ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿಶಂಕರ್ ಗುರೂಜಿ ಒಡೆತನದ ಕಟ್ಟಡ ನೆಲಸಮಕ್ಕೆ ಆದೇಶ!

By Mahesh
|
Google Oneindia Kannada News

ಕೋಲ್ಕತಾ, ಅಕ್ಟೋಬರ್ 29: ಒಂದೆಡೆ ಅಯೋಧ್ಯಾದ ಇಮಾಮ್ ಗಳು, ಸ್ವಾಮೀಜಿಗಳ ಜತೆ ಮಧ್ಯಸ್ಥಿಕೆ ಮಾತಕತೆಯಲ್ಲಿ ಆರ್ಟ್ ಆಫ್ ಲಿವಿಂಗ್(ಎಒಎಲ್) ನ ರವಿಶಂಕರ್ ಗುರೂಜಿ ತೊಡಗಿದ್ದಾರೆ. ಇನ್ನೊಂದೆಡೆ, ಅನಧಿಕೃತ ಕಟ್ಟಡ ಎಂದು ಹೇಳಿ ಕೋಲ್ಕತಾದ ಎಒಎಲ್ ನ ಕಟ್ಟಡ ನೆಲಸಮಕ್ಕೆ ಅಲ್ಲಿನ ಆಡಳಿತ ಆದೇಶ ನೀಡಿದೆ.

ರಾಮ ಮಂದಿರ ನಿರ್ಮಾಣಕ್ಕೆ ಸಮಯ ಪ್ರಶಸ್ತ : ಶ್ರೀಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಮಯ ಪ್ರಶಸ್ತ : ಶ್ರೀಶ್ರೀ

ಅಯೋಧ್ಯೆ ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಆರ್ಟ್‌ ಆಫ್‌ ಲಿವಿಂಗ್‌ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಮುಂದಾಗಿದ್ದು, ನಿರ್ಮೋಹಿ ಅಖಾರದ ಆಚಾರ್ಯ ರಾಮದಾಸ್‌ ಮುಂತಾದ ಸ್ವಾಮೀಜಿಗಳು ಮತ್ತು ಮುಸ್ಲಿಂ ಧಾರ್ಮಿಕ ಗುರುಗಳ ಜತೆ ಸಂಪರ್ಕದಲ್ಲಿದ್ದಾರೆ.

NGT orders demolition of building owned by Sri Sri Ravi Shankar's trust in Kolkata

ಈ ನಡುವೆ ರವಿಶಂಕರ್ ಗುರೂಜಿ ಸ್ಥಾಪನೆಯ ಆರ್ಟ್ ಆಫ್ ಲಿವಿಂಗ್ ಸ್ವಾಮ್ಯದ ವೈದಿಕ್ ಧರ್ಮ ಸಂಸ್ಥಾಪನಾ ಟ್ರಸ್ಟ್ ಗೆ ಸೇರಿದ ಕಟ್ಟಡವೊಂದು ಅಕ್ರಮವಾಗಿದ್ದು, ಪಾಲಿಕೆಯ ಪರಿಸರ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಈಸ್ಟ್ ಕೋಲ್ಕತಾ ವೆಟ್ ಲ್ಯಾಂಡ್ ಮ್ಯಾನೇಜ್ಮೆಂಟ್ ಅಥಾರಿಟಿ (ಇಕೆಡಬ್ಲ್ಯೂಎಂಎ) ನೋಟಿಸ್ ಜಾರಿ ಮಾಡಿದೆ.

ಈ ಹಿಂದೆ ಇದೇ ಕಟ್ಟಡಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಎಫ್ಐಆರ್ ದಾಖಲಿಸಲಾಗಿತ್ತು. ಕೋಲ್ಕತಾ ಮೂಲದ ಎನ್ ಜಿಒ ಸಲ್ಲಿಸಿದ್ದ ಅರ್ಜಿ ಮೇರೆಗೆ ನಂತರ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ಕೂಡಾ ನೋಟಿಸ್ ನೀಡಿತ್ತು. ನೋಟಿಸ್ ಗೆ ಉತ್ತರ ಸಿಗದ ಕಾರಣ, ಕಟ್ಟಡವನ್ನು ಕೆಡವುವಂತೆ ಆದೇಶಿಸಿದೆ.

English summary
The NGT order, passed earlier this week, asked the East Kolkata Wetland Management Authority (EKWMA) to "remove all illegal structures" raised by the Vaidic Dharma Sansthan Trust, a part of Sri Sri Ravi Shankar's Art of Living foundation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X