ಮಲ್ಯ ಬಂಗಲೆಗೆ ಹೊಸ ವಾರಸ್ದಾರ, ಹೆಸ್ರು ಬದಲಿಸ್ತೀನಿ ಅಂತಾರ!
ವಿಜಯ್ ಮಲ್ಯರ ಗೋವಾದ ಕಿಂಗ್ ಫಿಷರ್ ವಿಲ್ಲಾವನ್ನು ಹರಾಜಿನಲ್ಲಿ ಖರೀದಿಸಿದ ಸಚಿನ್ ಜೋಶಿ ಅದರ ಹೆಸರನ್ನು ಬದಲಾಯಿಸುತ್ತಾರಂತೆ. ಇನ್ನೂ ಯಾವ ಹೆಸರನ್ನೂ ಅಂತಿಮಗೊಳಿಸಿಲ್ಲ. ಆದ ತಕ್ಷಣ ಹೆಸರು ಬದಲಿಸುವುದಾಗಿ ತಿಳಿಸಿದ್ದಾರೆ
ಪಣಜಿ, ಏಪ್ರಿಲ್ 18: ಹೊಸ ಮಾಲೀಕ, ಹೊಸ ಹೆಸರು. ವಿಜಯ್ ಮಲ್ಯ ಮಾಲೀಕತ್ವದಲ್ಲಿದ್ದ ಕಿಂಗ್ ಫಿಷರ್ ವಿಲ್ಲಾವನ್ನು ಖರೀದಿಸಿದ ಸಚಿನ್ ಜೋಶಿ, ಹೆಸರು ಬದಲಾಯಿಸಲಿದ್ದಾರೆ. ಉತ್ತರ ಗೋವಾದ ಕಂಡೋಲಿಮ್ ಬೀಚ್ ವಿಲೇಜ್ ನ ಅದ್ಧೂರಿ ಅಸ್ತಿಯನ್ನು ವರದ ಹಿಂದಷ್ಟೇ ಖರೀದಿಸಿರುವ ಅವರು, ಕಿಂಗ್ ಫಿಷರ್ ಹೆಸರು ಬದಲಾಯಿಸುವ ಸಾಧತೆ ಇದೆ.
ಮೂರು ಬಾರಿ ಹರಾಜು ಹಾಕಿದಾಗಲೂ ಅಂದುಕೊಂಡಂಥ ಬೆಲೆಗೆ ವಿಲ್ಲಾ ಹರಾಜಾಗಿರಲಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟವು ಮಲ್ಯ ಪಡೆದ ಸಾಲಕ್ಕೆ ಪ್ರತಿಯಾಗಿ ಮತ್ತೊಮ್ಮೆ ಹರಾಜು ನಿಗದಿ ಮಾಡಿತ್ತು. ಸಮುದ್ರಕ್ಕೆ ಮುಖ ಮಾಡಿದಂತಿರುವ ಮೂರು ಎಕರೆ ವಿಸ್ತೀರ್ಣದ ಆಸ್ತಿಯನ್ನು 73.01 ಕೋಟಿ ರುಪಾಯಿಗೆ ಮತ್ತೊಬ್ಬ ಬಿಯರ್ ಮಾರಾಟ ಉದ್ಯಮಿ ಸಚಿನ್ ಖರೀದಿಸಿದ್ದಾರೆ.[ಜಾಮೀನು ಪಡೆಯುತ್ತಲೇ ಭಾರತೀಯ ಮಾಧ್ಯಮಗಳ ಮೇಲೆ ಮಲ್ಯ ಕಿಡಿ]

"ಹೆಸರನ್ನು ಖಂಡಿತಾ ಬದಲಾಯಿಸ್ತೀನಿ. ಅದಿನ್ನೂ ಅಂತಿಮವಾಗಿಲ್ಲ. ಒಮ್ಮೆ ನಿರ್ಧಾರವಾಯಿತು ಅಂದರೆ ಎಲ್ಲರಿಗೂ ತಿಳಿಸ್ತೀನಿ" ಎಂದು ಜೋಶಿ ಹೇಳಿದ್ದಾರೆ. ಸಚಿನ್ ಜೋಶಿ ಅವರು ವೈಕಿಂಗ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನ ಪ್ರಮೋಟರ್. ಆ ಕಂಪೆನಿಯು ಮಿನರಲ್ ವಾಟರ್, ಗೋವಾದ ಬಿಯರ್, ಮಾಧ್ಯಮ, ಹಾಸ್ಪಿಟಾಲಿಟಿ ಹಾಗೂ ಹೆಲ್ತ್ ಕೇರ್ ವ್ಯವಹಾರಗಳಲ್ಲಿ ತೊಡಗಿಕೊಂಡಿದೆ.

ವಿಜಯ್ ಮಲ್ಯಗೆ ಬ್ಯಾಂಕ್ ಗಳು 9 ಸಾವಿರ ಕೋಟಿಗೂ ಹೆಚ್ಚು ಸಾಲ ನೀಡಿವೆ. ಅದರ ವಸೂಲಾತಿ ಭಾಗವಾಗಿ ಮಲ್ಯ ಅದ್ಧೂರಿ ಪಾರ್ಟಿ ನಡೆಸುತ್ತಿದ್ದ ವಿಲ್ಲಾವನ್ನು ಮಾರಾಟ ಮಾಡಲಾಗಿದೆ. ಈ ವಿಲ್ಲಾವನ್ನು ವ್ಯಾಪಾರದ ಸ್ಲುವಾಗಿ ಬಳಸುತ್ತೀರಾ ಎಂಬ ಪ್ರಶ್ನೆಗೆ, ಅದಿನ್ನೂ ನಿರ್ಧಾರ ಮಾಡಿಲ್ಲ ಎಂದು ಜೋಶಿ ಹೇಳಿದ್ದಾರೆ.[ಅರೆಸ್ಟ್ ಆದ 3 ಗಂಟೆಯೊಳಗೆ ಮಲ್ಯಗೆ ಜಾಮೀನು!!!]

ಹತ್ತು ವರ್ಷದ ಹಿಂದೆ ಇಲ್ಲಿ ಪಾರ್ಟಿಯೊಂದರಲ್ಲಿ ಜೋಶಿ ಭಾಗವಹಿಸಿದ್ದರಂತೆ. ಅಗಲೇ ಅವರಿಗೆ ಇಷ್ಟವಾಗಿದೆ. "ಅವಕಾಶ ಸಿಕ್ಕರೆ ಈ ಬಂಗಲೆ ಖರೀದಿಸಬೇಕು. ಅಥವಾ ಕಿಂಗ್ ಫಿಷರ್ ವಿಲ್ಲಾದಂಥದ್ದನ್ನು ನಿರ್ಮಿಸಬೇಕು ಎಂದು ಸ್ನೇಹಿತರಿಗೆ ಹೇಳಿದ್ದೆ" ಎಂದು ಬಂಗಲೆ ಖರೀದಿಸಿದ ನಂತರ ಮಾಧ್ಯಮದ ಮುಂದೆ ಸಚಿನ್ ಹೇಳಿದ್ದಾರೆ.

ಈ ವಿಲ್ಲಾದ ಅಂದಾಜು ಮೌಲ್ಯ ನೂರು ಕೋಟಿ ಎನ್ನಲಾಗಿದ್ದು, ಈ ವಿಲ್ಲಾದಲ್ಲಿ ಕೃತಕವಾದ ಕೊಳ, ಖಾಸಗಿ ಈಜುಕೊಳ, ಡ್ಯಾನ್ಸ್ ಫ್ಲೋರ್ ಹಾಗೂ ಹಸಿರು ಉದ್ಯಾನ ಇದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications