ಉತ್ತರಪ್ರದೇಶದ ಮೌಗ್ಲಿ ಹುಡುಗಿಯ ಅಸಲಿ ಕಥೆ ಇಲ್ಲಿದೆ!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾದ ಮನುಷ್ಯರ ಸಂಪರ್ಕವೇ ಇಲ್ಲದೇ ಕೇವಲ ಮಂಗಗಳ ಜತೆ ಕಾಡಿನಲ್ಲಿ ಜೀವಿಸುತ್ತಿದ್ದ ಬಾಲಕಿಯೊಬ್ಬಳ ಕಥೆಯ ಅಸಲಿಯತ್ತು ಇಲ್ಲಿದೆ ಓದಿ..
ಲಕ್ನೋ, ಏಪ್ರಿಲ್ 09: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾದ ಮನುಷ್ಯರ ಸಂಪರ್ಕವೇ ಇಲ್ಲದೇ ಕೇವಲ ಮಂಗಗಳ ಜತೆ ಕಾಡಿನಲ್ಲಿ ಜೀವಿಸುತ್ತಿದ್ದ ಬಾಲಕಿಯೊಬ್ಬಳ ಕಥೆಯ ಅಸಲಿಯತ್ತು ಇಲ್ಲಿದೆ ಓದಿ..ಜಂಗಲ್ ಬುಕ್ ನ ಮೌಗ್ಲಿಯಂತೆ ಆಕೆಯನ್ನು ಕೋತಿಗಳು ಸಂರಕ್ಷಿಸಿಲ್ಲ. ಆಕೆ ಎಲ್ಲರಂತೆ ಈ ಸಮಾಜದಲ್ಲೇ ಹುಟ್ಟಿ, ಬೇಡವಾದ ಕೂಸು ಎಂದು ತಿಳಿದು ಬಂದಿದೆ.
ಬಹ್ರಿಚ್ ಗೆ ಸೇರಿದ ಕಟಾರ್ನಿಘಾಟ್ ಕಾಡಿನಲ್ಲಿ ಈಕೆ ಕಳೆದ ಎರಡು ತಿಂಗಳ ಹಿಂದೆ ಪೊಲೀಸರ ಕೈಗೆ ಸಿಕ್ಕಿದ್ದಳು. ಪುಟ್ಟ ಫ್ರಾಕ್ ತೊಟ್ಟಿದ್ದ ಆಕೆ ಸುತ್ತಾ ಮುತ್ತಾ ಮಂಗಗಳಿತ್ತು. ಹೆಡ್ ಕಾನ್ಸ್ ಟೇಬಲ್ ಸರ್ವಜೀತ್ ಯಾದವ್ ಅವರು, ಕಟಾರ್ನಿಘಾಟ್ ಸಂರಕ್ಷಿತಾರಣ್ಯದ ಮೋಟಿಪುರ್ ಭಾಗದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಹುಡುಗಿಯನ್ನು ನೋಡಿ, ರಕ್ಷಿಸಿದ್ದರು. [ಕಾಡಿನಲ್ಲಿ ಮಂಗಗಳ ಜತೆಗೆ ಪತ್ತೆಯಾದ ಬಾಲಕಿಗೆ ಮಾತೇ ಬರುತ್ತಿಲ್ಲ!]

ಮಂಗಗಳ ಕಥೆ ಹೇಗೆ ಹುಟ್ಟಿತು?: ಆಕೆ ಮಂಗಗಳ ಜತೆಗೆ ಬೆಳೆದಿದ್ದಾಳೆ, ಕೈ ಕಾಲು ಬಳಸಿ ಮಂಗಗಳಂತೆ ನಡೆಯುತ್ತಾಳೆ, ಮನುಷ್ಯರನ್ನು ಕಂಡರೆ ಭಯ ಬೀಳುತ್ತಿದ್ದಾಳೆ ಎಂಬ ಕಥೆ ಹೇಗೆ ಹುಟ್ಟಿತೋ ಗೊತಿಲ್ಲ. ಅಸಲಿಗೆ ಈ ಪುಟ್ಟ ಬಾಲಕಿ ಬುದ್ಧಿ ಮಾಂದ್ಯಳಾಗಿದ್ದು, ಈಕೆಯನ್ನು ಹೆತ್ತವರು ಅನಾಥಳನ್ನಾಗಿಸಿದ್ದಾರೆ. ಸರಿಯಾಗಿ ಆಹಾರ ಸೇವನೆ ಇಲ್ಲದೆ ನಿತ್ರಾಣಳಾಗಿದ್ದ ಈಕೆಗೆ ನಡೆಯಲು ಕಷ್ಟವಾಗಿದ್ದರಿಂದ ತೆವಳಲು ಆರಂಭಿಸಿದ್ದಾಳೆ. ಬಹುಶಃ ಇದನ್ನು ನೋಡಿ, ಅಕೆ ಮಂಗಗಳಂತೆ ಅಡುತ್ತಿದ್ದಾಳೆ ಎಂಬ ಸುದ್ದಿ ಹಬ್ಬಿರಬಹುದು.
ಸುರೇಶ್ ಯಾದವ್ ಆಕೆಯನ್ನು ರಕ್ಷಣೆ ಮಾಡಲು ಯತ್ನಿಸಿದಾಗ ಆಕೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಿದ್ದಳು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ನಿರ್ವಾಣ್ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಕೆಯ ನಡವಳಿಕೆ ಮಂಗಗಳ ರೀತಿಯಲ್ಲೇ ಇದ್ದು, ನಡೆಯುವುದು, ತಿನ್ನುವುದು ಮಂಗಗಳನ್ನೇ ಹೋಲುತ್ತಿದೆ. ಪ್ರಾಣಿಗಳನ್ನು ಕಂಡಾಗ ಆಕೆ ಓಡಿ ಹೋಗುತ್ತಿದ್ದಾಳೆ. ಆಕೆಗೀಗ ನಡೆದಾಡುವ ತರಬೇತಿ ನೀಡಿದ್ದರೂ ಆಕೆ ನಾಲ್ಕು ಕಾಲಿನಲ್ಲೇ ನಡೆಯುತ್ತಿದ್ದಾಳೆ ಎಂದು ಮುಖ್ಯ ವೈದ್ಯಾಧಿಕಾರಿ ಡಿ.ಕೆ ಸಿಂಗ್ ಹೇಳಿದ್ದು, ಈಕೆ ಮೌಗ್ಲಿ ಗರ್ಲ್ ಎಂಬ ಸುದ್ದಿ ಹಬ್ಬಲು ಇನ್ನಷ್ಟು ಕಾರಣವಾಗಿತ್ತು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications