ಜಾತಿ ಆಧಾರದ ಮೇಲೆ ಯಾರನ್ನೂ ಸಿಎಂ ಮಾಡಿಲ್ಲ: ಗೆಹ್ಲೋಟ್
ಜೈಪುರ, ಡಿಸೆಂಬರ್ 27: ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ತಮ್ಮ ಸಮುದಾಯದ ಏಕೈಕ ಶಾಸಕರಾಗಿರುವ ಕಾರಣ ಜಾತಿಯ ಆಧಾರದ ಮೇಲೆ ರಾಜಸ್ಥಾನದ ಮುಖ್ಯಮಂತ್ರಿಯಾಗಲಿಲ್ಲ ಎಂದು ಹೇಳಿದ್ದಾರೆ.
ಗುಜ್ಜರ್ ಸಮುದಾಯಕ್ಕೆ ಸೇರಿದ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ರಾಜ್ಯ ಕಾಂಗ್ರೆಸ್ನ ಒಂದು ಬಣದಿಂದ ಬೇಡಿಕೆಗಳ ನಡುವೆ ಗೆಹ್ಲೋಟ್ ಅವರು ಹೇಳಿಕೆ ನೀಡಿದ್ದಾರೆ. 2018ರ ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗಿನಿಂದ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಮುಖ್ಯಮಂತ್ರಿ ಪಟ್ಟದ ಬಗ್ಗೆ ಗುದ್ದಾಟ ಇದ್ದೇ ಇದೆ.
ಕೋವಿಡ್: ಜನ ಆಕ್ರೋಶ್ ಯಾತ್ರೆ ಸ್ಥಗಿತಗೊಳಿಸಿದ ಬಿಜೆಪಿ
ಸಮಾಜದ ಎಲ್ಲಾ ವರ್ಗಗಳ ಪ್ರೀತಿ ಮತ್ತು ಆಶೀರ್ವಾದದಿಂದಾಗಿ ತಾವು ಮುಖ್ಯಮಂತ್ರಿಯಾಗಿದ್ದೇನೆ ಎಂದು ಪುನರುಚ್ಚರಿಸಿದ ಗೆಹ್ಲೋಟ್ ಅವರು, ರಾಜಸ್ಥಾನ ವಿಧಾನಸಭೆಯಲ್ಲಿ ಮಾಲಿ ಸಮುದಾಯದ ಏಕೈಕ ಶಾಸಕರಾಗಿದ್ದಾರೆ. ಜನರು ಅವರನ್ನು ಮೂರು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇಂದು ನಾನು ಮುಖ್ಯಮಂತ್ರಿಯಾಗಿದ್ದೇನೆ. ಹೀಗಾಗಿ ಜಾಟ್, ಗುಜ್ಜರ್, ರಜಪೂತ, ಕುಶ್ವಾಹ, ಜಾತವ್, ಬ್ರಾಹ್ಮಣ, ಬನಿಯಾ, ಮೀನಾ ಹೀಗೆ ಪ್ರತಿಯೊಂದು ಸಮುದಾಯಕ್ಕೂ ಸೇವೆ ಸಲ್ಲಿಸಲು ನಾನು ಬಯಸುತ್ತೇನೆ. ಏಕೆಂದರೆ, ಜಾತಿಯ ಆಧಾರದ ಮೇಲೆ ಯಾರನ್ನೂ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿಲ್ಲ ಎಂದು ನನಗೆ ತಿಳಿದಿದೆ ಎಂದು ಗೆಹ್ಲೋಟ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಸರಣಿ ಟ್ವೀಟ್ಗಳಲ್ಲಿ ಅವರು ಭರತ್ಪುರ ಜಿಲ್ಲೆಯ ನಾದ್ಬೈನಲ್ಲಿ ಭಾನುವಾರ ನಡೆದ ಕಾರ್ಯಕ್ರಮವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳ ಅಡಿಪಾಯ ಹಾಕಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಎಲ್ಲಾ ಸಮುದಾಯದವರು ನನ್ನನ್ನು ಪ್ರೀತಿಸದಿದ್ದರೆ, ಆಶೀರ್ವಾದ ಮಾಡದಿದ್ದರೆ, ನನ್ನನ್ನು 3 ಬಾರಿ ಮುಖ್ಯಮಂತ್ರಿ ಮಾಡುವುದು ಹೇಗೆ ಸಾಧ್ಯ. ಇಲ್ಲಿ ಮುಖ್ಯ ವಿಷಯವೆಂದರೆ ನನ್ನ ಜಾತಿಯನ್ನು ಸೈನಿ ಎಂದು ಕರೆಯುತ್ತಾರೆ, ಅದನ್ನು ಕುಶ್ವಾಹ ಎಂದು ಕರೆಯುತ್ತಾರೆ, ಅದನ್ನು ಮಾಲಿ ಎಂದು ಕರೆಯುತ್ತಾರೆ ಎಂದರು.
ವಿಧಾನಸಭೆಯಲ್ಲಿ ನನ್ನ ಜಾತಿಯ ಒಬ್ಬನೇ ಎಂಎಲ್ಎ ಇದ್ದಾನೆ. ಅದು ನಾನೇ, ಕೆಲವೊಮ್ಮೆ, ನಾನು ಎಂತಹ ಅದೃಷ್ಟವಂತ ಎಂದು ಭಾವಿಸುತ್ತೇನೆ, ರಾಜಸ್ಥಾನದ ಜನರು ನನ್ನನ್ನು ಮೂರು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ನನ್ನ ಅದೃಷ್ಟ ಎಂದು ಅವರು ಹೇಳಿದರು. ಮೂರು ಬಾರಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮೂರು ಬಾರಿ ಮುಖ್ಯಮಂತ್ರಿ ಆಗಿದ್ದು, ರಾಜಸ್ಥಾನದ ಜನತೆಯ ಪ್ರೀತಿ, ವಾತ್ಸಲ್ಯ ಮತ್ತು ಆಶೀರ್ವಾದದಿಂದಾಗಿ ಹೈಕಮಾಂಡ್ ತನ್ನ ಮೇಲೆ ಇಷ್ಟೊಂದು ನಂಬಿಕೆ ಇಡುತ್ತಿದೆ. ಜಾತಿ, ಮತ, ಧರ್ಮವನ್ನು ಲೆಕ್ಕಿಸದೆ ರಾಜಸ್ಥಾನದ ಪ್ರತಿಯೊಬ್ಬ ಬಡವರ ಕಣ್ಣೀರು ಒರೆಸುವ ಪ್ರಯತ್ನ ಮಾಡುವುದಾಗಿ ಸಿಎಂ ಹೇಳಿದರು.