Get Updates
Get notified of breaking news, exclusive insights, and must-see stories!

Parliament Attack: 24ನೇ ವರ್ಷಾಚರಣೆ ವೇಳೆ ಕಮಲೇಶ್ ಕುಮಾರಿ ಸ್ಮರಿಸಿದ ಭಾರತ, 2001ರಲ್ಲಿ ಆಗಿದ್ದೇನು?

2001 Parliament attack: ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿ (2001 Parliament attack) ನಡೆದು ಇಂದಿಗೆ ಇಂದಿಗೆ ಸರಿಯಾಗಿ 24 ವರ್ಷಗಳು ತುಂಬಿವೆ. ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಕರ್ನಾಟಕ ಗಣ್ಯರು ಸಹ ಅಂದು ಉಗ್ರರ ವಿರುದ್ಧ ಹೋರಾಡಿದ ಹುತಾತ್ಮರನ್ನು ಸ್ಮರಿಸಿದ್ದಾರೆ. ವೀರ ಮರಣ ಹೊಂದಿದ್ದಕ್ಕಾಗಿ ವಿಶೇಷವಾಗಿ ಮರಣೋತ್ತರ ಅಶೋಕ ಚಕ್ರ ಪಡೆದ ಮೊದಲ ಮಹಿಳಾ ಕಾನ್‌ಸ್ಟೇಬಲ್ ಕಮಲೇಶ್ ಕುಮಾರ್ ಅವರನ್ನು ದೇಶವೇ ಸಂದರ್ಭದಲ್ಲಿ ಸ್ಮರಿಸಲಾಗಿದೆ.

ಅಂದಿನ ಸಂಸತ್‌ ದಾಳಿಯಲ್ಲಿ ಸಿಆರ್‌ಪಿಎಪ್ ಸಿಬ್ಬಂದಿ ಜೊತೆಗೆ ಕೆಲಸ ಮಾಡಿದ್ದ ಕಮಲೇಶ್ ಕುಮಾರಿ ಅವರ ಅಪ್ರತಿಮ ಧೈರ್ಯ ಮತ್ತು ತ್ಯಾಗಕ್ಕಾಗಿ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ್ ಚಕ್ರವನ್ನು ನೀಡಲಾಯಿತು. ಅವರ ಶೌರ್ಯವನ್ನು ಗೌರವಿಸೋಣ ಮತ್ತು ನಮ್ಮ ರಾಷ್ಟ್ರವನ್ನು ರಕ್ಷಿಸುವ ವೀರರನ್ನು ನೆನಪಿಸಿಕೊಳ್ಳೋಣ ಎಂದು ಕರ್ನಾಟಕ ಸೇರಿದಂತೆ ದೆಹಲಿ ಹಾಗೂ ಇತರ ರಾಜ್ಯಗಳ ರಾಜಕಾರಣಿಗಳು, ಗಣ್ಯರು ಸ್ಮರಿಸಿದ್ದಾರೆ.

Nation Pays Tribute to Martyrs on 24th Anniversary of 2001 Parliament Attack Dignitaries

ಈಗಾಗಲೇ ಸಂಸತ್ ಚಳಿಗಾಲ ಅಧಿವೇಶನ ಆರಂಭವಾಗಿದೆ. ಪಾರ್ಲಿಮೆಂಟ್ ದಾಳಿಗೆ 24ನೇ ವರ್ಷಾಚರಣೆ ಪ್ರಯುಕ್ತ ಸಂಸತ್‌ನ ಸದಸ್ಯರು ಸೋಮವಾರ ಶ್ರದ್ಧಾಂಜಲಿ ಸಲ್ಲಿಸಬಹುದು. ಆನ್‌ಲೈನ್ ಪೋಸ್ಟ್‌ಗಳ ಮೂಲಕ ಹುತಾತ್ಮರ ಶೌರ್ಯ, ತ್ಯಾಗ, ದೇಶ ಪ್ರೇಮ ಸ್ಮರಿಸಲಾಗಿದೆ.

ಕಮಲೇಶ್ ಕುಮಾರಿಗೆ ಮರಣೋತ್ತರ ಅಶೋಕ್ ಚಕ್ರ

24 ವರ್ಷಗಳ ಹಿಂದೆ 2001ರ ಡಿಸೆಂಬರ್ 13ರದು ಉಗ್ರರಿಂದ ಸಂಸತ್ತಿನ ಮೇಲೆ ದಾಳಿ ನಡೆಸಿತ್ತು. ಸಂಸತ್ ಒಳಗೆ ನುಗ್ಗಿದ್ದರು. ದಾಳಿಕೋರರ ಉಪರಾಷ್ಟ್ರಪತಿಗಳತ್ತ ನುಗಿದ್ದು ಐರನ್ ಗೇಟ್ ಸಂಖ್ಯೆ 1ರಲ್ಲಿ ನಿಂತಿದ್ದ ಕಮಲೇಶ್ ಕುಮಾರಿ ಅವರಿಗೆ ವಾಕಿ ಟಾಕಿ ಮೂಲಕ ತಿಳಿಯಿತು. ಕೂಡಲೇ ಕಾರ್ಯ ಪ್ರವೃತ್ತರಾದ ಅವರು ಶಸ್ತ್ರಸಜ್ಜಿತರಾಗಿ ಉಪರಾಷ್ಟ್ರಪತಿ ಕೊಠಡಿಯತ್ತ ತೆರಳಿದರು.

ಕಾನ್‌ಸ್ಟೇಬಲ್ ಕಮಲೇಶ್ ಅವರು ವಾಕಿ ಟಾಕಿ ಮೂಲಕ ಪೊಲೀಸ್ ಸಿಬ್ಬಂದಿ, ಭದ್ರತಾ ಪಡೆಗೆ ಮಾಹಿತಿ ನೀಡಿ ಎಚ್ಚರಿಸಿದರು. ಕ್ಷಣಮಾತ್ರದಲ್ಲಿ ದಾಳಿಕೋರರನ್ನು ಬೆನ್ನಟ್ಟಿದರು. ಭಯೋತ್ಪಾದಕರ ದಾಳಿ ತಡೆಯುವ ನಿಟ್ಟಿನಲ್ಲಿ ದಿಟ್ಟತನವನ್ನೇನೋ ಪ್ರದರ್ಶಿಸಿದರು, ಆದರೆ ಗುಂಡಿನ ದಾಳಿಯಲ್ಲಿ ಕಮಲೇಶ್, ಸಿಎಆರ್‌ಪಿಎಫ್‌ ಸಿಬ್ಬಂದಿ ಸೇರಿದಂತೆ ಹಲವರು ಪ್ರಾಣಬಿಟ್ಟರು. ಈ ಘಟನೆ ಇತಿಹಾಸ ಪುಟ ಸೇರಿತು.

ಕಮಲೇಶ್ ಕುಮಾರಿ ಆವತ್ತು ತೋರಿದ ಶೌರ್ಯ ಪ್ರದರ್ಶನ ಕಂಡು ಅವರ ಮರಣಾಂತರ ಅಶೋಕ ಚಕ್ರ ನೀಡಲಾಯಿತು. ಮರಣೋತ್ತರ ಅಶೋಕ ಚಕ್ರ ಪಡೆದ ಏಕೈಕ ಮಹಿಳೆಯಾದರು. ಅವರ ತ್ಯಾಗ, ಬಲಿದಾನ ಚರಿತ್ರೆಯಲ್ಲಿ ಅಜರಾಮರವಾಯಿತು. ಇಂದಿಗೆ ಸುಮಾರು ಎರಡೂವರೆ ದಶಕ ಕಳೆದರು ಸಹಿತ ಅವರ ದಿಟ್ಟತನ, ತ್ವರಿತ ಸ್ಪಂದನೆ ಮಾದರಿಯಾಗಿದ್ದು, ಸ್ಮರಿಸಲಾಗುತ್ತಿದೆ.

ಕರ್ನಾಟಕ ಗಣ್ಯರಿಂದಲೂ ಸ್ಮರಣೆ..

ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಸಂಸತ್ ದಾಳಿಯು ಭಾರತದ ಕಲ್ಪನೆಯ ಮೇಲೆಯೇ ಭಯೋತ್ಪಾದನೆಯ ನೇರ ದಾಳಿಯಾಗಿತ್ತು. ನಮ್ಮ ಧೈರ್ಯಶಾಲಿ ಭದ್ರತಾ ಸಿಬ್ಬಂದಿ ಅಸಾಧಾರಣ ಧೈರ್ಯದಿಂದ ಆ ಬೆದರಿಕೆಯನ್ನು ಎದುರಿಸಿ ರಾಷ್ಟ್ರವನ್ನು ರಕ್ಷಿಸಿದರು. ಅವರ ಸ್ಮರಣೆಗೆ ಮತ್ತು ಈ ಅಪಾರ ನಷ್ಟವನ್ನು ಅನುಭವಿಸಿದ ಕುಟುಂಬಗಳಿಗೆ ನಾವು ನಮನಗಳು ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ರಾಜ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹುತಾತ್ಮರನ್ನು ನೆನೆದಿದ್ದಾರೆ. ಇಂದು 2001 ರ ಸಂಸತ್ತಿನ ದಾಳಿಯ ವೇಳೆ ಕೆಚ್ಚೆದೆ ಸಾಹಸ ತೋರಿ ಹುತಾತ್ಮರಿಗೆ ನಾವು ಗೌರವ ಸಲ್ಲಿಸುತ್ತೇವೆ. ಅವರ ಧೈರ್ಯ ಮತ್ತು ಸರ್ವೋಚ್ಚ ತ್ಯಾಗವು ನಮ್ಮ ಪ್ರಜಾಪ್ರಭುತ್ವದ ಆತ್ಮ ಮತ್ತು ನಮ್ಮ ರಾಷ್ಟ್ರದ ಸಾರ್ವಭೌಮತ್ವವನ್ನು ರಕ್ಷಿಸುತ್ತದೆ. ದೇಶ ಅವರಿಗೆ ಕೃತಜ್ಞತೆಯಿಂದ ತಲೆಬಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, 2001ರ ಸಂಸತ್ ಭವನದ ಮೇಲಿನ ಉಗ್ರರ ದಾಳಿಯ ಸಂದರ್ಭದಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗಳಿಗೆ ನಮ್ಮ ಆದರಪೂರ್ವಕ ಪ್ರಣಾಮಗಳು. ಪ್ರತಿಕೂಲ ಸಂದರ್ಭದಲ್ಲಿ ಕೂಡ ಕರ್ತವ್ಯ ವಿಮುಖರಾಗದೆ ಧೈರ್ಯದಿಂದ ಕಾರ್ಯನಿರ್ವಹಿಸಿ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ನಿಮ್ಮ ಶೌರ್ಯ, ತ್ಯಾಗಗಳನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+