ಫೋರ್ಬ್ಸ್ ಗೇಮ್ ಚೇಂಜರ್ಸ್ ಪಟ್ಟಿಯಲ್ಲಿ ಮುಕೇಶ್ ನಂ. 1
ತೈಲೋದ್ಯಮದಲ್ಲಿಯೇ ದೊಡ್ಡ ಹೆಸರು ಮಾಡಿದ್ದ ರಿಲಯನ್ಸ್ ಕಂಪನಿ, ಕಳೆದ ವರ್ಷ ಜಿಯೊ ಎಂಬ ಹೆಸರಿನಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟು ಆ ಕ್ಷೇತ್ರದ ಚಿತ್ರಣವನ್ನೇ ಬದಲಿಸಿತು. ಇದೇ ಮುಕೇಶ್ ಗೆ ವಿಶ್ವಮಟ್ಟದಲ್ಲಿ ಗರಿ ತಂದಿದೆ.
ನ್ಯೂಯಾರ್ಕ್, ಮೇ 17: ಜನಜೀವನವನ್ನೇ ಬದಲಿಸಿ, ತಂತ್ರಜ್ಞಾನದ ಹೊಸ ಉಪಯೋಗಗಳಿಗೆ ನಾಂದಿ ಹಾಡಿದ , ಹೊಸತೊಂದು ಇತಿಹಾಸ ನಿರ್ಮಿಸಿದ ಉದ್ದಿಮೆದಾರರ ಪಟ್ಟಿಯನ್ನು ಖ್ಯಾತ ನಿಯತ ಕಾಲಿಕೆ ಫೋರ್ಬ್ಸ್ ತಯಾರಿಸಿದ್ದು, ಇದರಲ್ಲಿ ಭಾರತದ ರಿಲಯನ್ಸ್ ಉದ್ಯಮಿ ಮುಕೇಶ್ ಅಂಬಾನಿ ಅಗ್ರ ಸ್ಥಾನ ಪಡೆದಿದ್ದಾರೆ.
ಗ್ಲೋಬಲ್ ಗೇಮ್ ಚೇಂಜರ್ಸ್ ಲಿಸ್ಟ್ ಎಂಬ ಹೆಸರಿನ ಈ ಪಟ್ಟಿಯಲ್ಲಿ ಒಟ್ಟು 25 ಉದ್ಯಮಿಗಳು ಸ್ಥಾನ ಪಡೆದಿದ್ದಾರೆ.[ಭಾರತದಲ್ಲಿ 101 ಶತಕೋಟಿ ಸಿರಿವಂತರು; ಅಗ್ರಸ್ಥಾನದಲ್ಲಿ ಅಂಬಾನಿ]

ತೈಲೋದ್ಯಮದಲ್ಲಿಯೇ ದೊಡ್ಡ ಹೆಸರು ಮಾಡಿದ್ದ ರಿಲಯನ್ಸ್ ಕಂಪನಿ, ಕಳೆದ ವರ್ಷ ಜಿಯೊ ಎಂಬ ಹೆಸರಿನಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಿತ್ತು. ಅನೇಕ ಉಚಿತ ಆಫರ್ ಗಳ ಸರಮಾಲೆಯೊಂದಿಗೆ ಅಪಾರ ಸಂಖ್ಯೆಯ ಗ್ರಾಹಕರನ್ನು ಸೆಳೆದಿತ್ತಲ್ಲದೆ, ಕೆಲವೇ ತಿಂಗಳುಗಳಲ್ಲಿ 100 ಮಿಲಿಯನ್ ಗ್ರಾಹಕರನ್ನು ಪಡೆಯುವ ಮೂಲಕ ಹೊಸತೊಂದು ದಾಖಲೆ ಸೃಷ್ಟಿಸಿತು.[ಮುಖೇಶ್ ಅಂಬಾನಿ ದೇಶದ ನಂಬರ್ 1 ಸಿರಿವಂತ, ಆಸ್ತಿ ಜಸ್ಟ್ 1.74 ಲಕ್ಷ ಕೋಟಿ]
ಜಿಯೋನ ಈ ಬಿರುಗಾಳಿಗೆ ಆವರೆಗೆ ಭಾರತೀಯ ಟೆಲಿಕಾಂ ಕ್ಷೇತ್ರಗಳಲ್ಲಿ ದಿಗ್ಗಜರೆನಿಸಿದ್ದ ಏರ್ ಟೆಲ್, ವೊಡಾಫೋನ್ ಹಾಗೂ ಬಿಎಸ್ಎನ್ಎಲ್ ನಂಥ ಸಂಸ್ಥೆಗಳೇ ತತ್ತರಿಸುವಂತಾಗಿತ್ತು. ಇದು ಕಂಪನಿಗಳ ನಡುವೆ ಪರಸ್ಪರ ದರ ಸಮರಕ್ಕೆ ಕಾರಣವಾಗಿ, ಭಾರತೀಯ ದೂರ ಸಂಪರ್ಕ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಿತು. ಈ ಕಾರಣವೇ ಮುಕೇಶ್ ಅಬಾನಿಯವರಿಗೆ ಫೋರ್ಬ್ ಪಟ್ಟಿಯ ಅಗ್ರ ಸ್ಥಾನ ಸಿಕ್ಕಿದೆ.
{promotion-urls}
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications