Get Updates
Get notified of breaking news, exclusive insights, and must-see stories!

ಮಣಿಪುರ ಹಿಂಸಾಚಾರ: ಸಾವಿರಾರು ಮಹಿಳೆಯರ ಆಕ್ರೋಶಕ್ಕೆ ಮಣಿದು, 12 ಬಂಡುಕೋರರ ಬಿಡುಗಡೆ!

ಇಂಫಾಲ್, ಜೂನ್. 25: ಮಣಿಪುರದ ಇಂಫಾಲ್ ಪೂರ್ವದಲ್ಲಿ ಭದ್ರತಾ ಪಡೆಗಳ ನೇತೃತ್ವದ ಸೇನಾ ಕಾರ್ಯಾಚರಣೆಯನ್ನು ಆಕ್ರೋಶದಿಂದ ಕೂಡಿದ್ದ ಮಹಿಳೆಯರ ಗುಂಪು ತಡೆದಿದೆ. ನಿರ್ದಿಷ್ಟ ಗುಪ್ತಚರದ ಮಾಹಿತಿ ಮೇರೆಗೆ, ಶನಿವಾರ ಭದ್ರತಾ ಪಡೆಗಳು ಇಂಫಾಲ್ ಪೂರ್ವದ ಇಥಮ್ (ಆಂಡ್ರೋದಿಂದ 6 ಕಿಮೀ ಪೂರ್ವ) ಗ್ರಾಮದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

1,200 ರಿಂದ 1,500 ಮಹಿಳೆಯರ ನೇತೃತ್ವದ ಗುಂಪು ಈ ವೇಳೆ ಭದ್ರತಾ ಪಡೆಗಳನ್ನು ಸುತ್ತುವರೆದಿದೆ. ಈ ಪ್ರದೇಶದಲ್ಲಿ ಇತರ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಶೋಧ ಕೈಗೊಳ್ಳುವ ಕಾಣದಿಂದ ಸೇನೆ ಕಾರ್ಯಾಚರಣೆ ನಡೆಸಲು ಬಂದಿತ್ತು. ಆದರೆ, ಮಹಿಳೆಯರು ಮತ್ತು ಭದ್ರತಾ ಪಡೆಗಳ ನೇತೃತ್ವದ ಜನಸಮೂಹದ ನಡುವಿನ ಘರ್ಷಣೆಯ ನಂತರ ಸೇನೆ "ಪ್ರಬುದ್ಧ ನಿರ್ಧಾರ" ತೆಗೆದುಕೊಂಡಿದೆ.

Mob of 1200-1500 Led by Women Stops Military Operation, Army Releases 12 Militants

ಉಗ್ರಗಾಮಿ ಗುಂಪು ಕಾಂಗ್ಲೇ ಯಾವೋಲ್ ಕನ್ನಾ ಲುಪ್ (KYKL) ನ ಒಂದು ಡಜನ್ ಸದಸ್ಯರು ಅಡಗಿಕೊಂಡಿದ್ದ ಇಂಫಾಲ್ ಪೂರ್ವದ ಇಥಾಮ್ ಗ್ರಾಮವನ್ನು ಸುತ್ತುವರೆದಿದ್ದ ಸೇನೆ, ಮಹಿಳೆಯರ ಘರ್ಷಣೆಯ ನಂತರ, ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳೊಂದಿಗೆ 12 ಬಂಡುಕೋರರನ್ನು ಬಿಟ್ಟು ಹೋಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

2015 ರಲ್ಲಿ 6 ಡೋಗ್ರಾ ಘಟಕದ ಹೊಂಚುದಾಳಿ ಸೇರಿದಂತೆ ಹಲವಾರು ದಾಳಿಗಳಲ್ಲಿ ಕಾಂಗ್ಲೇ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್) ಮೈಟಿ ಉಗ್ರಗಾಮಿ ಗುಂಪು ಭಾಗಿಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ನಿರ್ದಿಷ್ಟ ಗುಪ್ತಚರದ ಮಾಹಿತಿ ಮೇರೆಗೆ ಶನಿವಾರ ಬೆಳಗ್ಗೆ ಭದ್ರತಾ ಪಡೆಗಳಿಂದ ಇಂಫಾಲ್ ಪೂರ್ವದ ಇಥಮ್ (06 ಕಿಮೀ ಪೂರ್ವ ಆಂಡ್ರೋ) ಗ್ರಾಮದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

"ಮಹಿಳೆಯರ ನೇತೃತ್ವದ ಜನಸಮೂಹ ಕೋಪಗೊಂಡು ಭದ್ರತಾ ಪಡೆಗಳ ವಿರುದ್ಧ ಘರ್ಣಣೆ ನಡೆಸಿತು. ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆಯ ಕಮಾಂಡರ್‌ನ ಪ್ರಬುದ್ಧ ನಿರ್ಧಾರದ ನಂತರ ಮತ್ತು ಈ ಕ್ರಮದಿಂದಾಗಿ ಸಂಭವನೀಯ ಸಾವುನೋವುಗಳನ್ನು ತಪ್ಪಿಸಲು ಎಲ್ಲರನ್ನು ಬಿಡುಗಡೆ ಮಾಡಬೇಕಾಯಿತು. ಗ್ರಾಮದಲ್ಲಿ ನೆಲೆಸಿರುವವರಲ್ಲಿ ಸ್ವಯಂ ಘೋಷಿತ ಲೆಫ್ಟಿನೆಂಟ್ ಕರ್ನಲ್ ಮೊಯಿರಾಂಗ್ಥೆಮ್ ತಂಬಾ ಅಲಿಯಾಸ್ ಉತ್ತಮ್, ಡೋಗ್ರಾ ಹೊಂಚುದಾಳಿ ದುರಂತದ ಮಾಸ್ಟರ್ ಮೈಂಡ್ ಆಗಿರುವ ವಾಂಟೆಡ್ ಭಯೋತ್ಪಾದಕನಾಗಿದ್ದ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯರ ನೇತೃತ್ವದ 1,500 ಕ್ಕೂ ಹೆಚ್ಚಿನ ಜನಸಮೂಹವು ಸೇನೆಯ ಅಂಕಣವನ್ನು ಸುತ್ತುವರೆತ್ತು. ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರಿಯುವುದನ್ನು ತಡೆಯಿತು .ಮಣಿಪುರದಲ್ಲಿ ನಡೆಯುತ್ತಿರುವ ಅಶಾಂತಿಯ ಸಂದರ್ಭದಲ್ಲಿ ಯಾವುದೇ ಹಾನಿಯನ್ನು ತಪ್ಪಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸೇನೆಯು ಗ್ರಾಮದಿಂದ ನಿರ್ಗಮಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

ಈಶಾನ್ಯ ರಾಜ್ಯದಲ್ಲಿ ಇದುವರೆಗೆ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಮೇ 3 ರಂದು ಮೊದಲು ಘರ್ಷಣೆಗಳು ಪ್ರಾರಂಭವಾದವು.

ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೇಯಿ ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರಾದ ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ ಮತ್ತು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+