Get Updates
Get notified of breaking news, exclusive insights, and must-see stories!

Godhra Riot: ಸಬರಮತಿ ರಿಪೋರ್ಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್, ವೈರಲ್!

ಪ್ರಧಾನಿ ನರೇಂದ್ರ ಮೋದಿ ಅವರು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಒಂದು ಟ್ವೀಟ್‌ ಮಾಡಿದ್ದು. ಈ ಟ್ವೀಟ್‌ ಅತ್ಯಂತ ಮಾರ್ಮಿಕವಾಗಿದೆ. ಸಬರಮತಿ ರಿಪೋರ್ಟ್‌ (#SabarmatiReport ) ಸಿನಿಮಾವನ್ನು ನಾನು ಯಾಕೆ ನೋಡಲೇಬೇಕು ಎಂದು ನಾನು ಏಕೆ ಭಾವಿಸುತ್ತೇನೆ. ನನ್ನ ಅಭಿಪ್ರಾಯಗಳು ಈ ರೀತಿ ಇವೆ ಎಂದು ಅಲೋಕ್ ಭಟ್‌ ಎನ್ನುವವರು ಟ್ವೀಟ್ ಮಾಡಿದ್ದು. ಆ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ರೀ ಟ್ವೀಟ್ ಮಾಡಿ ಮಾರ್ಮಿಕ ಸಂದೇಶ ಹಂಚಿಕೊಂಡಿದ್ದಾರೆ.

ಹಿಂದಿಯ (ಬಾಲಿವುಡ್)ಲ್ಲಿ (The Sabarmati Report) ದಿ ಸಬರಮತಿ ರಿಪೋರ್ಟ್ ಎನ್ನುವ ಸಿನಿಮಾ ಬಿಡುಗಡೆಯಾಗಿದೆ. ಇದು ಗುಜರಾತ್‌ನಲ್ಲಿ 2002 ನಡೆದ ಗೋಧ್ರಾ ರೈಲು ದುರಂತವನ್ನು ಆಧರಿಸಿ ನಿರ್ಮಿಸಲಾಗಿರುವ ಚಿತ್ರವಾಗಿದೆ. ಇದೀಗ ಅಲೋಕ್ ಭಟ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುರುವ ಪ್ರಧಾನಿ ನರೇಂದ್ರ ಮೋದಿ ಅವರು, ಚೆನ್ನಾಗಿ ಹೇಳಿದ್ದೀರಿ.

Narendra Modi Prime Minister Narendra Modi tweet about the Sabarmati report went viral

ಈ ಸತ್ಯ ಹೊರಬರುತ್ತಿರುವುದು ಒಳ್ಳೆಯದೇ, ಜನ ಸಾಮಾನ್ಯರು ಇದನ್ನು ನೋಡುವಂತಾಗಿದೆ. ನಕಲಿ (ಗೋಧ್ರಾ ದುರಂತರದ ಬಗ್ಗೆ ಸುಳ್ಳು) ನಿರೂಪಣೆಯು ಯಾವಾಗಲೂ ಇರಲ್ಲ. ಒಂದು ಹಂತದ ವರೆಗೆ ಮಾತ್ರ ಅದು ಇರಬಹುದು. ಕೊನೆಯದಾಗಿ ಸತ್ಯಗಳು ಯಾವಾಗಲೂ ಹೊರಬರುತ್ತವೆ! ಎಂದಿದ್ದಾರೆ.

ಗೋಧ್ರಾ ರೈಲು ಹತ್ಯಾಕಾಂಡ ಅಥವಾ ಗೋಧ್ರಾ ರೈಲು ದುರಂತವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ವಿವಿಧ ಘಟನೆಗಳ ಆಧಾರದ ಮೇಲೆ ಬಾಲಿವುಡ್‌ ಚಿತ್ರರಂಗವು ಸಿನಿಮಾಗಳನ್ನು ಮಾಡುತ್ತಿದೆ. ಅದರ ಹಿಂದೆ ವಿವಿಧ ರಾಜಕೀಯ ಪಕ್ಷಗಳ ಕೈವಾಡವಿದೆ ಎನ್ನುವ ಆರೋಪವೂ ಇದೆ. ಈ ನಡುವೆ ಇದೀಗ ಬಿಡುಗಡೆಯಾಗಿರುವ ದಿ ಸಬರಮತಿ ರಿಪೋರ್ಟ್ ಸಹ ಇಂತಹದ್ದೇ ವಿರ್ಮಶೆಗೆ ಒಳಗಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ.

ಅಲೋಕ್‌ ಭಟ್‌ ಎನ್ನುವವರು ಟ್ವಿಟ್ಟರ್‌ (ಎಕ್ಸ್‌)ನಲ್ಲಿ ಟ್ವೀಟ್ ಮಾಡಿದ್ದು. ನರೇಂದ್ರ ಮೋದಿ ಅವರನ್ನು ಮೆನ್ಷನ್‌ (ಹೆಸರು ಟ್ಯಾಗ್‌) ಮಾಡಿದ್ದಾರೆ.

ಅಲೋಕ್ ಭಟ್‌ ಎನ್ನುವವರು ಮಾಡಿರುವ ಟ್ವೀಟ್‌ನಲ್ಲಿ ಏನಿದೆ ?

ಸಬರಮತಿ ರಿಪೋರ್ಟ್ ಎನ್ನುವ ಸಿನಿಮಾದ ಬಗ್ಗೆ ಅವರು ನಾಲ್ಕು ಪಾಯಿಂಟ್ಸ್‌ಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

1. ಈ ಸಿನಿಮಾದ ಪ್ರಯತ್ನವು ವಿಶೇಷವಾಗಿದೆ ಅಲ್ಲದೇ ಶ್ಲಾಘನೀಯ. ಏಕೆಂದರೆ ಇದು ಇತಿಹಾಸದಲ್ಲಿ ಅತ್ಯಂತ ನಾಚಿಕೆಗೇಡಿನ ಘಟನೆಗಳ ಪ್ರಮುಖ ಸತ್ಯವನ್ನು ಹೊರತರುತ್ತದೆ ಎಂದಿದ್ದಾರೆ.

2. ಈ ಚಿತ್ರವನ್ನು ನಿರ್ದೇಶಕರು ಈ ಸಮಸ್ಯೆಯನ್ನು ಬಹಳ ಸೂಕ್ಷ್ಮತೆ ಮತ್ತು ಘನತೆಯಿಂದ ನಿಭಾಯಿಸಿದ್ದಾರೆ.

3. ಸಾಬರಮತಿ ಎಕ್ಸ್‌ಪ್ರೆಸ್‌ನ ಪ್ರಯಾಣಿಕರನ್ನು ಕ್ರೂರವಾಗಿ ಸುಟ್ಟುಹಾಕುವುದನ್ನು ಪಟ್ಟಭದ್ರ ಹಿತಾಸಕ್ತಿ ಗುಂಪು ಹೇಗೆ ರಾಜಕೀಯಗೊಳಿಸಲಾಯಿತು ಎನ್ನುವುದು ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಲು ಯೋಗ್ಯವಾಗಿದೆ. ಒಂದರ ಹಿಂದೆ ಒಂದು ಸುಳ್ಳು ಹೇಗೆ ಎಣೆಯಲಾಗಿತ್ತು ಎನ್ನುವುದು ಇದರಲ್ಲಿ ಇದೆ.

4. ಅಂತಿಮವಾಗಿ 59 ಅಮಾಯಕ ಜನ ಅವರ ಪರವಾಗಿ ಮಾತನಾಡುತ್ತಿದ್ದಾರೆ (ಸಿನಿಮಾದ ಮೂಲಕ ಆ ಸತ್ಯ ಅಥವಾ ವಾಸ್ತವಾಂಶ ಬಂದಿದೆ ಎಂಬರ್ಥದಲ್ಲಿ). ಹೌದು, ಅವರು ಹೇಳಿದಂತೆ, ಸತ್ಯ ಮಾತ್ರ ಗೆಲ್ಲುತ್ತದೆ. ಈ ಚಲನಚಿತ್ರವು ಫೆಬ್ರವರಿಯ ಬೆಳಿಗ್ಗೆ ನಾವು ಕಳೆದುಕೊಂಡ 59 ಜನ ಮುಗ್ಧ ಜನರಿಗೆ ನೀಡುವ ಸೂಕ್ತವಾದ ಗೌರವವಾಗಿದೆ ಎಂದು ಅವರು ಹೇಳಿದ್ದಾರೆ. ಇದೀಗ ಈ ಟ್ವೀಟ್‌ ಭಾರೀ ವೈರಲ್ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+