ರಷ್ಯಾ, ಉಕ್ರೇನ್ ಸಂಘರ್ಷದ ನಡುವೆ ರಸಗೊಬ್ಬರ ಸಬ್ಸಿಡಿಯಲ್ಲಿ ಮೋದಿ ಸರ್ಕಾರದ ಸಮತೋಲಿತ ಕ್ರಮ

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಜಾಗತಿಕವಾಗಿ ರಸಗೊಬ್ಬರ ಬೆಲೆಯಲ್ಲಿ ಗಣನೀಯ ಏರಿಕೆಗೆ ಕಾರಣವಾಯಿತು, ಆಮದು ಮೇಲೆ ತೀವ್ರ ಅವಲಂಬನೆ ಹೊಂದಿರುವ ಭಾರತದ ಮೇಲೆ ಇದು ತೀವ್ರವಾಗಿ ಪರಿಣಾಮವನ್ನು ಬೀರಿತು.

ವಿಶ್ವದಲ್ಲಿಯೇ ರಷ್ಯಾ ನೈಟ್ರೋಜನ್, ಪೊಟ್ಯಾಸಿಕ್ ಮತ್ತು ರಂಜಕ ರಸಗೊಬ್ಬರ ರಫ್ತು ಮಾಡುವ ಪ್ರಮುಖ ದೇಶ, ರಸಗೊಬ್ಬರ ಪೂರೈಕೆಯಲ್ಲಿ ಆಡಚಣೆ ಉಂಟಾಯಿತು, ಇದು ಆಮದು ಮಾಡಿಕೊಳ್ಳುವ ಭಾರತದಂತಹ ದೇಶಗಳಲ್ಲಿ ಬೆಲೆ ಏರಿಕೆಗೆ ಕಾರಣವಾಯಿತು.

Modi Governments Balancing Act On Fertilizer Subsidies Amidst The Russia Ukraine Crisis

ಇದಕ್ಕೆ ಪ್ರತಿಯಾಗಿ ಮೋದಿ ಸರ್ಕಾರದ ಸಮತೋಲಿತ ಕ್ರಮವನ್ನು ಕೈಗೊಂಡಿತು, ರೈತರನ್ನು ಇದರಿಂದ ರಕ್ಷಣೆ ಮಾಡಲು ಹೆಜ್ಜೆ ಇಟ್ಟಿತು.

ರೈತರಿಗೆ ರಕ್ಷಾ ಕವಚ: ಸಬ್ಸಿಡಿ ಅಂಕಿ

2.25 ಲಕ್ಷ ಕೋಟಿ (2022-23). ಇದು ಭಾರತ ಸರ್ಕಾರ ಗಗನಕ್ಕೇರುವ ರಸಗೊಬ್ಬರದ ಬೆಲೆಗಳಿಂದ ರೈತರನ್ನು ರಕ್ಷಣೆ ಮಾಡಲು ಖರ್ಚು ಮಾಡಿದ ಅನುದಾನ. ಅತಿ ಹೆಚ್ಚಿನ ಅನುದಾನ ಹಂಚಿಕೆ ರೈತರು ಅಂತರಾಷ್ಟ್ರೀಯ ಬೆಲೆ ಏರಿಕೆಯಿಂದ ಕಂಗಾಲಾಗದಂತೆ ತಡೆಯಿತು.

1.89 ಲಕ್ಷ ಕೋಟಿ (2023-24 ಪರಿಷ್ಕೃತ ಅಂದಾಜು): ಆದರೂ ಸಹ ರಸಗೊಬ್ಬರ ಸಬ್ಸಿಡಿಯಲ್ಲಿ ಮಾಡಿದ ಯೋಜನೆಗಿಂತ ಸ್ವಲ್ಪ ಕಡಿತವಾಯಿತು (2.25 ಲಕ್ಷ ಕೋಟಿ), ರೈತರಿಗೆ ನೆಮ್ಮದಿ ನೀಡಲು ಮೋದಿ ಸರ್ಕಾರ ಈಗಲೂ ಪರಿಷ್ಕೃತ ಅಂದಾಜು ಮೊತ್ತ ಹೆಚ್ಚಿಸಲು ಬದ್ಧವಾಗಿದೆ.

Modi Governments Balancing Act On Fertilizer Subsidies Amidst The Russia Ukraine Crisis

ಹಣಕಾಸಿನ ಪರಿಣಾಮ ಮತ್ತು ವ್ಯಾಪಾರ ವಹಿವಾಟುಗಳು

ಈ ಬೃಹತ್ ಸಬ್ಸಿಡಿಗಳು ರೈತರನ್ನು ಬೆಲೆ ಏರಿಕೆಯಿಂದ ರಕ್ಷಣೆ ಮಾಡಿದವು, ಅವು ವೆಚ್ಚ ರೂಪದಲ್ಲಿ ಬಂದವು. ಉದ್ಯೋಗ ಸೃಷ್ಟಿ, ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕಿದ್ದ ಅನುದಾನವನ್ನು ರಸಗೊಬ್ಬರ ಸಬ್ಸಿಡಿ ಯೋಜನೆಗಳಿಗೆ ಬಳಸಬೇಕಾಯಿತು.

ವ್ಯಾಪಾರ ಉದಾಹರಣೆಗಳು, ಉದ್ಯೋಗ ಸೃಷ್ಟಿ & ಮೂಲ ಸೌಕರ್ಯ: ರಸಗೊಬ್ಬರ ಸಬ್ಸಿಡಿಗೆ ಮೀಸಲಿಟ್ಟ ಅನುದಾನವನ್ನು ಹೊಸ ಉದ್ಯೋಗ ಸೃಷ್ಟಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗಾಗಿ ಬಳಸಬೇಕಿತ್ತು, ಆದರೆ ರೈತರ ತತ್‌ಕ್ಷಣದ ಪರಿಹಾರಕ್ಕೆ ಪ್ರಾಮುಖ್ಯತೆ ನೀಡಲಾಯಿತು.

ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು: ಹಿಂದುಳಿದ ಸಮುದಾಯಗಳನ್ನು ಮೇಲೆತ್ತಲು ಗುರಿ ಹೊಂದಿದ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ನಿಧಾನಗತಿಯಲ್ಲಿ ಸಾಗಿತು, ಸರ್ಕಾರ ಸಂಪನ್ಮೂಲಗಳನ್ನು ಜಾಗತಿಕ ಮಾರುಕಟ್ಟೆಯ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಅನುದಾನವನ್ನು ಕೃಷಿ ಕ್ಷೇತ್ರದ ರಕ್ಷಣೆಗೆ ಬಳಸಿತು.

ರಾಜತಾಂತ್ರಿಕರೆ ಮತ್ತು ಪೂರೈಕೆ ಜಾಲ

ಭಾರತ ಕೇವಲ ಸಬ್ಸಿಡಿಗಳ ಮೇಲೆ ಅವಲಂಬಿತವಾಗಲಿಲ್ಲ, ರಷ್ಯಾದ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಗಟ್ಟಿಗೊಳಿಸಿತು. ಮೋದಿ ಸರ್ಕಾರ ರಷ್ಯಾ ಜೊತೆಗಿನ ರಸಗೊಬ್ಬರ ಪೂರೈಕೆಯನ್ನು ಸುಗಮಗೊಳಿಸಿತು. ಬೌಗೋಳಿಕ ಒತ್ತಡಗಳ ನಡುವೆಯೂ ಪೂರೈಕೆ ಖಚಿತವಾಗುವಂತೆ ನೋಡಿಕೊಂಡಿತು. ಭಾರತ ರಷ್ಯಾದಿಂದ ರಸಗೊಬ್ಬರ ಪೂರೈಕೆಯನ್ನು ಹೆಚ್ಚಿಸಿದೆ, ಇದು ಪೂರೈಕೆ ಜಾಲದಲ್ಲಿ ಅಡಚಣೆ ಉಂಟಾಗದಂತೆ ತಡೆದಿದೆ.

ದೀರ್ಘಾವಧಿ ತಂತ್ರ

ಸಬ್ಸಿಡಿ ಮೂಲಕ ತತ್ ಕ್ಷಣದ ಪರಿಹಾರ ಮಾತ್ರವಲ್ಲ, ಮೋದಿ ಸರ್ಕಾರ ದೀರ್ಘಾವಧಿ ತಂತ್ರಗಳನ್ನು ಗುರುತಿಸಿದೆ, ಅದರ ಮಹತ್ವವನ್ನು ಅರಿತಿದೆ. ಇವುಗಳಲ್ಲಿ ಸ್ಥಳೀಯವಾಗಿ ಉತ್ಪಾದನೆ ಮಾಡಿ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುವುದು ಸೇರಿದೆ. ಸಮರ್ಥನೀಯ ಕೃಷಿ ಪದ್ಧತಿಗಳ ಮೂಲಕ ರಸಗೊಬ್ಬರದ ಅತಿಯಾದ ಬಳಕೆ ಕಡಿಮೆ ಮಾಡುವುದು, ಮೂಲ ಸೌಲಭ್ಯದ ಮೇಲೆ ಹೆಚ್ಚು ಹೂಡಿಕೆ ಮಾಡಿ ಪೂರೈಕೆ ಜಾಲ ಚೇತರಿಸಿಕೊಳ್ಳುವಂತೆ ಮಾಡುವುದು ಸೇರಿದೆ.

ಅಂತಿಮ ಷರಾ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಸೂಕ್ಷ್ಮವಾದ ಸಮತೋಲಿತ ನಿರ್ವಹಣೆ, ಸಬ್ಸಿಡಿಗಳ ಮೂಲಕ ರೈತರು ಮತ್ತು ಸಾಮಾನ್ಯ ಜನರು ರಸಗೊಬ್ಬರದ ಬೆಲೆ ಏರಿಕೆಗೆ ಸಿಲುಕದಂತೆ ರಕ್ಷಿಸಿದೆ. ಅಲ್ಲದೇ ಬೇರೆ ಕ್ಷೇತ್ರದ ಅಭಿವೃದ್ಧಿಗೆ ವ್ಯಾಪಾರ ವಹಿವಾಟಿನಿಂದ ಪರಿಣಾಮ ಉಂಟಾಗದಂತೆ ಎಚ್ಚರವಹಿಸಿದೆ. ಆಹಾರ ಸುರಕ್ಷತೆ ಮತ್ತು ಆರ್ಥಿಕ ಸ್ಥಿರತೆಯತ್ತ ಗಮನ ಈಗಲೂ ಮುಂದುವರೆದಿದೆ, ದೀರ್ಘಾವಧಿಯಲ್ಲಿ ಪೂರೈಕೆಗೆ ಬೇರೆ ದೇಶಗಳ ಅವಲಂಬನೆ ತಪ್ಪಿಸಲು, ರಸಗೊಬ್ಬರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಹೆಜ್ಜೆಗಳನ್ನು ಇಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+