ಮುಖೇಶ್ ಅಂಬಾನಿ ದೇಶದ ನಂಬರ್ 1 ಸಿರಿವಂತ, ಆಸ್ತಿ ಜಸ್ಟ್ 1.74 ಲಕ್ಷ ಕೋಟಿ
ಮುಂಬೈ, ಮಾರ್ಚ್ 7: ಕೇಂದ್ರ ಸರಕಾರದ ನೋಟು ನಿಷೇಧ ತೀರ್ಮಾನ ಭಾರತದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದೆ ಎಂದು ಜಾಗತಿಕ ಸಿರಿವಂತರ ಪಟ್ಟಿಯ ವರದಿಯಲ್ಲಿ ಮಂಗಳವಾರ ಹೇಳಲಾಗಿದೆ. ಹ್ಯೂರನ್ ಗ್ಲೋಬಲ್ ರಿಚ್ ಲಿಸ್ಟ್ ಇಂಡಿಯಾ ಪ್ರಕಾರ, ನವೆಂಬರ್ 8, 2016ರ ನಂತರ ಹನ್ನೊಂದು ಮಂದಿಯ ಆಸ್ತಿ ಮೌಲ್ಯವು ಒಂದು ಬಿಲಿಯನ್ ಅಮೆರಿಕನ್ ಡಾಲರ್ ಗಿಂತ ಕೆಳಗೆ ಬಂದಿದೆಯಂತೆ.
ವರದಿಯಲ್ಲಿ ಭಾರತೀಯ ಮೂಲದ ಒಂದು ಬಿಲಿಯನ್ ಅಮೆರಿಕ ಡಾಲರ್ ಹಾಗೂ ಹೆಚ್ಚಿನ ಆಸ್ತಿ ಹೊಂದಿರುವ ಬಿಲಿಯನೇರ್ ಗಳ ಪಟ್ಟಿ ಮಾಡಲಾಗಿದೆ. ಭಾರತದಲ್ಲಿ ನೋಟು ನಿಷೇಧದ ಕಾರಣಕ್ಕೆ ಈ ವರ್ಷ ತುಂಬ ಕಷ್ಟವಾಗಿತ್ತು ಎಂದು ಹ್ಯೂರನ್ ರಿಪೋರ್ಟ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಸಂಶೋಧಕ ಅನಸ್ ರಹಮಾನ್ ಜುನೈದ್ ಹೇಳಿದ್ದಾರೆ.[ಜಗತ್ತಿನ ಮೊದಲ ಟ್ರಿಲಿಯನೇರ್ ಆಗ್ತಾರಂತೆ ಬಿಲ್ ಗೇಟ್ಸ್!]
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ಸಿರಿವಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು ನೂರಾಮೂವತ್ತೆರಡು ಮಂದಿಯ ಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿರುವ ಮುಖೇಶ್ ಅಂಬಾನಿ, 1,74,400 ಕೋಟಿ ರುಪಾಯಿ ಆಸ್ತಿ (26 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ) ಇದೆ. ತೈಲ ವ್ಯವಹಾರದ ಜತೆಗೆ ಟೆಲಿಕಾಂ ಕ್ಷೇತ್ರದಲ್ಲೂ ಮುಖೇಶ್ ಅಂಬಾನಿ ಕೈ ಇರಿಸಿದ್ದು, ಐಡಿಯಾ, ಏರ್ ಟೆಲ್, ವೊಡಾ ಫೋನ್ ಕಂಪನಿಗಳಿಗೆ ಹೊಡೆತ ಬಿದ್ದಿದೆ.

1,01,000 ಕೋಟಿ ರುಪಾಯಿ ಆಸ್ತಿ ಮೌಲ್ಯ (14 ಬಿಲಿಯನ್ ಅಮೆರಿಕ ಡಾಲರ್) ಹೊಂದಿರುವ ಎಸ್ ಪಿ ಹಿಂದೂಜಾ ಮತ್ತು ಕುಟುಂಬ ಇದೆ. ಸನ್ ಫಾರ್ಮಾದ ಸ್ಥಾಪಕ ದಿಲೀಪ್ ಶಾಂಘ್ವಿ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ಆಸ್ತಿ ಮೌಲ್ಯದಲ್ಲಿ ಶೇ 22ರಷ್ಟು ಕುಸಿತವಾಗಿ 99,000 ಕೋಟಿ ಆಸ್ತಿ ಇದೆ. (14 ಬಿಲಿಯನ್ ಅಮೆರಿಕ ಡಾಲರ್).
ನಾಲ್ಕನೇ ಸ್ಥಾನದಲ್ಲಿರುವವರು ನಿರ್ಮಾಣ ವ್ಯವಹಾರದ ಪಲ್ಲೋನ್ಜಿ ಮಿಸ್ತ್ರಿ. ಅವರ ಆಸ್ತಿ ಮೌಲ್ಯ 82,700 ಕೋಟಿ (12 ಬಿಲಿಯನ್ ಅಮೆರಿಕ ಡಾಲರ್). ಟಾಟಾ ಮೋಟಾರ್ಸ್ ನ ಒಟ್ಟು ಮಾರುಕಟ್ಟೆ ಮೌಲ್ಯ ಹಾಗೂ ಪಲೋನ್ಜಿ ಮಿಸ್ತ್ರಿ ಅವರ ಆಸ್ತಿ ಮೌಲ್ಯ ಎರಡೂ ಸಮ. ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ನಿಂದ ತೆಗೆದು ಹಾಕಿದ್ದರಿಂದ ಇವರ ಆಸ್ತಿಯಲ್ಲೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಏಕೆಂದರೆ ಟಾಟಾ ಸನ್ಸ್ ನಲ್ಲಿ ಇವರ ಶೇ 18ರಷ್ಟು ಪಾಲಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications