ದೆಹಲಿ ಅಪ್ರಾಪ್ತೆ ಹತ್ಯೆ: ಭೀಕರ ಕೊಲೆಗೆ ಕಾರಣವಾಯಿತೇ ಮೃತಳ ಕೈಯಲ್ಲಿನ 'ಟ್ಯಾಟೂ'?
ನವದೆಹಲಿ, ಮೇ. 30: ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ 16 ವರ್ಷದ ಅಪ್ರಾಪ್ತೆಯ ಅಮಾನುಷ ಕೊಲೆ ಪ್ರಕರಣದ ಬೆಳವಣಿಗೆಗಳಾಗಿದ್ದು, 20 ವರ್ಷದ ಆರೋಪಿ ಸಾಹಿಲ್ ಎಂಬುವವರನ್ನು ಬಂಧಿಸಲಾಗಿದೆ. ಸಂತ್ರಸ್ತೆಯೊಂದಿಗೆ ತನ್ನ ಸಂಬಂಧ ಮುರಿದು ಬಿದ್ದ ನಂತರ ಆತ ಕೋಪಗೊಂಡಿದ್ದ ಎಂದು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.
ಇಬ್ಬರ ನಡುವಿನ ಜಗಳ, ಒಂದು ದಿನದ ಹಿಂದೆ ಭೀಕರ ಹತ್ಯೆಗೆ ಕಾರಣವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಬಾಲಕಿ 2021 ರಿಂದ ಸಾಹಿಲ್ ಜೊತೆ ಸಂಬಂಧ ಹೊಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಆದರೆ, ಇಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದು, ಸಂಬಂಧ ಹಳಸಿದ ನಂತರ ಆಕೆ ಸಾಹಿಲ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರು.

ಆಕೆಯ ಇಚ್ಛೆಯ ಹೊರತಾಗಿಯೂ, ಆರೋಪಿ ಸಾಹಿಲ್ ಆಕೆಯನ್ನು ಸಂಪರ್ಕಿಸಲು ಪಟ್ಟುಹಿಡಿದ್ದು, ರಾಜಿ ಮಾಡಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದನು ಎಂದು ವರದಿಯಲ್ಲಿ ಸೇರಿಸಲಾಗಿದೆ. ಕೊಲೆಗೆ ಒಂದು ದಿನ ಮುನ್ನ ಶನಿವಾರವೂ ಸಹ, ಅವರು ಜಗಳವಾಡಿದ್ದರು. ಅದು ಅವರ ಸಂಬಂಧವನ್ನು ಇನ್ನಷ್ಟು ಹದಗೆಡಿಸಿತು. ಇದು ಕೊಲೆಯ ಹಿಂದಿನ ಕಾರಣವಾಗಿರಬಹುದು" ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದರ ಜೊತೆಗೆ ಮೃತ ಬಾಲಕಿಯ ಕೈಯಲ್ಲಿ "ಪ್ರವೀಣ್" ಎಂಬ ಹೆಸರನ್ನು ಹೊಂದಿರುವ ಹಚ್ಚೆ ಕಂಡುಬಂದಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಸಾಹಿಲ್ ಮತ್ತು ಮೃತ ಅಪ್ರಾಪ್ತೆ ನಡುವೆ ಆಗಾಗ್ಗೆ ವಾದ ವಿವಾದಗಳ ಹಿಂದೆ ಈ ಟ್ಯಾಟೊ ಒಂದು ಕಾರಣವಾಗಿರಬಹುದು ಎಂದು ದೆಹಲಿ ಪೊಲೀಸರು ಭಾವಿಸಿದ್ದಾರೆ.

ಸಾಹಿಲ್ ಬಂಧನ ನಡೆದಿದ್ದು ಹೀಗೆ
ಎಸಿ ಮತ್ತು ರೆಫ್ರಿಜರೇಟರ್ಗಳ ಮೆಕ್ಯಾನಿಕ್ ಆಗಿರುವ ಸಾಹಿಲ್ ಅವರನ್ನು ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಬಂಧಿಸಲಾಗಿದೆ. ಆತನ ಚಿಕ್ಕಮ್ಮನಿಂದ ಆರೋಪಿಯ ತಂದೆಗೆ ಕರೆ ಬಂದ ನಂತರ ಅವರ ಚಿಕ್ಕಮ್ಮನ ಮನೆಯಿಂದ ಪೊಲೀಸರು ಅವರನ್ನು ಪತ್ತೆಹಚ್ಚಿದ್ದಾರೆ. ವಿಶೇಷ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ದೇವೇಂದ್ರ ಪಾಠಕ್, "ಯುವತಿಯ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ತಕ್ಷಣ, ಭಾನುವಾರ ರಾತ್ರಿ ಸಾಹಿಲ್ ಅವರ ಪೋಷಕರನ್ನು ಬಂಧಿಸಲಾಯಿತು" ಎಂದಿದ್ದಾರೆ.
ಸಾಹಿಲ್ ಅವರಿಗೆ ಕರೆ ಮಾಡುತ್ತಿದ್ದುದನ್ನು ನಾವು ನೋಡಿದ್ದೇವು. ಬಳಿಕ ಪೊಲೀಸ್ ತಂಡವು ಗುರುತಿಸಲಾದ ಸ್ಥಳಕ್ಕೆ ಧಾವಿಸಿ ಬುಲಂದ್ಶಹರ್ ಬಳಿ ಸಾಹಿಲ್ನನ್ನು ಹಿಡಿದಿದೆ. ಆತನ ಬಂಧನವನ್ನು ಖಚಿತಪಡಿಸಿಕೊಳ್ಳಲು, ಆತನ ತಂದೆಯನ್ನೂ ಪೊಲೀಸ್ ತಂಡದೊಂದಿಗೆ ಕರೆದೊಯ್ಯಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಭೀಕರ ಘಟನೆಯ 9 ಸೆಕೆಂಡ್ಗಳ ಸಿಸಿಟಿವಿ ಕ್ಯಾಮೆರಾ ದೃಶ್ಯದಲ್ಲಿ ಆರೋಪಿಯು ಬಲಿಪಶುವನ್ನು ಒಂದು ಕೈಯಿಂದ ಗೋಡೆಗೆ ಒತ್ತಿ ಹಿಡಿದು ಪದೇ ಪದೇ ಇರಿದಿರುವುದನ್ನು ತೋರಿಸಿದೆ. ಬಾಲಕಿ ನೆಲಕ್ಕೆ ಬಿದ್ದಾಗಲೂ ಅವನು ಚಾಕುವಿನಿಂದ ಇರಿಯುವುದನ್ನು ನಿಲ್ಲಲಿಲ್ಲ, ಅವಳ ಮೇಲೆ 16 ಬಾರಿ ಚಾಕುವಿನಿಂದ ದಾಳಿ ನಡೆಸಿ, ಬಳಿಕ ಆಕೆಯನ್ನು ಒದೆಯುತ್ತಾರೆ. ಇಷ್ಟು ಸಾಲದು ಎಂಬಂತೆ ಪದೇ ಪದೇ ಸಿಮೆಂಟ್ ಚಪ್ಪಡಿಯನ್ನು ಅಪ್ರಾಪ್ತೆ ಮೇಲೆ ಎಸೆದಿದ್ದಾರೆ.
ಪೊಲೀಸರು ಶಹಬಾದ್ ಡೈರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಆರೋಪಿ ಸಾಹಿಲ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications