ದೇಶಕ್ಕಿಲ್ಲ ಮಳೆ ಕೊರತೆ ಚಿಂತೆ, ರೈತರಿಗೂ ನಿಶ್ಚಿಂತೆ
ನವದೆಹಲಿ, ಜೂನ್ 02: ಈ ಬಾರಿ ಮುಂಗಾರು ಮಾರುತಗಳು ಉತ್ತಮ ಮಳೆ ಸುರಿಸಲಿದ್ದು ಯಾವ ಕೊರತೆ ಆಗುವುದಿಲ್ಲ ಎಂದು ಕೇಂದ್ರ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.
ಮಾನ್ಸೂನ್
ಮಾರುತಗಳು
ಇನ್ನು
ನಾಲ್ಕೈದು
ದಿನಗಳಲ್ಲಿ
ಕೇರಳವನ್ನು
ಪ್ರವೇಶ
ಮಾಡಲಿವೆ
ಎಂದು
ಹವಾಮಾನ
ಇಲಾಖೆ
ಗುರುವಾರ
ತಿಳಿಸಿದೆ.
ಮುಂಗಾರು
ಮಳೆ
ಒಂದು
ವಾರ
ತಡವಾಗಿ
ಕೇರಳ
ತೀರಕ್ಕೆ
ಆಗಮಿಸಲಿದೆ
ಎಂದು
ಹವಾಮಾನ
ಇಲಾಖೆ
ಹಿಂದೆ
ಹೇಳಿತ್ತು.
ಅದರಂತೆ
ಜೂನ್
ಆರಂಭದಲ್ಲಿ
ಆಗಮಿಸಬೇಕಿದ್ದ
ಮಾರುತಗಳು
ಒಂದು
ವಾರ
ತಡವಾಗಿಯೇ
ಪ್ರವೇಶ
ಮಾಡುತ್ತಿವೆ.[ಬೆಂಗಳೂರನ್ನು
ನಡುಗಿಸಿದ
ಮಳೆ]
ದೇಶದ ರೈತರ ದೃಷ್ಟಿಯಲ್ಲಿ ಇದು ಸಿಹಿ ಸುದ್ದಿಯಾಗಿದ್ದು ಮುಂಗಾರು ಬೆಳೆಗಳ ಮೇಲೆ ಪರಿಣಾಮ ಬೀರಲಿದೆ. ಮಳೆ ಕೊರತೆ ಎದುರಿಸುತ್ತಿದ್ದ ರಾಜ್ಯಗಳು ಈ ಬಾರಿ ವರುಣನ ಕೃಪೆಗೆ ಪಾತ್ರವಾಗಲಿದೆ.[ಈ ಬಾರಿ ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಮುಂಗಾರು ಮಳೆ]
ಹವಾಮಾನ
ಇಲಾಖೆ
ಸೂಚನೆಗಳು
*
ಈ
ವರ್ಷ
ಶೇ.96ರಷ್ಟು
ಸಾಧಾರಣ
ಅಥವಾ
ಅದಕ್ಕಿಂತ
ಹೆಚ್ಚು
ಮಳೆಯಾಗುವ
ಸಾಧ್ಯತೆ
ಇದೆ.
* ಮುಂದಿನ ನಾಲ್ಕೈದು ದಿನಗಳಲ್ಲಿ ಮಾನ್ಸೂನ್ ಕೇರಳ ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, ಜುಲೈ ಮತ್ತು ಆಗಸ್ಟ್ನಲ್ಲಿ ಸಾಕಷ್ಟು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕ ಲಕ್ಷ್ಮಣ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
* ಜುಲೈನಲ್ಲಿ ಸರಾಸರಿ 107% ರಷ್ಟು, ಆಗಸ್ಟ್ನಲ್ಲಿ 104% ರಷ್ಟು ಮಳೆ ಆಗಲಿದೆ.
* ಜೂನ್ 5 ಅಥವಾ 6ರಂದು ದಕ್ಷಿಣ ಒಳನಾಡು ಪ್ರದೇಶಗಳಿಗೆ ಮುಂಗಾರು ಪ್ರವೇಶಿಸಲಿದ್ದು, ಈ ಪ್ರದೇಶದಲ್ಲಿ ಸೆಪ್ಟೆಂಬರ್ ಅಂತ್ಯದವರೆಗೂ ಮಳೆಯಾಗುವ ಸಾಧ್ಯತೆಗಳು ಹೆಚ್ಚಿದೆ.
* ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಮಳೆಯಾಗಲಿದೆ.
* ದೇಶದ ವಾಯುವ್ಯ ಭಾಗದಲ್ಲಿ ಸರಾಸರಿ 108%ರಷ್ಟು, ಮಧ್ಯ ವಲಯದಲ್ಲಿ 113%ರಷ್ಟು, ಈಶಾನ್ಯ ವಲಯಗಳಲ್ಲಿ 94%ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದ್ದಾರೆ.
* ಕೇರಳವನ್ನು ಪ್ರವೇಶ ಮಾಡಿದ ಮಾರುತಗಳು ವೇಗವಾಗಿ ಮುಂದಕ್ಕೆ ಬರಲಿವೆ.
* ಎಲ್ ನಿನೋದ ಯಾವ ಅಪಾಯವೂ ಈ ಬಾರಿ ಇಲ್ಲ.