ಸಂಸತ್ ನಲ್ಲಿ ಕ್ರಿಕೆಟ್ ದೇವರ ದರ್ಶನ, ಇನ್ನಷ್ಟು ಸುದ್ದಿಗಳು
ನವದೆಹಲಿ, ಆಗಸ್ಟ್, 01: ಸೌದಿ ಅರೇಬಿಯಾದಲ್ಲಿ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಸಂಕಷ್ಟ ಪಡುತ್ತಿರುವ 10 ಸಾವಿರ ಜನರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಗುವುದು ಎಂಬ ನಿರ್ಧಾರ ಸಂಸತ್ ಮುಂಗಾರು ಅಧಿವೇಶನದ ಪ್ರಮುಖ ನಿರ್ಧಾರ. ಸಂಸತ್ ನ ಮುಂಗಾರು ಅಧಿವೇಶನದಲ್ಲಿ ಭಾಗವಹಿಸಿದ್ದ ರಾಜ್ಯಸಭಾ ಸದಸ್ಯ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್.
ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ದೇಶದ ವಿವಿಧೆಡೆ ಜಾಗೃತಿ ಜಾಥಾಗಳು ನಡೆದವು. ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ನಾಯಕ ಮಾರ್ಕ್ ಟೇಲರ್ ದೆಗಲಿಯ ಆಗ್ರಾದ ವಿಶ್ವವಿಖ್ಯಾತ ತಾಜ್ ಮಹಲ್ ಗೆ ಪತ್ನಿ ಸುಸನ್ ಟೇಲರ್ ಜತೆ ಭೇಟಿ ನೀಡಿದ್ದರು. ಗುರು ಗ್ರಾಮಕ್ಕೆ ಟ್ರಾಫಿಕ್ ಜ್ವರ ಬಿಟ್ಟಿಲ್ಲ. ಮಳೆ ಪರಿಣಾಮ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದ ಸಾವಿರಾರು ವಾಹನಗಳು.
ಮೈಸೂರಿನ ಕೋರ್ಟ್ ಆವರಣದ ಶೌಚಾಲಯದಲ್ಲಿ ಸೋಮವಾರ ಮಧ್ಯಾಹ್ನ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು ಆತಂಕ ಸೃಷ್ಟಿಸಿತ್ತು.ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ(ಪಿಟಿಐ ಚಿತ್ರಗಳು)

ಸಂಸತ್ ನಲ್ಲಿ ಕ್ರಿಕೆಟ್ ದೇವರು
ಸಂಸತ್ ನ ಮುಂಗಾರು ಅಧಿವೇಶನದಲ್ಲಿ ಭಾಗವಹಿಸಿದ್ದ ರಾಜ್ಯಸಭಾ ಸದಸ್ಯ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್.

ಸುಷ್ಮಾ ಸ್ವರಾಜ್ ಮಾತು
ಲೋಕಸಭೆ ಕಲಾಪದಲ್ಲಿ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್.

ಮೋದಿ ಭೇಟಿ
ಪರ್ವಾತಾರೋಹಿ ಆರ್ಯನ್ ಬಾಲಾಜಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ದೃಶ್ಯ.

ಬಾಂಬ್ ಸ್ಫೋಟ
ಮೈಸೂರಿನ ಕೋರ್ಟ್ ಆವರಣದ ಶೌಚಾಲಯದಲ್ಲಿ ಸೋಮವಾರ ಮಧ್ಯಾಹ್ನ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು ಆತಂಕ ಸೃಷ್ಟಿಸಿತ್ತು.

ಜಾಗೃತಿ ಜಾಥಾ
ವಿಶ್ವ ಸ್ತನ್ಯಪಾನ ದಿನದ ಅಂಗವಾಗಿ ಸೂರತ್ ನಲ್ಲಿ ಮಹಿಳೆಯರಿಂದ ಜಾಗೃತಿ ಜಾಥಾ.

ಮಳೆ ನಿಂತ ಮೇಲೆ
ಶಿಮ್ಲಾದಲ್ಲಿ ಬೀಳುತ್ತಿದ್ದ ಧಾರಾಕಾರ ಮಳೆ ನಿಯಂತ್ರಣಕ್ಕೆ ಬಂದಿದ್ದು ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡ ಲಾರಿಗಳು.

ಇದಪ್ಪಾ ಟ್ರಾಫಿಕ್ ಅಂದ್ರೆ!
ಭಾರೀ ಮಳೆ ಪರಿಣಾಮ ಗುರುಗ್ರಾಮದ ಹೆದ್ದಾರಿಯಲ್ಲಿ ಸಾಲು ಗಟ್ಟಿ ನಿಂತಿದ್ದ ವಾಹನಗಳು.

ಭಕ್ತ ಸಮೂಹ
ಶರವಣ ತಿಂಗಳ ಪ್ರಯುಕ್ತ ಮೀರತ್ ನ ಶಿವ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳಲು ಸರತಿ ಸಾಲಲ್ಲಿ ನಿಂತಿದ್ದ ಭಕ್ತ ಸಮೂಹ.

ತಾಜ್ ಮುಂದೆ ಟೇಲರ್
ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ನಾಯಕ ಮಾರ್ಕ್ ಟೆಲರ್ ದೆಗಲಿಯ ಆಗ್ರಾದ ವಿಶ್ವವಿಖ್ಯಾತ ತಾಜ್ ಮಹಲ್ ಗೆ ಪತ್ನಿ ಸುಸನ್ ಟೇಲರ್ ಜತೆ ಭೇಟಿ ನೀಡಿದ್ದರು.












Click it and Unblock the Notifications