Get Updates
Get notified of breaking news, exclusive insights, and must-see stories!

ರೀಚ್ ಆಗದ ಸೇಲ್ಸ್‌ ಟಾರ್ಗೆಟ್: ನೌಕರನ ಮೇಲೆ ಹಲ್ಲೆ ಮಾಡಿದ ಮ್ಯಾನೇಜರ್

ಮುಂಬೈ ಅಕ್ಟೋಬರ್ 31: ಆರೋಗ್ಯ ವಿಮಾ ಯೋಜನೆಗಳನ್ನು ಮಾರಾಟ ಮಾಡುವ ತನ್ನ ಮಾಸಿಕ ಗುರಿಯನ್ನು ತಲುಪಲು ವಿಫಲವಾದ ಕಾರಣಕ್ಕೆ ಉದ್ಯೋಗಿಗೆ ಮುಖ್ಯಸ್ಥನೊಬ್ಬ ತಲೆಯ ಮೇಲೆ ಟೇಬಲ್ ಗಡಿಯಾರದಿಂದ ಹೊಡೆದ ಆರೋಪ ಮಾಡಲಾಗಿದೆ.

ಗಾಯದಿಂದಾಗಿ ಹಲವು ಹೊಲಿಗೆ ಹಾಕಲಾಗಿದೆ ಎಂದು ದೂರುದಾರ ಆನಂದ್ ಹವಾಲ್ದಾರ್ ಸಿಂಗ್ (30) ಪೊಲೀಸರಿಗೆ ತಿಳಿಸಿದ್ದಾರೆ. ಆನಂದ್ ಅವರ 35 ವರ್ಷದ ಮ್ಯಾನೇಜರ್ ಅಮಿತ್ ಸುರಿಂದರ್ ಸಿಂಗ್ ವಿರುದ್ಧ ಬೊರಿವಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಆನಂದ್ ಅವರು ಕಳೆದ ವರ್ಷದಿಂದ ಆರೋಗ್ಯ ವಿಮಾ ಕಂಪನಿಯಲ್ಲಿ ಅಸೋಸಿಯೇಟ್ ಕ್ಲಸ್ಟರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬ್ಯಾಂಕ್‌ನ ಆರೋಗ್ಯ ವಿಮಾ ಯೋಜನೆಗಳನ್ನು ಮಾರಾಟ ಮಾಡಲು ಅವರನ್ನು ಕೇಳಲಾಗಿದೆ. ಆದರೆ ಅವರು ಸೆಪ್ಟೆಂಬರ್‌ನಲ್ಲಿ 5 ಲಕ್ಷಕ್ಕೆ ಮಾರಾಟ ಮಾಡುವ ಗುರಿಯನ್ನು ಮುಟ್ಟಲಾಗಲಿಲ್ಲ. ಬೊರಿವಲಿ ವೆಸ್ಟ್‌ನ ಎಸ್‌ವಿ ರಸ್ತೆಯಲ್ಲಿರುವ ಭಂಡಾರ್ಕರ್ ಬಿಲ್ಡಿಂಗ್‌ನಲ್ಲಿರುವ ಕಂಪನಿಯ ಶಾಖೆಯಲ್ಲಿ ಅಸೋಸಿಯೇಟ್ ಏರಿಯಾ ಹೆಡ್ ಅಮಿತ್‌ಗೆ ಈ ಬಗ್ಗೆ ವರದಿ ಮಾಡಿದ್ದಾರೆ.

ಗಡಿಯಾರದಿಂದ ತಲೆಗೆ ಹೊಡೆದ ಮ್ಯಾನೇಜರ್

ಗಡಿಯಾರದಿಂದ ತಲೆಗೆ ಹೊಡೆದ ಮ್ಯಾನೇಜರ್

ಕಳೆದ ತಿಂಗಳು ನನ್ನ ಗುರಿ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಆನಂದ್ ಹೇಳಿದ್ದಾರೆ. ಹಾಗಾಗಿ ಅಕ್ಟೋಬರ್ 9 ರಂದು ರಾಜೀನಾಮೆ ಸಲ್ಲಿಸಿದ್ದೆ ಆದರೆ ಅಮಿತ್ ಸಿಂಗ್ ಅದನ್ನು ಅಂಗೀಕರಿಸಲಿಲ್ಲ. ಶನಿವಾರ ಬೆಳಗ್ಗೆ 9.30ಕ್ಕೆ ಅಮಿತ್ ನನಗೆ ಕರೆ ಮಾಡಿ ನನ್ನ ಕೆಲಸದ ವಿವರ ನೀಡುವಂತೆ ಕೇಳಿದ್ದರು. ನಾನು ನನ್ನ ಗುರಿಯನ್ನು ತಲುಪಿಲ್ಲ ಮತ್ತು ನಾನು ಸಂಜೆ ಸಂಪೂರ್ಣ ದಾಖಲೆಯನ್ನು ಸಲ್ಲಿಸುತ್ತೇನೆ ಎಂದು ನಾನು ಅವನಿಗೆ ಹೇಳಿದೆ. ಆದರೆ ನಾನು ಅವರ ಒಂದು ಕರೆಗೆ ಉತ್ತರಿಸಲು ವಿಫಲವಾದಾಗ ಅವರು ನನ್ನನ್ನು ಫೋನ್‌ನಲ್ಲಿ ನಿಂದಿಸುತ್ತಿದ್ದರು. ಸಂಜೆ ಆಫೀಸಿನಲ್ಲಿ ಭೇಟಿಯಾಗಲು ಹೇಳಿದ್ದರು ಎಂದು ಆನಂದ್ ಹೇಳಿದರು.

ತಲೆಯಿಂದ ಗಡಿಯಾರದ ಪ್ಲಾಸ್ಟಿಕ್ ತೆಗೆದ ವೈದ್ಯರು

ತಲೆಯಿಂದ ಗಡಿಯಾರದ ಪ್ಲಾಸ್ಟಿಕ್ ತೆಗೆದ ವೈದ್ಯರು

ಅವರ ಆದೇಶದಂತೆ ನಾನು ಅವರನ್ನು ಭೇಟಿಯಾದೆ. "ನಾನು ಬಡ್ತಿ ಕೇಳಿದಾಗ ನನಗೆ ಯಾವುದೂ ಸಿಕ್ಕಿಲ್ಲ. ಆದರೆ ಕೆಲಸ ಒತ್ತಡ ಮಾತ್ರ ವಿಪರೀತವಾಗಿತ್ತು. ಅಮಿತ್ ನನ್ನೊಂದಿಗೆ ಮೀಟಿಂಗ್ ರೂಂನಲ್ಲಿ ಚರ್ಚಿಸಲು ನಿರಾಕರಿಸಿ ಇತರ ಉದ್ಯೋಗಿಗಳ ಮುಂದೆ ಮಾತನಾಡಲು ಒತ್ತಾಯಿಸಿದರು. ನಾನು ಮಾರಾಟದ ಗುರಿಯನ್ನು ತಲುಪದಿದ್ದಕ್ಕಾಗಿ ಅಮಿತ್ ನಿರಾಶೆಗೊಂಡರು. ಇದ್ದಕ್ಕಿದ್ದಂತೆ ಅವರು ಮೇಜಿನ ಗಡಿಯಾರವನ್ನು ಹಿಡಿದು ನನ್ನ ತಲೆಗೆ ಜೋರಾಗಿ ಹೊಡೆದರು. ಇದರಿಂದಾಗಿ ತಲೆಯಿಂದ ವಿಪರೀತವಾಗಿ ರಕ್ತಸ್ರಾವವಾಗಲು ಪ್ರಾರಂಭಿಸಿತು. ತಕ್ಷಣ ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ವೈದ್ಯರು ನನ್ನ ತಲೆಯಲ್ಲಿ ಸಿಕ್ಕಿಕೊಂಡಿದ್ದ ಗಡಿಯಾರದ ಪ್ಲಾಸ್ಟಿಕ್ ಅನ್ನು ತೆಗೆದುಹಾಕಿದರು. ಗಡಿಯಾರದ ತುಂಡುಗಳನ್ನು ತೆಗೆದುಹಾಕಲಾಯಿತು. ಜೊತೆಗೆ ತಲೆಗೆ ಹೊಲಿಗೆಗಳನ್ನು ಹಾಕಲಾಗಿದೆ'' ಎಂದು ಆನಂದ್ ಘಟನೆಯ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾರೆ.

'ಕೆಲಸ ಬಿಡಲು ಸಿದ್ಧನಿದ್ದೆ' ಆನಂದ್

'ಕೆಲಸ ಬಿಡಲು ಸಿದ್ಧನಿದ್ದೆ' ಆನಂದ್

ತನ್ನ ಮಾಸಿಕ ಗುರಿ 5 ಲಕ್ಷ ಇದೆ. ಆದರೆ ತಾವು 1.5 ಲಕ್ಷ ಮೌಲ್ಯದ ವಿಮಾ ಯೋಜನೆಗಳನ್ನು ಮಾರಾಟ ಮಾಡಿರುವುದಾಗಿ ದೂರುದಾರ ಆನಂದ್ ತಿಳಿಸಿದ್ದಾರೆ. "ನಾನು ಕೆಲಸ ಬಿಡಲು ಸಿದ್ಧನಿದ್ದೆ ಮತ್ತು ರಾಜೀನಾಮೆಯನ್ನೂ ನೀಡಿದ್ದೆ ಆದರೆ ಅವರು ಸ್ವೀಕರಿಸಲು ಸಿದ್ಧರಿರಲಿಲ್ಲ. ಅವರು ನನ್ನನ್ನು ನಿರಂತರವಾಗಿ ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದಾರೆ ಎಂದು ಆನಂದ್ ಆರೋಪಿಸಿದ್ದಾರೆ.

ಮ್ಯಾನೇಜರ್ ಅಮಿತ್‌ಗೆ ಸೆಕ್ಷನ್ 41 ನೋಟಿಸ್

ಮ್ಯಾನೇಜರ್ ಅಮಿತ್‌ಗೆ ಸೆಕ್ಷನ್ 41 ನೋಟಿಸ್

ಬೊರಿವಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ನಿನಾದ್ ಸಾವಂತ್ ಅವರು ಅಮಿತ್ ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಾವು ಅವನನ್ನು ಬಂಧಿಸಿಲ್ಲ. ನಾವು ಅವರಿಗೆ ಸೆಕ್ಷನ್ 41 ನೋಟಿಸ್ ಕಳುಹಿಸುತ್ತೇವೆ ಮತ್ತು ಅದರ ನಂತರ ನಾವು ಅದರಂತೆ ಕಾರ್ಯನಿರ್ವಹಿಸುತ್ತೇವೆ ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+