ಚಂಡಮಾರುತದಿಂದ ಪಿತೃಪಕ್ಷದವರೆಗೆ ಚಿತ್ತ ಹಿಡಿದಿಟ್ಟ ಚಿತ್ರಗಳು...
ಅಮೆರಿಕದಲ್ಲಿ ಇರ್ಮಾ ಚಂಡಮಾರುತ ಮಾಡಿರುವ ಅನಾಹುತ ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲದಂಥದ್ದು. ಲಕ್ಷಾಂತರ ಮಂದಿಯ ಬದುಕು ಚಂಡಮಾರುತಕ್ಕೆ ಸಿಕ್ಕು ಅಸ್ತವ್ಯಸ್ತವಾಗಿದೆ. ತುರ್ತು ಪರಿಹಾರ ಕಾರ್ಯಗಳೇನೋ ಸರಕಾರದಿಂದ ನಡೆಯುತ್ತಿದೆ. ಆದರೆ ಬದುಕು ಒಂದು ಹಂತಕ್ಕೆ ಬರಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ.
ಅಲ್ಲಿನದೇ ಒಂದು ದೋಣಿಯ ಫೋಟೋ ಇಲ್ಲಿದೆ. ಜನರ ಬದುಕಿನ ಜತೆಗೆ ಸಮೀಕರಿಸುವಂಥ ಕರುಣಾಜನಕವಾದ ಫೋಟೋ ಇದು. ಇನ್ನು ಮುಂಬೈನಲ್ಲಿ ತಮ್ಮ ಚಿತ್ರ 'ಲಖನೌ ಸೆಂಟ್ರಲ್'ನ ವಿಶೇಷ ಪ್ರದರ್ಶನದಲ್ಲಿ ದಿಯಾ ಮಿರ್ಜಾ ಭಾಗವಹಿಸಿದ್ದಾರೆ. ಗುರುಗ್ರಾಮದಲ್ಲಿ ಶಾಲಾ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ.
ದುರ್ಗಾ ಪೂಜೆ ಅಂದರೆ ಕೋಲ್ಕತ್ತಾದಲ್ಲಿ ಸಂಭ್ರಮ ನೋಡಬೇಕು. ಇನ್ನೇನು ದುರ್ಗಾ ಪೂಜೆಗಾಗಿ ಸಿದ್ಧತೆ ನಡೆಯುತ್ತಿದೆ. ಅಲ್ಲಿನ ಕಲಾವಿದನೊಬ್ಬ ತಯಾರಿಯಲ್ಲಿ ತೊಡಗಿರುವ ಚಂದದ ಫೋಟೋ ಇದು. ಪಿತೃ ಪಕ್ಷ ಆರಂಭವಾಗಿದ್ದು, ಗಯಾದಲ್ಲಿ ತಮ್ಮ ಪೂರ್ವಿಕರಿಗೆ ಪಿಂಡ ಪ್ರದಾನ ಮಾಡುತ್ತಿರುವ ಗುಂಪೊಂದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.
ಒಟ್ಟಾರೆ ದೇಶ-ವಿದೇಶದ ಪಿಟಿಐ ಸುದ್ದಿ ಸಂಸ್ಥೆಯ ಚಂದ ಹಾಗೂ ಮನ ಕರಗುವ ಫೋಟೋಗಳು ನಿಮ್ಮೆದುರು ಇವೆ.

ಹೊಸ ಸಿನಿಮಾದ ವಿಶೇಷ ಪ್ರದರ್ಶನ
ಬಾಲಿವುಡ್ ತಾರೆ ದಿಯಾ ಮಿರ್ಜಾ ಮುಂಬೈನಲ್ಲಿ ನಡೆದ ತಮ್ಮ ಸಿನಿಮಾ 'ಲಖನೌ ಸೆಂಟ್ರಲ್' ನ ವಿಶೇಷ ಪ್ರದರ್ಶನದ ವೇಳೆ ಕಾಣಿಸಿಕೊಂಡಿದ್ದು ಹೀಗೆ.

ಚಂಡಮಾರುತಕ್ಕೆ ಸಿಲುಕಿದ ದೋಣಿ
ಇರ್ಮಾ ಚಂಡಮಾರುತವು ಮಾಡಿದ ಅನಾಹುತವಿದು. ದೋಣಿಯೊಂದರ ಪರಿಸ್ಥಿತಿ ಹೀಗೆ ಕಂಡುಬಂದಿದ್ದು ಫ್ಲೋರಿಡಾದ ಪಾಮ್ ಶೋರ್ಸ್ ನಲ್ಲಿ.

ಕೋರ್ಟ್ ಗೆ ಕರೆದೊಯ್ದ ಪೊಲೀಸರು
ಗುರುಗ್ರಾಮದ ರಯಾನ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ ನ ಪ್ರಾದೇಶಿಕ ಮುಖ್ಯಸ್ಥ ಫ್ರಾನ್ಸಿಸ್ ಥಾಮಸ್ (ಬಿಳಿ ಷರ್ಟ್ ಧರಿಸಿದ ವ್ಯಕ್ತಿ) ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಜೇಯಸ್ ಥಾಮಸ್ (ಬೂದು ಬಣ್ಣದ ಷರ್ಟ್ ಧರಿಸಿದಾತ) ನನ್ನು ಸೋಮವಾರ ಸೋಹ್ನಾ ನಗರದ ಕೋರ್ಟ್ ಗೆ ಪೊಲೀಸರು ಕರೆದೊಯ್ದರು.

ದುರ್ಗಾ ಪೂಜೆ ತಯಾರಿ
ಕೋಲ್ಕತ್ತಾ ನಗರದಲ್ಲಿ ದುರ್ಗಾ ಪೂಜೆ ಪೂರ್ವಭಾವಿಯಾಗಿ ಸಾರ್ವಜನಿಕ ಪೂಜಾ ಪೆಂಡಾಲ್ ನಲ್ಲಿ ಸಿದ್ಧತೆಯಲ್ಲಿ ತೊಡಗಿದ್ದ ಕಲಾವಿದ ಕ್ಯಾಮೆರಾ ಕಣ್ಣಿನಲ್ಲಿ ಕಂಡುಬಂದಿದ್ದು ಹೀಗೆ.

ಸುಮಿತ್ರಾ, ಹೇಮಾ ಪ್ರಭಾವಳಿ
ನವದೆಹಲಿಯಲ್ಲಿ ನಡೆದ 'ಸಿನರ್ಜಿ' ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ನಟಿ-ಸಂಸದೆ ಹೇಮಾ ಮಾಲಿನಿ ಭಾಗವಹಿಸಿದ್ದರು.

ಗಯಾದಲ್ಲಿ ಪಿಂಡ ಪ್ರದಾನ
ತೀರಿಕೊಂಡ ಹಿರಿಯರಿಗೆ ಪಿತೃಪಕ್ಷದ ಪ್ರಯುಕ್ತ ಗಯಾದ ಫಲ್ಗು ನದಿಯಲ್ಲಿ ಸೋಮವಾರ ಪಿಂಡ ಪ್ರದಾನ ಮಾಡಲಾಯಿತು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications