ರಾಷ್ಟ್ರೀಯ ಭದ್ರತೆಗೆ ಧಕ್ಕೆ ಬಂದಿದ್ದು ಇದು ಮೊದಲೇನಲ್ಲ!
ಪಠಾಣ್ ಕೋಟ್ ಕವರೇಜ್ ನಲ್ಲಿ ಎನ್ ಡಿಟಿವಿಯಿಂದ ಆದ ನಿಯಮ ಉಲ್ಲಂಘನೆ ಅಷ್ಟು ಸುಲಭಕ್ಕೆ ನಿರ್ಲಕ್ಷಿಸುವಂತಿರಲಿಲ್ಲ. ಆದ್ದರಿಂದ ಮೂವತ್ತು ದಿನ ಸಮಯ ತೆಗೆದುಕೊಂಡು, ಪರಾಮರ್ಶಿಸಿದ ನಂತರ ಒಂದು ದಿನ ಪ್ರಸಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು
ಬೆಂಗಳೂರು, ನವೆಂಬರ್ 5: ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತರುವಂಥ ವಿಚಾರವನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳೋದು ಸಾಧ್ಯವಿಲ್ಲ. ಎನ್ ಡಿಟಿವಿ ಪ್ರಕರಣದ ಬಗ್ಗೆ ಪರಿಶೀಲಿಸಿದ ಸಮಿತಿಯ ಮಾತಿದು.
ಈ ಪ್ರಕರಣವನ್ನು ಗಮನಿಸುತ್ತಿರುವ ಅಂತರ ಸಚಿವ ಸಮಿತಿ ಕೂಡ ಈ ಬಗ್ಗೆ ಮಾತನಾಡಿದ್ದು, ಆ ಚಾನಲ್ ನಿಂದ ಆಗುತ್ತಿರುವ ಮೊದಲನೇ ನಿಯಮ ಉಲ್ಲಂಘನೆ ಇದಲ್ಲ. ಕೇಬಲ್ ಆಕ್ಟ್ ನ ಉಲ್ಲಂಘಿಸುವ ಹಲವು ಕಾರ್ಯಕ್ರಮಗಳನ್ನು ಆ ಚಾನಲ್ ಮಾಡಿದೆ ಎಂದಿದೆ.
ಪಠಾಣ್ ಕೋಟ್ ಕವರೇಜ್ ನಲ್ಲಿ ಎನ್ ಡಿಟಿವಿಯಿಂದ ಆದ ನಿಯಮ ಉಲ್ಲಂಘನೆ ಅಷ್ಟು ಸುಲಭಕ್ಕೆ ನಿರ್ಲಕ್ಷಿಸುವಂತಿರಲಿಲ್ಲ. ಆದ್ದರಿಂದ ಮೂವತ್ತು ದಿನ ಸಮಯ ತೆಗೆದುಕೊಂಡು, ಪರಾಮರ್ಶಿಸಿದ ನಂತರ ಒಂದು ದಿನ ಪ್ರಸಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಮೂಲಗಳು ಒನ್ಇಂಡಿಯಾಗೆ ತಿಳಿಸಿವೆ. ಇದನ್ನು ತುರ್ತು ಪರಿಸ್ಥಿತಿಗೆ ಹೋಲಿಸುವುದು ತೀರಾ ಕೆಳಮಟ್ಟದ ಆಲೋಚನೆ ಎಂದು ಮೂಲಗಳು ತಿಳಿಸಿವೆ.[ಎನ್ ಡಿಟಿವಿಗೆ 24 ಗಂಟೆ ಶಿಕ್ಷೆ: ನಿರ್ಧಾರಕ್ಕೆ ವ್ಯಾಪಕ ಖಂಡನೆ]

ಇದೇ ರೀತಿಯ ಇಪ್ಪತ್ತೊಂದು ಆದೇಶಗಳನ್ನು ಯುಪಿಎ ಸರಕಾರ 2005ರಿಂದ ನೀಡಿದೆ. ಯುಪಿಎ ಸರಕಾರದ ಅವಧಿಯಲ್ಲಿ ಕೇಬಲ್ ಟಿವಿ ನಿಯಮ ಮತ್ತು ಕಾರ್ಯಕ್ರಮದ ಸೂಚನೆಗಳನ್ನು ಉಲ್ಲಂಘಿಸಿದ ಬೇರೆ ಬೇರೆ ಚಾನಲ್ ಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇಂಥ ಇಪ್ಪತ್ತೊಂದು ಆದೇಶ ನೀಡಿತ್ತು. ಪ್ರಸಾರ ಸ್ಥಗಿತದ ಶಿಕ್ಷೆ ಪ್ರಮಾಣ ಒಂದು ದಿನದಿಂದ ಎರಡು ತಿಂಗಳವರೆಗೆ ಇತ್ತು ಎಂದು ಮೂಲಗಳು ತಿಳಿಸಿವೆ.[NDTV ಮೇಲೆ ಕೇಂದ್ರ ಸರಕಾರದ 'ಸರ್ಜಿಕಲ್ ಸ್ಟ್ರೈಕ್': ಒಂದು ದಿನ ಬ್ಯಾನ್!]
ಶಸ್ತ್ರಾಸ್ತ್ರಗಳು ಇದ್ದ ಸ್ಥಳ, ಉಗ್ರಗಾಮಿಗಳಿದ್ದ ಜಾಗ, ಶಾಲೆಯಿರುವ ಸ್ಥಳ, ವಸತಿ ಪ್ರದೇಶ ಮುಂತಾದ ಸೂಕ್ಷ್ಮ ಸ್ಥಳಗಳನ್ನು ಎನ್ ಡಿಟಿವಿ ಪ್ರಸಾರ ಮಾಡಿತ್ತು. ಆ ಮಾಹಿತಿಯನ್ನು ಒಳನುಸುಳುಕೋರರನ್ನು ಕಳಿಸಿದವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇತ್ತು. ಇವೆಲ್ಲ ದೇಶದ ರಕ್ಷಣೆ, ಸೈನಿಕರು ಹಾಗೂ ನಾಗರಿಕರಿಗೆ ಅಪಾಯ ತರುವಂಥದ್ದು. ಆ ಚಾನಲ್ ಗೂ ಕೂಡ ಅದರ ಕಡೆಯಿಂದ ಏನದರೂ ಸಮರ್ಥನೆ ಇದ್ದರೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಸಮಿತಿ ಹೇಳಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications