ಭಾರತದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಮೈಸೂರು ನಂ.1
ನವದೆಹಲಿ, ಫೆ. 15: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ ಮೇಲೆ ದೇಶದ ನಗರಗಳು ಕ್ಲೀನ್ ಸಿಟಿ ಕಿರೀಟ ಧರಿಸುವ ಪೈಪೋಟಿಗೆ ಬಿದ್ದಿದ್ದು ಸುಳ್ಳಲ್ಲ. ಈ ಪೈಕಿ ಕರ್ನಾಟಕದ ಮೈಸೂರು ಸತತವಾಗಿ ಎರಡನೇ ಬಾರಿಗೆ ಭಾರತದ ಸ್ವಚ್ಛ ನಗರ ಎಂಬ ಪಟ್ಟ ಗಳಿಸಿದೆ. ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯ ನಾಯ್ಡು ಅವರು 73 ನಗರಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದಾರೆ.
ಶೌಚಾಲಯ ನಿರ್ಮಾಣ, ಕಸ ವಿಲೇವಾರಿ, ಕುಡಿಯುವ ನೀರಿನ ಲಭ್ಯತೆ, ಅಂತರ್ಜಲದ ಲಭ್ಯತೆ ಮುಂತಾದ ಅಂಶಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆ ಮೂಲಕ ನಗರಗಳ ಮಧ್ಯೆ ಆರೋಗ್ಯಕರ ಪೈಪೋಟಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವ ವೆಂಕಯ್ಯ ನಾಯ್ಡು ಹೇಳಿದರು. [ಅಂದದೂರು ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಿದ್ದು ಹೇಗೆ?]

10 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿರುವ ನಗರಗಳ ಪೈಕಿ ಟಾಪ್ 10 ಸ್ಥಾನ ಗಳಿಸಿದ ನಗರಗಳು ಇಲ್ಲಿವೆ:
* ಮೈಸೂರು (ಕರ್ನಾಟಕ) [2015: ಸ್ವಚ್ಛ ಭಾರತ ಅಭಿಯಾನ, ದೇಶಕ್ಕೆ ಮೈಸೂರು ನಂ 1]
* ಚಂಡೀಗಢ (ಕೇಂದ್ರಾಡಳಿತ ಪ್ರದೇಶ)
* ನವದೆಹಲಿ
* ವಿಶಾಖಪಟ್ಟಣ್ಣಂ (ಆಂಧ್ರಪ್ರದೇಶ)
* ಸೂರತ್ (ಗುಜರಾತ್)
* ರಾಜ್ ಕೋಟ್ (ಗುಜರಾತ್)
* ಗ್ಯಾಂಗ್ ಕಟ್ (ಸಿಕ್ಕಿಂ)
* ಪಿಂಪ್ರಿ ಚಿಂದವಾಡ್ (ಮಹಾರಾಷ್ಟ್ರ)
* ಗ್ರೇಟರ್ ಮುಂಬೈ (ಮಹಾರಾಷ್ಟ್ರ)

ಕಳೆದ ವರ್ಷ 1 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ನಗರಗಳ ಪೈಕಿ 476 ನಗರಗಳನ್ನು ಹಿಂದಿಕ್ಕಿ ಮೈಸೂರು ಅಗ್ರಸ್ಥಾನಕ್ಕೇರಿತ್ತು. ಮೈಸೂರು ನಗರ ನಂಬರ್ 1 ಸ್ಥಾನದಲ್ಲಿದ್ದರೆ 5ನೇ ಸ್ಥಾನದಲ್ಲಿ ಹಾಸನ, 6ನೇ ಸ್ಥಾನಲ್ಲಿ ಮಂಡ್ಯ ಮತ್ತು 7ನೇ ಸ್ಥಾನದಲ್ಲಿ ಉದ್ಯಾನನಗರಿ ಬೆಂಗಳೂರು ಸ್ಥಾನ ಪಡೆದಿತ್ತು. ಸ್ವಚ್ಛ ಸರ್ವೇಕ್ಷಣ 2016 ವರದಿಯಲ್ಲಿ ಸ್ವಚ್ಛ ನಗರಗಳ ಜೊತೆಗೆ ಅತ್ಯಂತ ಕೊಳಚೆ ನಗರಗಳನ್ನು ಹೆಸರಿಸಲಾಗಿದೆ. [ಸ್ವಚ್ಛ ಭಾರತದಿಂದ ಪ್ರಯಾಣ, ಹೋಟೆಲ್ ತಿಂಡಿ, ಮೊಬೈಲ್ ಬಿಲ್ ದುಬಾರಿ!]
In Image: Urban Dev Minister @MVenkaiahNaidu giving away #SwachhSurvekshan Award to #Mysore pic.twitter.com/kqTyPMYvWu
— PIB India (@PIB_India) ಫೆಬ್ರುವರಿ 15, 2016
73 ನಗರಗಳ ಪಟ್ಟಿಯಲ್ಲಿ ಕೊನೆ ಇಂದ 64ರ ತನಕ ಹೆಸರುಗಳು ಹೀಗಿವೆ:
* ಧನ್ ಬಾದ್ (ಜಾರ್ಖಂಡ್)
* ಅಸಾನ್ಸೊಲ್ (ಪಶ್ಚಿಮ ಬಂಗಾಲ)
* ಇಟಾ ನಗರ (ಅರುಣಾಚಲ ಪ್ರದೇಶ)
* ಪಾಟ್ನ (ಬಿಹಾರ)
* ಮೀರತ್ (ಉತ್ತರ ಪ್ರದೇಶ)
* ರಾಯ್ ಪುರ್ (ಛತ್ತೀಸ್ ಗಢ)
* ಘಾಜಿಯಾಬಾದ್ (ಉತ್ತರಪ್ರದೇಶ)
* ಜೇಮ್ಶೇಡ್ ಪುರ್ (ಜಾರ್ಖಂಡ್)
* ವಾರಣಾಸಿ (ಉತ್ತರಪ್ರದೇಶ)
* ಕಲ್ಯಾಣ್ ದೊಂಬಿವಿಲಿ (ಮಹಾರಾಷ್ಟ್ರ)
(ಒನ್ಇಂಡಿಯಾ ಸುದ್ದಿ)
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications