ಕೊಚ್ಚಿಗೆ ಬಂದ ಮಳೆರಾಯನಿಗೆ ಯುವತಿಯರ ಸ್ವಾಗತ
ನವದೆಹಲಿ, ಜೂನ್ 07: ಭಾರತದ ಇತಿಹಾಸಲ್ಲಿ ಮರೆಯಲಾಗದ ದಿನ. 67 ಕೋಟಿಗೂ ಅಧಿಕ ಮೌಲ್ಯದ ಕಲಾಕೃತಿಗಳನ್ನು ಭಾರತಕ್ಕೆ ಅಮೆರಿಕ ಹಿಂದಿರುಗಿಸಿತು.
ಪ್ರಧಾನಿ ಮೋದಿ ಅಮೆರಿಕ ಪ್ರವಾಸ, ಕೊಚ್ಚಿಗೆ ಆಗಮಿಸಿದ ವರುಣನನ್ನು ಸ್ವಾಗತಿಸಿದ ಯುವತಿಯರು. ಟಿಬೇಟ್ ಧರ್ಮಗುರು ದಲೈ ಲಾಮಾ ಅವರಿಂದ ಆಶೀರ್ವಾದ ಪಡೆದ ಭಕ್ತರು, ರಂಜಾನ್ ಪ್ರಯುಕ್ತ ಮಥುರಾದಲ್ಲಿ ಪ್ರಾರ್ಥನೆ ಮಾಡಿದ ಮುಸ್ಲಿಮರು.
ಶ್ರೀನಗರದಲ್ಲಿ ಹಬ್ಬದ ಪ್ರಯುಕ್ತ ಖರೀದಿ ಭರಾಟೆಯಲ್ಲಿ ನಿರತರಾಗಿದ್ದ ಮುಸ್ಲಿಂ ಮಹಿಳೆಯರು. ಅಮೆರಿಕದ ಗಣ್ಯರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ... ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ (ಪಿಟಿಐ ಚಿತ್ರಗಳು)

ಮೋದಿ ಪ್ರವಾಸ
ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರನ್ನು ವರ್ಜೀನೀಯಾದಲ್ಲಿ ಭೇಟಿ ಮಾಡಿದರು.

ವರುಣದೇವನಿಗೆ ಸ್ವಾಗತ
ಮುಂಗಾರು ಮಾರುತಗಳು ಕೊಚ್ಚಿ ಸಮುದ್ರ ತೀರಕ್ಕೆ ಆಗಮಿಸಿದ್ದು ಮಳೆರಾಯನನ್ನು ಬರಮಾಡಿಕೊಂಡ ಯುವತಿಯರು.

ಬಾಂಬ್ ಬ್ಲಾಸ್ಟ್
ಆತ್ಮಾಹುತಿ ಬಾಂಬ್ ದಾಳಿಯ ನಂತರ ತುರ್ಕಿಯ ಇಸ್ತಾಂಬುಲ್ ನಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯ ಚಿತ್ರ.

ನಟಿಯರ ಬಿನ್ನಾಣ
ಅಮೆರಿಕದ ನಟಿಯರಾದ ಕ್ಯಾರಿಲೆ ಪಿಶರ್ ಟಿವಿ ವಾಹಿನಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ತಮ್ಮ ಸಾಕು ನಾಯಿಗಳೊಂದಿಗೆ ಕ್ಯಾಮರಾ ಎದುರು ಕಾಣಿಸಿಕೊಂಡಿದ್ದು ಹೀಗೆ.

ದಲೈ ಲಾಮಾ ಆಶೀರ್ವಾದ
ಧರ್ಮಶಾಲಾದಲ್ಲಿ ಟಿಬೇಟ್ ಧರ್ಮಗುರು ದಲೈ ಲಾಮಾ ಭೌದ್ಧ ಆಶೀರ್ವಾದ ಪಡೆದ ಬೌದ್ಧ ಭಕ್ತರು.

ರಂಜಾನ್ ಪ್ರಾರ್ಥನೆ
ರಂಜಾನ್ ಪ್ರಯುಕ್ತ ಮಥುರಾದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಮುಸ್ಲಿಮರು.

ಹಬ್ಬದ ಖರೀದಿ
ಶ್ರೀನಗರದಲ್ಲಿ ರಂಜಾನ್ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಖರ್ಜೂರ ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು.

ಪತ್ರಕರ್ತೆಯರೊಂದಿಗೆ ಸಚಿವೆ
ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಹಿಳಾ ಪರ್ತಕರ್ತೆಯರೊಂದಿಗೆ ಕಾಣಿಸಿಕೊಂಡ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ.

ಪ್ರತಿಭಟನೆ ನಂತರ
ನಾಹಿ ಸೆಂಟ್ರಲ್ ಜೈಲ್ ಎದುರಿಗೆ ಇಬ್ಬರ ಹತ್ಯೆ ನಡೆದ ನಂತರ ಹತ್ಯೆಯಾದವರ ಊರಿನವರು ನಡೆಸಿದ ಪ್ರತಿಭಟನೆ ನಂತರದ ಚಿತ್ರ. ಅಲಹಾಬಾದ್ ನದ್ದು.












Click it and Unblock the Notifications