ತ್ರಿಪುರ: ಪತ್ರಕರ್ತನ ಸಾವಿಗೆ ಕಪ್ಪು ಸಂಪಾದಕೀಯದ ಪ್ರತಿಭಟನೆ
ಅಗರ್ತಲ, ನವೆಂಬರ್ 23: ತ್ರಿಪುರದ ಅಗರ್ತಲದ ಆರ್.ಕೆ.ನಗರದಲ್ಲಿ ನ.21 ರಂದು ಹತ್ಯೆಗೊಳಗಾದ ಪತ್ರಕರ್ತ ಸುದೀಪ್ ದತ್ತ ಭೌಮಿಕ್ ಅವರ ಹತ್ಯೆಯನ್ನು ಖಂಡಿಸಿ ತ್ರಿಪುರಾದ ಬಹುತೇಕ ಎಲ್ಲ ಪತ್ರಿಕೆಗಳೂ 'ಸಂಪಾದಕೀಯ'ದ ಜಾಗವನ್ನು ಖಾಲಿ ಬಿಟ್ಟು, ಆ ಜಾಗಕ್ಕೆ ಕಪ್ಪು ಬಣ್ಣ ಹಾಕಿ ಪ್ರತಿಭಟಿಸಿವೆ.
ಈ ಹತ್ಯೆ ಪತ್ರಿಕಾ ಸ್ವಾತಂತ್ರ್ಯದ ದುರಂತ ಅಂತ್ಯ ಎಂದು ಇಲ್ಲಿನ ಪತ್ರಕರ್ತರು ವಿಷಾದ ವ್ಯಕ್ತಪಡಿಸಿದ್ದಾರೆ. ತನಿಖಾ ಪತ್ರಕರ್ತರಾಗಿದ್ದ ಸುದೀಪ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ವಾಗ್ವಾದ ನಡೆಸಿದ ನಂತರ ಅವರನ್ನು ತ್ರಿಪುರಾ ಸ್ಟೇಟ್ ರೈಫಲ್ಸ್ ನ ಎರಡನೇ ಬೆಟಾಲಿಯನ್ನಿನ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಸ್ಥಳೀಯ ಬೆಂಗಾಲಿ ಪತ್ರಿಕೆ ಸ್ಯಂದನ್ ಪತ್ರಿಕಾದಲ್ಲಿ ಸುದೀಪ್ ಅವರು ತನಿಖಾ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು.












Click it and Unblock the Notifications