಪಿ ನಾಯಕರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಶುಕ್ರವಾರದ ಪ್ರಾರ್ಥನೆಯ ನಂತರ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು, ಹಲವಾರು ಜನರು ಪ್ರವಾದಿ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿದರು ಮತ್ತು ನೂಪುರ್ ಶರ್ಮಾ ಅವರ ಬಂಧನಕ್ಕೆ ಒತ್ತಾಯಿಸಿದರು. ಪಶ್ಚಿಮ ಬಂಗಾಳ, ಕರ್ನಾಟಕ, ದೆಹಲಿ, ಉತ್ತರಪ್ರದೇಶ ಹೀಗೆ ಹಲವಾರು ರಾಜ್ಯಗಳಲ್ಲಿ ಪ್ರವಾದಿ ವಿರುದ್ಧ ಹೇಳಿಕೆ ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+