ಕಾರು ಹರಿಸಿ 9 ಮಕ್ಕಳನ್ನು ಕೊಂದ ಆರೋಪಿ ಪೊಲೀಸರಿಗೆ ಶರಣು
ಮುಜಾಫರ್ ನಗರ, ಫೆಬ್ರವರಿ 28: ಬಿಹಾರದ ಮುಜಾಫರ್ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಂಬತ್ತು ಮಕ್ಕಳು ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿಯನ್ನು ಬಿಜೆಪಿ ಮುಖಂಡ ಮನೋಜ್ ಬೈಠಾ ಎಂದು ಗುರುತಿಸಲಾಗಿದ್ದು, ಈತನನ್ನು ಬಿಜೆಪಿಯು ಪಕ್ಷದ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಅಮಾನತು ಮಾಡಿದೆ.
ಫೆ.24 ರಂದು ಮುಜಾಫರ್ ನಗರದ ಅಹಿಯಾಪುರ ಎಂಬಲ್ಲಿ ಶಾಲೆ ಬಿಡುತ್ತಿದ್ದಂತೆಯೇ ಮಕ್ಕಳು ರಸ್ತೆ ದಾಟಲು ಓಡುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಎಸ್ ಯುವಿಯೊಂದು ಮಕ್ಕಳ ಮೇಲೆ ಹರಿಸು 9 ಜನ ಮೃತರಾಗಿದ್ದರು. ಘಟನೆಯಲ್ಲಿ 20 ಮಕ್ಕಳು ಗಾಯಗೊಂಡಿದ್ದರು.

ಅಪಘಾತದ ನಂತರ ನಾಪತ್ತೆಯಾಗಿದ್ದ ಮನೋಜ್ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದು, ಮಕ್ಕಳು ಮೃತರಾಗಿದ್ದನ್ನು ಕೇಳಿ ನನಗೆ ತೀವ್ರ ನೋವಾಗಿದೆ. ನನ್ನನ್ನು ಕ್ಷಮಿಸಿ ಎಂದು ಬೇಡಿದ್ದಾನೆ. ಆತನಿಗೂ ಸಣ್ಣ ಪುಟಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.











Click it and Unblock the Notifications